ಇನ್ಮುಂದೆ ಎಟಿಎಂ ವಾಹನಕ್ಕೆ ಗೈಡ್ಲೈನ್, ಚುನಾವಣಾ ಆಯೋಗ ಸೂಚನೆ
ಬೆಂಗಳೂರು, ಮಾರ್ಚ್ 6: ಇನ್ನುಮುಂದೆ ಎಟಿಎಂ ವಾಹನಗಳಿಗೂ ಗೂಡ ಕೆಲವು ನಿಯಮಗಳನ್ನು ಚುನಾವಣಾ ಆಯೋಗ ವಿಧಿಸಿದೆ. ಈ ಕುರಿತು ಸುತ್ತೋಲೆಯನ್ನು ಎಲ್ಲಾ ಬ್ಯಾಂಕ್ಗಳಿಗೂ ಕಳುಹಿಸಲಾಗಿದೆ.
ಲೋಕಸಭಾ ಚುನಾವಣೆ ಅಕ್ರಮ ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅನುಮಾನಾಸ್ಪದ ಬ್ಯಾಂಕ್ ಖಾತೆಗಳಲ್ಲಿನ ಹಣ ವರ್ಗಾವಣೆ ಮೇಲೆ ನಿಗಾ ಇಡಲು ಆರಂಭಿಸಿರುವ ಚುನಾವಣಾ ಆಯೋಗ ಈ ಎಲ್ಲಾ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಿಸುವ ವಾಹನಗಳಿಗೆ ಮಾರ್ಗಸೂಚಿ ಹೊರಡಿಸಿದೆ.
ಎಟಿಎಂ ಸಾಫ್ಟ್ವೇರ್ ಅಪ್ಡೇಟ್ ಮಾಡಿ: ಆರ್ಬಿಐ ಕೊನೆ ಎಚ್ಚರಿಕೆ
ರ ವಿಧಾನಸಭಾ ಚುನಾವಣೆ,ರ ಲೋಕಸಭಾ ಚುನಾವೆ ವೇಳೆ ಅನೇಕ ಅಕ್ರಮ ಹಣ ಸಾಗಾಟ ನಡೆದಿತ್ತು. ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಪ್ರಮುಖವಾಗಿ ಬಳಸಿಕೊಂಡಿದ್ದರು.
ಬ್ಯಾಂಕ್ಗಳ ಎಟಿಎಂಗಳಿಗೆ ಹಣ ತುಂಬಿಸಲು ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಾಹನಗಳನ್ನು ಬಳಸಿಕೊಳ್ಳುತ್ತಿವೆ. ರಾಜಕೀಯ ಪಕ್ಷಗಳು ಪ್ರಭಾವ ಬೀರಿ ಈ ವಾಹನಗಳಲ್ಲಿ ಚುನಾವಣಾ ಬಳಕೆಗಾಗಿ ಹಣವನ್ನು ವರ್ಗಾಯಿಸುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ನಿಯಮಗಳೇನೇನು?
-ಹಣ
ಸಾಗಣೆ
ವಾಹನವು
ನಿಗದಿತ
ಮಾರ್ಗದಲ್ಲೇ
ಸಂಚರಿಸಬೇಕು.
-ಹಣಕ್ಕೆ
ಸಂಬಂಧಿಸಿದ
ದಾಖಲೆಗಳನ್ನು
ಸಾಗಾಟ
ಸಂದರ್ಭದಲ್ಲಿ
ಕಡ್ಡಾಯವಾಗಿ
ಇಟ್ಟುಕೊಂಡಿರಲೇಬೇಕು.
ಎಲ್ಲಿಂದ
ಎಲ್ಲಿಗೆ
ಸಾಗಾಟ?
ಯಾವ
ಉದ್ದೇಶದ
ಹಣ,
ಎಂಬುದು
ಸ್ಪಷ್ಟವಾಗಿರಬೇಕು.
ಬ್ಯಾಂಕ್
ನಿಯೋಜಿತ
ನೌಕರ
ತನ್ನ
ಗುರುತಿನ
ಚೀಟಿಯೊಂದಿಗೇ
ಹಣ
ಸಾಗಣೆ
ವೇಳೆ
ಹಾಜರಿರಬೇಕು.
-ಹಣ
ಸಾಗಣೆ
ಸಂದರ್ಭದಲ್ಲಿ
ಸಂಬಂಧಪಟ್ಟ
ಭದ್ರತಾ
ಸಿಬ್ಬಂದಿ
ಇರಬೇಕಾಗುತ್ತದೆ.
-ಬ್ಯಾಂಕ್ಗಳ
ಅಧಿಕೃತ
ವಾಹನ
ಅಥವಾ
ಬ್ಯಾಂಕ್
ಗುರುತಿಸಲ್ಪಟ್ಟ
ವಾಹನಗಳಲ್ಲಿ
ಮಾತ್ರ
ಹಣ
ವರ್ಗಾವಣೆ
ಮಾಡಬೇಕು.