ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ 1,100 ಆಸ್ತಿಗಳಿಗೆ ಹಾನಿ
ಬೆಂಗಳೂರು, ಮೇ 15: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಎಲಿವೇಟೆಡ್ ಕಾರಿಡಾರ್ ಯೋಜನೆ ವಿರುದ್ಧ ಸಾಕಷ್ಟು ಹೋರಾಟಗಳು ನಡೆಯುತ್ತಿವೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಶಾಂತಿನಗರದಿಂದ ಬನ್ನೇರುಘಟ್ಟ ಮಾರ್ಗದಲ್ಲಿ ಅಧ್ಯಯನ ತಂಡ ತೆರಳಿತ್ತು. ಈ ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ ಮೊದಲಿಗೆ 12 ಮೀಟರ್ ಅಗಲ ಎಂದು ಹೇಳಲಾಗಿತ್ತು ಇದೀಗ 19 ಮೀಟರ್ ಅಗಲದ ಕಾರಿಡಾರ್ ನಿರ್ಮಿಸುತ್ತಿರುವ ಕಾರಣ ಬಿಟಿಎಸ್ ಮುಖ್ಯರಸ್ತೆಯಲ್ಲಿ ಸಾಕಷ್ಟು ಆಸ್ತಿಗಳಿಗೆ ಹಾನಿಯಾಗಲಿದೆ.
ಎಲಿವೇಟೆಡ್ ಕಾರಿಡಾರ್ನಿಂದ ಒಟ್ಟು 1100 ಆಸ್ತಿಗಳಿಗೆ ಹಾನಿ
ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ 1,100 ಆಸ್ತಿಗಳಿಗೆ ಹಾನಿಯಾಗಲಿದೆ ಎಂದು ದೂರಿದ್ದಾರೆ. ಹೆಬ್ಬಾಳ, ಸಿಲ್ಕ್ ಬೋರ್ಡ್ ನಡುವೆ ಒಟ್ಟು 22 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಎಲಿವೇಟೆಡ್ ಕಾರಿಡಾರ್ ಯೋಜನೆಯಲ್ಲಿ 250 ಆಸ್ತಿಗಳಿಗೆ ಹಾನಿಯಾಗಲಿದೆ.
'ಎಲಿವೇಟೆಡ್ ಕಾರಿಡಾರ್ ಬೇಡ'ಹೋರಾಟಗಾರರನ್ನು ಚರ್ಚೆಗೆ ಆಹ್ವಾನಿಸಿದ ಸಿಎಂ
ಆಸ್ತಿ ಮಾಲಿಕರಿಗಿಲ್ಲ ಮಾಹಿತಿ
ಒಟ್ಟು 1100 ಆಸ್ತಿಗಳಿಗೆ ಹಾನಿಯಾಗುತ್ತಿದೆ ಆದರೆ ಕೆಲವು ಮಾಲಿಕರಿಗೆ ಈ ಕುರಿತು ಇನ್ನೂ ಮಾಹಿತಿ ಇಲ್ಲ, ಈಗಾಗಲೇ ಹಲವು ಆಸ್ತಿಗಳನ್ನು ಗುರುತಿಸಲಾಗಿದೆ. ಬಣ್ಣವನ್ನು ಕೂಡ ಹಚ್ಚಲಾಗಿದೆ ಆದರೆ ಸ್ಥಳೀಯರಿಗೆ ಇನ್ನೂ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಎಲಿವೇಟೆಡ್ ಕಾರಿಡಾರ್ ಯೋಜನೆಯ ಜಯಮಹಲ್ ಭಾಗದಲ್ಲೂ ಕೂಡ ಇದೇ ಮಾದರಿಯಲ್ಲಿ ಬಣ್ಣ ಬಳಿಯಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೂ ಇದರಿಂದ ತೊಂದರೆಯಾಗಲಿದೆ. ಈ ವಿಚಾರ ಕುರಿತು ಬೆಂಗಳೂರು ಬಸ್ ಪ್ರಯಾಣಿಕರ ಸಂಘ ಹಲವು ಮಾಹಿತಿಗಳು ಕಲೆ ಹಾಕಿದೆ.
