ಸೌಂದರ್ಯ ಲಹರಿ ಪಾರಾಯಣಕ್ಕೆ ಅರಮನೆ ಮೈದಾನಕ್ಕೆ ಸಹಸ್ರ ಸಹಸ್ರ ಭಕ್ತರು
ಬೆಂಗಳೂರು, ಅಕ್ಟೋಬರ್ 28: ವೇದಾಂತ ಭಾರತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಸೌಂದರ್ಯ ಲಹರಿ ಪಾರಾಯಣ ನಡೆಯಿತು. ಎಡತೊರೆ ಮಠದಿಂದ ಆಯೋಜಿಸಿರುವ ಸೌಂದರ್ಯ ಲಹರಿ ಪಾರಾಯಣ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸ್ವಚ್ಛತೆ ಪರಿಪಾಲನೆಯ ಟೊಂಕ ಕಟ್ಟಿರುವುದು ಅದಮ್ಯ ಚೇತನ ಫೌಂಡೇಷನ್.
ಶ್ರವಣಬೆಳಗೊಳದಲ್ಲಿ ಅದ್ದೂರಿಯ ಜೈನ ಯುವ ಸಮ್ಮೇಳನ
ಕೇಂದ್ರ ಸಚಿವ ಅನಂತಕುಮಾರ್ ರ ಪತ್ನಿ ತೇಜಸ್ವಿನಿ ಅವರ ನೇತೃತ್ವ ಇರುವ ಸಂಸ್ಥೆ ಇದು. ಈ ಅದ್ಭುತ ಕಾರ್ಯಕ್ರಮದಲ್ಲಿ ಆಹಾರ ಹಾಗೂ ಪ್ರಸಾದ ಹಂಚಿಕೆಯ ಜವಾಬ್ದಾರಿ ಹೊತ್ತಿರುವುದು ಅದಮ್ಯ ಫೌಂಡೇಷನ್. ಈ 2 ದಿನದಲ್ಲಿ 1.6 ಲಕ್ಷ ಮಂದಿಗೆ ಆಹಾರ ವ್ಯವಸ್ಥೆ ಮಾಡಲಾಗುತ್ತಿದೆ.
ಇಡೀ ಕಾರ್ಯಕ್ರಮವು ಸೇವೆಯ ಜತೆಗೆ ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ನಿದರ್ಶನ ಇದ್ದಂತೆ ಎಂಬ ಮಾತು ಕೇಳಿಬರುತ್ತಿದೆ. ಪ್ರಸಾದ- ಆಹಾರ ವಿತರಣೆಗೆ ಸಂಬಂಧಿಸಿದಂತೆ ಇಡೀ ಕಾರ್ಯಕ್ರಮದ ಪ್ರಮುಖಾಂಶಗಳು ಹೀಗಿವೆ.
* ಅಕ್ಟೋಬರ್ 28ರಂದು 60 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
* ಅದೇ ವೇಳೆ ಪ್ರಸಾದ ವಿತರಣೆಗಾಗಿ ನೂರಿಪ್ಪತ್ತು ಆಹಾರ ವಿತರಣೆ ಕೌಂಟರ್ ತೆರೆಯಲಾಗಿತ್ತು.
* ಏಕ ಕಾಲಕ್ಕೆ ಒಂದು ಕೌಂಟರ್ ನಲ್ಲಿ ಐನೂರಕ್ಕೂ ಹೆಚ್ಚು ಭಕ್ತರಿಗೆ ಆಹಾರ ವಿತರಿಸಲಾಯಿತು.
* ಪೊಂಗಲ್, ಶಾಲ್ಯಾನ್ನ ಹಾಗೂ ಮೊಸರನ್ನು ವ್ಯವಸ್ಥೆ ಮಾಡಲಾಗಿತ್ತು.
* ಒಂದು ಸಾವಿರ ಸ್ವಯಂಸೇವಕರು ಆಹಾರ ವಿತರಣೆಗಾಗಿ ನಿಯೋಜಿತರಾಗಿದ್ದರು.
* ನೀರು ಸರಬರಾಜಿಗೆ ನೂರೈವತ್ತು ಮಂದಿ ಸ್ವಯಂ ಸೇವಕರಿದ್ದರು.
* ನೀರು ಸರಬರಾಜಿ ಹಾಗೂ ತಟ್ಟೆಗಳ ಸಂಗ್ರಹಕ್ಕೆ ಎಪ್ಪತ್ತೆರಡು ಕಡೆ ವ್ಯವಸ್ಥೆ ಮಾಡಲಾಗಿತ್ತು.
* ಆಹಾರ ತಯಾರಿಕೆ, ಬಡಿಸುವುದು ಹಾಗೂ ಆ ನಂತರದ ವಿಲೇವಾರಿಗೆ ಪರಿಸರ ಸ್ನೇಹಿ ವ್ಯವಸ್ಥೆ ಮಾಡಲಾಗಿತ್ತು.
* ಆಹಾರವನ್ನು ಅದಮ್ಯ ಚೇತನದ ಅಡುಗೆ ಮನೆಯಲ್ಲಿ ತಯಾರು ಮಾಡಲಾಗಿದ್ದು, ಬಯೋಗ್ಯಾಸ್ ನಿಂದ ತಯಾರಿಸಲಾಗಿದೆ.
* ಭಾನುವಾರ ಸಹ ಕಾರ್ಯಕ್ರಮವಿದ್ದು, ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಪರಿಸರ ಸ್ನೇಹಿಯಾಗಿಯೇ ಅಡುಗೆ ವ್ಯವಸ್ಥೆ ಮಾಡಲಾಗಿದೆ.
ಇಷ್ಟು ಮಾಹಿತಿ ಅಡುಗೆ- ಪ್ರಸಾದದ ಬಗ್ಗೆಯಾಯಿತು. ಇನ್ನು ಶನಿವಾರದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಒಂದು ಸಾವಿರ ಶಾಲೆಗಳ ಒಂದೂಕಾಲು ಲಕ್ಷ ಮಕ್ಕಳು ಪಾಲ್ಗೊಂಡಿದ್ದರು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ದಕ್ಷಿಣಾಮೂರ್ತ್ಯಷ್ಟಕದ ಹತ್ತು ಮಂತ್ರಗಳನ್ನು ಮಕ್ಕಳಿಗೆ ಹೇಳಿಕೊಡಲಾಗಿದೆ.