ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಚಾರ: ಅಭ್ಯರ್ಥಿಗಳ ವಿರುದ್ಧ ಕ್ರಮ
ಬೆಂಗಳೂರು, ಏಪ್ರಿಲ್ 14: ನಾಮಪತ್ರ ಸಲ್ಲಿಸುವ ಮುನ್ನವೇ ತಾನು ಅಭ್ಯರ್ಥಿ ಎಂದು ಪ್ರಚಾರ ಮಾಡಿದ ವ್ಯಕ್ತಿಗಳ ಬಗ್ಗೆ ಅಧಿಕೃತ ದೂರುಗಳು ಬಂದಲ್ಲಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?
ನಾಮಪತ್ರ ಸಲ್ಲಿಸುವ ಮುನ್ನವೇ ಆವೇ ಅಭ್ಯರ್ಥಿಗಳೆಂದು ಚುನಾವಣಾ ಪ್ರಚಾರ ನಡೆಸುವಂತಿಲ್ಲ, ತಾವೇ ಅಭ್ಯರ್ಥಿ ಎಂದು ಸ್ವಯಂ ಘೋಷಿಸಿಕೊಂಡು ಪ್ರಚಾರ ಮಾಡುವಂತೆಯೂ ಇಲ್ಲ ಎಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ನಾಮ ಪತ್ರ ಸಲ್ಲಿಸಿ ಕ್ರಮ ಬದ್ಧವಾದ ನಂತರವೇ ಅಂತರವನ್ನು ಆ ಕ್ಷೇತ್ರದ ಅಭ್ಯರ್ಥಿ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಹಾಗೂ ಕಾರುಗಳಲ್ಲಿ ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರೆಚಿ ಹಣ ಸಾಗಿಸುವಂತಿಲ್ಲ. ಇದಕ್ಕಾಗಿ ಆಯೋಗದಿಂದ ನಿಯೋಜಿತರಾದ ದ್ವಿ ಚಕ್ಷಣ ದಳಕ್ಕೆ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಚುನಾವಣಾ ಆಯೋಗದ ಅಧಿಕಾರಿಗಳು ವಶ ಪಡಿಸಿಕೊಂಡ ಬಾಡೂಟ, ಅಥವಾ ಇತರ ಆಹಾರವನ್ನು ಹೊರಗೆ ಚೆಲ್ಲುವ ಬದಲು ಅನಾಥಾಶ್ರಮ ಅಥವಾ ನಿರ್ಗತಿಕರಿಗೆ ವಿತರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು.
ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ನಿಲ್ಲಬಹುದು.. ಆದರೆ ಇದಕ್ಕೆ ಆಯೋಗ ಅಡ್ಡಿಪಡಿಸುವುದಿಲ್ಲ. ಏಕೆಂದರೆ ಆಯೋಗ ಯಾವುದೇ ಕಾನೂನನ್ನು ರಚಿಸುವುದಿಲ್ಲ. ಇರುವ ಕಾನೂನನ್ನೇ ಸಮಪರ್ಕಕವಾಗಿ ಅನುಷ್ಠಾನಕ್ಕೆ ತರಲಿದೆ.ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಎರಡು ಕ್ಷೇತ್ರಗಳ ಚುನಾವಣಾ ವೆಚ್ಚ ತಲಾ 28 ಲಕ್ಷ ಆಗಿರುತ್ತದೆ ಎಂದು ತಿಳಿಸಿದರು.