ಚುನಾವಣೆ ಬಿಸಿಯಲ್ಲಿ ಬೆಂಗಳೂರು ಕರಗ
ಬೆಂಗಳೂರು, ಏ.7: ನಗರದ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇಗುಲದಲ್ಲಿ ಏ.7 ರಿಂದ ಏ.17ರ ವರಗೆ 'ಬೆಂಗಳೂರು ಕರಗ' ಮಹೋತ್ಸವ ನಡೆಯಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಬಿ.ಎನ್.ಕೃಷ್ಣಯ್ಯ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ಹಾಗೂ ಧರ್ಮರಾಯಸ್ವಾಮಿ ದೇವಾಲಯ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರು ಕರಗ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಏ.7ರಂದು
ಧ್ವಜಾರೋಹಣದಿಂದ
ಪ್ರಾರಂಭಗೊಂಡ
ಕರಗ
ಮಹೋತ್ಸವದ
ಪ್ರತಿದಿನ
ವಿಶೇಷ
ಪೂಜೆಗಳು
ನಡೆಯಲಿದೆ.
ಏ.15ರಂದು
ಕರಗ
ಮಹೋತ್ಸವ
ಹಾಗೂ
ಧರ್ಮರಾಯಸ್ವಾಮಿ
ಮಹಾ
ರಥೋತ್ಸವ
ಜರುಗಲಿದೆ.
ಏ.17
ರಂದು
ಧ್ವಜಾವರೋಹಣದೊಂದಿಗೆ
ಮಹೋತ್ಸವಕ್ಕೆ
ತೆರೆ
ಎಳೆಯಲಾಗುವುದು
ಎಂದು
ಬಿ.ಎನ್.ಕೃಷ್ಣಯ್ಯ
ತಿಳಿಸಿದರು.
ಸುಮಾರು 800 ಮಂದಿ ಪೊಲೀಸ್ ಸಿಬ್ಬಂದಿಯನ್ನು ಕರಗ ಮಹೋತ್ಸವದ ಭದ್ರತೆಗೆ ಆಯೋಜಿಸಲಾಗಿದೆ. ಇದರ ಜೊತೆಗೆ ಸ್ಕೌಟ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಈ ವರ್ಷ ಹೆಚ್ಚಿನ ವಿಜೃಂಭಣೆಯಿಲ್ಲದೆ, ಸರಳವಾಗಿ ನಡೆಸಲಾಗುವುದೆಂದು ಅವರು ತಿಳಿಸಿದರು.
ಕರಗ ಮಹೋತ್ಸವದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಚುನಾವಣೆ ಆಯೋಗದಿಂದ ಅನುಮತಿ ಪಡೆದ ನಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಭಕ್ತಾದಿಗಳು ಯಾವುದೇ ಗೊಂದಲವಿಲ್ಲದೆ ದೇಗುಲಕ್ಕೆ ಭೇಟಿ ನೀಡಿ ಉತ್ಸಾಹದಿಂದ ಕರಗ ಮಹೋತ್ಸವದಲ್ಲಿ ಪಾಲ್ಗೊಳ್ಳಬಹುದು ಎಂದು ಕರಗ ಮಹೋತ್ಸವ ಆಯೋಜನಾ ಸಮಿತಿ ಅಧ್ಯಕ್ಷೆ ಇಂದಿರಾ ಎಸ್ ಎನ್ ಹೇಳಿದ್ದಾರೆ.
ಮಹಾಭಾರತದ ಸಂದರ್ಭದಲ್ಲಿ ತ್ರಿಪುರಾಸುರನ ಸಂಹಾರಕ್ಕೆ ದ್ರೌಪದಿ ಮಾನಸ ಪುತ್ರರಾಗಿ ಜನಿಸಿದ ವೀರಕುಮಾರರು ದೈತ್ಯ ಸಂಹಾರ ಮಾಡುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದಲ್ಲಿ ತನ್ನ ಮಕ್ಕಳನ್ನು ನೋಡಲು ದ್ರೌಪದಿ ಆಗಮಿಸುವುದನ್ನು ಸಂಭ್ರಮದಿಂದ ಹಬ್ಬದಂತೆ ಆಚರಿಸಲಾಗುತ್ತದೆ. ಪಂಚಾಂಗ ನೋಡಿ
ಬಸವನಗುಡಿಯಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದ ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಜನಾಂಗದ ಬೃಹತ್ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಗಳ ಸಮುದಾಯಕ್ಕೆ ಈ ಅಭಯ ನೀಡಿದ್ದರು. ಕರಗ ಆಚರಣೆಗೆ ಸರ್ಕಾರದ ವತಿಯಿಂದ 1 ಕೋಟಿ ರೂ ಅನುದಾನ ಘೋಷಿಸಿದ್ದರು.