ಕೋವಿಡ್-19 ಜವಾಬ್ದಾರಿಯಿಂದ ಸಚಿವ ಶ್ರೀರಾಮುಲುಗೆ ಕೊಕ್
ಬೆಂಗಳೂರು, ಮಾರ್ಚ್ 24: ಕೊರೊನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಹೀಗಾಗಿ ರಾಜ್ಯ ಸರ್ಕಾರ ಮಹತ್ವದ ಕೋವಿಡ್-19 ವಿಚಾರದಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಕೋವಿಡ್-19 ಜವಾಬ್ದಾರಿಯಿಂದ ಕೈಬಿಡಲಾಗಿದೆ. ಬದಲಾಗಿ ಕೋವಿಡ್-19 ಜವಾಬ್ದಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆ ವಹಿಸಲಾಗಿದೆ.
ಈ ತೀರ್ಮಾನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತೆಗೆದುಕೊಂಡಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಆರೋಗ್ಯ ಸಚಿವ ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಬೇರೆ ಬೇರೆ ಕೆಲಸವಿದೆ. ಅವರು ಈ ರಾಜ್ಯವನ್ನು ಸುತ್ತಾಡಿ, ಬೇರೆ ಕಡೆಗಳಲ್ಲಿನ ಪರಿಸ್ಥಿತಿಯನ್ನು ಸುಧಾರಿಸಬೇಕಿದೆ ಎಂದು ತಿಳಿಸಿದರು.
Comments
b sriramulu health minister COVID19 coronavirus state government bengaluru ಬಿ ಶ್ರೀರಾಮುಲು ಆರೋಗ್ಯ ಸಚಿವ ವೈರಸ್ ರಾಜ್ಯ ಸರ್ಕಾರ ಬೆಂಗಳೂರು
English summary
Health Minister B. Sriramulu has been dropped from the Covid-19 responsibility.