ಡ್ರಗ್ಸ್ ಪ್ರಕರಣ; ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನ ಬಂಧನ
ಬೆಂಗಳೂರು, ನವೆಂಬರ್ 09: ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಪೊಲೀಸರು ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಹಿನ್ನಲೆಯಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
90 ಲಕ್ಷ ಡ್ರಗ್ಸ್ ವಶ, 10 ಪೆಡ್ಲರ್ಸ್ ಬಂಧಿಸಿದ ಸಿಸಿಬಿ ಬೆಂಗಳೂರು
ಹೇಮಂತ್ ಮತ್ತು ಸುನೀಶ್ ಎಂಬ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನವೆಂಬರ್ 5ರಂದು ಡ್ರಗ್ಸ್ ಪ್ರಕರಣ ಬಯಲಿಗೆ ಬಂದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಡ್ರಗ್ಸ್ ಕೇಸ್: ಸಿಪಿಐಎಂ ಕಾರ್ಯದರ್ಶಿ ಪುತ್ರ ಬಿನೀಶ್ ಬಂಧನ
ಈ ಇಬ್ಬರೂ ಆರೋಪಿಗಳು ಬಿಟ್ ಕಾಯುನ್ ಹಣ ಸಂದಾಯ ಮಾಡಿ ವಿದೇಶದಿಂದ 500 ಗ್ರಾಂ ಹೈಡ್ರೋ ಗಾಂಜಾವನ್ನು ತರಿಸಿಕೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಬಂಧನ ಭೀತಿಯಿಂದ ಇಬ್ಬರು ಪರಾರಿಯಾಗಿದ್ದರು.
ಡ್ರಗ್ಸ್ ಪ್ರಕರಣ; ಕನ್ನಡ ಬಿಗ್ ಬಾಸ್ ಸ್ಪರ್ಧಿ ಬಂಧನ
ಸಿಸಿಬಿ ಪೊಲೀಸರು ಇಬ್ಬರ ವಿರುದ್ಧ ತನಿಖೆ ಆರಂಭಿಸುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಗೋವಾದಲ್ಲಿ ಆರೋಪಿಗಳು ಇರುವ ಮಾಹಿತಿ ಆಧರಿಸಿ, ದಾಳಿ ನಡೆಸಿದ ಪೊಲೀಸರು ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದಾರೆ. ಇವರ ಬಂಧನದ ವೇಳೆ ದರ್ಶನ್ ಲಮಾಣಿ ಸಹ ಜೊತೆಗಿದ್ದ.
Recommended Video
"ದರ್ಶನ್ ಲಮಾಣಿ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ" ಎಂದು ಸಿಸಿಟಿ ಜಂಟಿ ಆಯುಕ್ತ ಸಂದೀಪಾ ಪಾಟೀಲ್ ಹೇಳಿದ್ದಾರೆ.