ಎಲಿವೇಟೆಡ್ ಕಾರಿಡಾರ್ನಿಂದ ಮರಗಳಿಗಷ್ಟೇ ಅಲ್ಲ ಬಫರ್ ವಲಯಕ್ಕೂ ಅಪಾಯ
ಮೇ1ಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಕೆ
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಜೊತೆಗೂಡಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಆಸ್ತಿಯ ಖರೀದಿಯನ್ನು ಪಾರದರ್ಶಕವಾಗಿ ಮಾಡಬೇಕು, ಜನರಿಗೆ ಆತಂಕತರುವಂತಹ ಕೆಲಸ ಮಾಡಬಾರದು ಎಂದು ಕಾರ್ಯಕರ್ತರು ಮನವಿ ಮಾಡಿದ್ದಾರೆ. ಈಗಾಗಲೇ ಸಮೀಕ್ಷೆ ನಡೆಸುತ್ತಿದ್ದು ಅಂತಿಮವಾಗಿ ಮೇ 18ಕ್ಕೆ ವರದಿಯನ್ನು ಸರ್ಕಾರದ ಮುಂದೆ ಇಡಲಿದ್ದೇವೆ ಎಂದು ತಿಳಿಸಿದ್ದಾರೆ.
ಎಲಿವೇಟೆಡ್ ಕಾರಿಡಾರ್ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?
ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಹೈಕೋರ್ಟ್ ತಡೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನಿತ್ಯ
ಲಕ್ಷಾಂತರ
ವಾಹನಗಳಿಂದ
ಗಿಜಿಗುಡುತ್ತಿರುವ
ಬೆಂಗಳೂಇನ
ಸಂಚಾರ
ದಟ್ಟಣೆಯನ್ನು
ಕಡಿಮೆ
ಮಾಡುವ
ಉದ್ದೇಶದಿಂದ
ಎಲಿವೇಟೆಡ್
ಕಾರಿಡಾರ್
ಯೋಜನೆ
ಆರಂಭಿಸಲಾಗಿತ್ತು.
ನಮ್ಮ
ಬೆಂಗಳೂರು
ಫೌಂಡೇಷನ್
ಮತ್ತು
ಸಿಟಿಜನ್
ಆ್ಯಕ್ಷನ್
ಫೋರಂ
ಮತ್ತಿತರ
ಸಂಸ್ಥೆಗಳು
ಸಲ್ಲಿಸಿದ್ದ
ಮಧ್ಯಾಂತರ
ಅರ್ಜಿಯನ್ನು
ಆಲಿಸಿದ
ಹಂಗಾಮಿ
ಸಿಜೆ
ಎಲ್.
ನಾರಾಯಣಸ್ವಾಮಿ
ಮತ್ತು
ನ್ಯಾ.ಪಿ.ಎಸ್.
ದಿನೇಶ್
ಕುಮಾರ್
ಅವರಿದ್ದ
ವಿಭಾಗೀಯ
ಪೀಠ
ಶುಕ್ರವಾರ
ಈ
ಆದೇಶ
ಹೊರಡಿಸಿ
ವಿಚಾರಣೆಯನ್ನು
ಜೂ.3ಕ್ಕೆ
ಮುಂದೂಡಿದೆ.
ಹೆಬ್ಬಾಳದ
ಬ್ಯಾಪ್ಟಿಸ್ಟ್
ಆಸ್ಪತ್ರೆಯಿಂದ
ಮೇಕ್ರಿ
ಸರ್ಕಲ್
ಮಾರ್ಗವಾಗಿ
ಸಿಲ್ಕ್ಬೋರ್ಡ್ವರೆಗೆ
ಎಲಿವೇಟೆಡ್
ಕಾರಿಡಾರ್
ನಿರ್ಮಿಸಲು
ಸರಕಾರ
ಟೆಂಡರ್
ಕರೆದಿದೆ.
ಯೋಜನೆಗೆ
ಕರೆದಿರುವ
ಟೆಂಡರ್
ಸರಕಾರ
ಅಂತಿಮಗೊಳಿಸುವಂತಿಲ್ಲ.
ಒಂದು
ವೇಳೆ
ಅಂತಿಮಗೊಳಿಸಿದರೂ
ಮುಂದಿನ
ವಿಚಾರಣೆವರೆಗೆ
ಯಾವುದೇ
ಕಾಮಗಾರಿಯನ್ನು
ಕೈಗೆತ್ತಿಕೊಳ್ಳುವಂತಿಲ್ಲ
ಎಂದು
ನ್ಯಾಯಾಲಯ
ಮಧ್ಯಾಂತರ
ಆದೇಶಿಸಿ
ವಿಚಾರಣೆ
ಮುಂದೂಡಿದೆ.