ಕೆಂಪೇಗೌಡ ಏರ್ಪೋರ್ಟ್ನಲ್ಲಿ 32 ವಿಮಾನಗಳ ಹಾರಾಟಕ್ಕೆ ರಾಜ್ಯ ಸರ್ಕಾರ ತಡೆ
ಬೆಂಗಳೂರು, ಮೇ 25: ಕರ್ನಾಟಕ ಸರ್ಕಾರವು ಹಾಕಿರುವ ಕೆಲವು ನಿರ್ಬಂಧಗಳಿಂದಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 32 ವಿಮಾನಗಳ ಹಾರಾಟ ರದ್ದಾಗಿದೆ.
Recommended Video
ಚೆನ್ನೈ, ಮಂಗಳೂರು, ವಿಶಾಖಪಟ್ಟಣಂ, ಕೊಲ್ಕತ್ತ, ಗೋವಾ, ಇಂದೋರ್, ಹೈದರಾಬಾದ್,ಮುಂಬೈ, ವಿಜಯವಾಡ, ಜೈಪುರಕ್ಕೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ.
ಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭ
ಏರ್ಪೋರ್ಟ್ ಮಾಹಿತಿ ಪ್ರಕಾರ ಸಾಕಷ್ಟು ನಗರಗಳಿಗೆ ಇಲ್ಲಿಂದ ವಿಮಾನ ಹಾರಾಟ ನಡೆಸಲಿದೆ ಆದರೆ ಅಲ್ಲಿಂದ ಬರುವ ವಿಮಾನಗಳಿಗೆ ತಡೆ ಹೇರಿದೆ.
ಬೆಂಗಳೂರಿನಿಂದ ಹೈದರಾಬಾದ್ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಅಂತಿಮ ಹಂತದಲ್ಲಿ ತಡೆಹಿಡಿಯಲಾಯಿತು.
ಪ್ರಯಾಣಿಕರು ಬೋರ್ಡಿಂಗ್ ಆಗುವಾಗ ವಿಮಾನ ಹಾರಾಟಕ್ಕೆ ನಿರ್ಬಂಧವಿರುವುದಾಗಿ ಮಾಹಿತಿ ನೀಡಲಾಗಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬೋರ್ಡಿಂಗ್
ಪಾಸ್
ಸ್ಕ್ಯಾನ
ಮಾಡುವಾಗ
ನಿಮ್ಮ
ಬೋರ್ಡಿಂಗ್
ಕ್ಯಾನ್ಸಲ್
ಆಗಿದೆ
ಎಂದು
ಹೇಳಿದ್ದಾರೆ.
ಏನು
ಮಾಡಬೇಕು
ಎಂದು
ತೋಚುತ್ತಿಲ್ಲ
ಎಂದು
ಪ್ರಯಾಣಿಕರು
ಹೇಳಿದ್ದಾರೆ.
ಕೊರೊನಾವೈರಸ್
ಲಾಕ್ಡೌನ್ನಿಂದಾಗಿ
ನಿಂತಿದ್ದ
ವಿಮಾನ
ಹಾರಾಟ
ಸತತ
62
ದಿನಗಳ
ನಿರ್ಬಂಧದ
ಬಳಿಕ
ದೇಶೀಯ
ವಿಮಾನಗಳ
ಹಾರಾಟ
ಇಂದು
ಅಂದರೆ
ಮೇ
25ರಿಂದ
ದೇಶಾದ್ಯಂತ
ಆರಂಭಗೊಂಡಿದೆ.
ರೆಡ್ ಝೋನ್ ಚೆನ್ನೈನಿಂದಲೇ ಬಂತು ಬೆಂಗಳೂರಿಗೆ ಮೊದಲ ವಿಮಾನ
ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ತಮ್ಮ ರಾಜ್ಯಕ್ಕೆ ಸಧ್ಯಕ್ಕೆ ವಿಮಾನ ಹಾರಾಟ ಬೇಡ ಎಂದು ಹೇಳಿವೆ.ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಹೊರ ಹೋಗುವ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ.
ಫ್ಲೈಟ್ ಕ್ರ್ಯೂ ಸೇರಿದಂತೆ ಯಾರಿಗೂ ಪಿಪಿಇ ಕಿಟ್ ಇನ್ನೂ ಲಭ್ಯವಾಗಿಲ್ಲ. ರೆಡ್ಝೋನ್ ಚೆನ್ನೈಯಿಂದ ಮೊದಲ ವಿಮಾನ ಬೆಂಗಳೂರಿಗೆ ಬಂದಿದೆ. ಬೆಂಗಳೂರಿನಿಂದ ಬೆಳಗಾವಿಗೆ ಮೊದಲ ವಿಮಾನ ಹಾರಾಟ ನಡೆಸಿದೆ.