ಸುಪಾರಿ ಕಿಲ್ಲರ್ ಬಾಂಬೆ ರವಿ ರಾಬರ್ಟ್ ನಿರ್ಮಾಪಕ ಉಮಾಪತಿಗೆ ಕ್ಷಮೆಯಾಚನೆ!
ಬೆಂಗಳೂರು, ಸೆ. 02: ಮೂರು ರಾಜ್ಯಗಳ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಸುಪಾರಿ ಕಿಲ್ಲರ್ ಬಾಂಬೆ ರವಿ ಕೊರೊನಾಗೆ ಬಲಿಯಾಗಿದ್ದಾನೆ ಎನ್ನಲಾಗಿದೆ. ಇನ್ನು ರಾಬರ್ಟ್ ನಿರ್ಮಾಪಕ ಉಮಾಪತಿ ಹತ್ಯೆಗೆ ಸುಪಾರಿ ಪಡೆದು ಸುದ್ದಿಯಾಗಿದ್ದ ಬಾಂಬೆ ರವಿ ಸಾಯುವ ಮುನ್ನ ಕ್ಷಮೆ ಯಾಚಿಸಿದ್ದಾನೆ. ನಿರ್ಮಾಪಕ ಉಮಾಪತಿ ಹಾಗೂ ಅವರ ಸಹೋದರ ದೀಪಕ್ ಕೊಲೆಗೆ ಸುಪಾರಿ ಪಡೆದು ಬಾಂಬೆ ರವಿ ಸಂಚು ರೂಪಿಸಿದ್ದ. ಇದೀಗ ಸಾಯುವ ಮುನ್ನ ಬಾಂಬೆ ರವಿ ನಿರ್ಮಾಪಕ ಉಮಾಪತಿಗೆ ಕರೆ ಮಾಡಿ ಕ್ಷಮೆ ಯಾಚನೆ ಮಾಡಿರುವ ಅಡಿಯೋ ವೈರಲ್ ಆಗಿದೆ.
ಬಾಂಬೆ ರವಿ ಹಾಗೂ ಉಮಾಪತಿ ವಿವಾದ: ನಟ ದರ್ಶನ್ ಅಭಿಯನದ ರಾಬರ್ಟ್ ಸಿನಿಮಾ ಬಿಡುಗಡೆಗೂ ಮುನ್ನ ದೊಡ್ಡ ಸುದ್ದಿಯಾಗಿತ್ತು. ನಿರ್ಮಾಪಕ ಉಮಾಪತಿ ಮತ್ತು ಮಹೇಶ್ ಎಂಬುವರ ಹತ್ಯೆಗೆ ಸಂಚು ರೂಪಿಸಿ ಟಿಟಿಯಲ್ಲಿ ಹೊಂಚು ಹಾಕುತ್ತಿದ್ದ ಬಾಂಬೆ ರವಿ ಸಹಚರರನ್ನು ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಬಂಧಿಸಿದ್ದರು. ಈ ಮೂಲಕ ಆಗಲಿದ್ದ ದೊಡ್ಡ ಅನಾಹುತವನ್ನು ಪೊಲೀಸರೇ ತಪ್ಪಿಸಿದ್ದರು. ಆ ಬಳಿಕ ಬಾಂಬೆ ರವಿ ಹೆಸರು ಕೇಳಿ ಬಂದಿತ್ತು. ಬೆಂಗಳೂರು ಪೊಲೀಸರಿಗೆ ಹಲವು ಪ್ರಕರಣದಲ್ಲಿ ಬೇಕಾಗಿದ್ದ ಬಾಂಬೆ ರವಿ ಕೊರೊನಾ ಸೋಂಕು ತಗುಲಿತ್ತು. ಸಾಯುವ ಮುನ್ನ ಉಮಾಪತಿಗೆ ಸ್ವತಃ ಬಾಂಬೆ ರವಿ ಕರೆ ಮಾಡಿ ಮಾತನಾಡಿರುವ ಅಡಿಯೋ ಇದೀಗ ವೈರಲ್ ಆಗಿದೆ. ಬಾಂಬೆ ರವಿ ಮೃತಪಟ್ಟ ಬೆನ್ನಲ್ಲೇ ಅಡಿಯೋ ಬಿಡುಗಡೆಯಾಗಿದೆ.
ಅಲ್ಲ ರೀ. ಉಮಾಪತಿ, ನಿಮಗೂ ನಮಗೂ ಏನಿದೆ? ನಮ್ಮ ನಡುವೆ ಏನಿದೆ? ನಿಮಗೆ ಕೆಲವೊಂದು ವಿಚಾರ ಗೊತ್ತಿಲ್ಲ. ನನ್ನ ಬಗ್ಗೆ ನೀವು ರಾಂಗ್ ಆಗಿ ಮಾತನಾಡಿರುವುದಕ್ಕೆ ಕೋಪ ಬಂದಿದೆ. ಉಮಾಪತಿಗೂ ನನಗೂ ಸಂಬಂಧವಿಲ್ಲ. ನಮ್ಮ ಲೈನೇ ಬೇರೆ, ನಮ್ಮ ದುಶ್ಮನಿ ಸೈಕಲ್ ರವಿ. ಅವನನ್ನು ಮುಗಿಸುತ್ತೇನೋ, ಮುಗಿಯುತ್ತೇನೋ ಗೊತ್ತಿಲ್ಲ. ಕೆಲವರು ಚಿಲ್ಲರೆ ಕಾಸು ಮಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ನೋಡುವರಿಗೆ ಮಜಾ, ಇನ್ನೂ ಕೆಲವರು ಕಾಸು ಮಾಡಿಕೊಳ್ಳುತ್ತಿದ್ದಾರೆ ಎಂದು ಬಾಂಬೆ ರವಿ ಉಮಾಪತಿ ನಡುವೆ ಮಾತನಾಡಿದ್ದಾರೆ.
ಉಮಾಪತಿಯವರೇ ನೀವು ಯಾರೋ ಗೊತ್ತಿಲ್ಲ. ನಿಮ್ಮ ಬಗ್ಗೆ ಒಂದು ದಿನ ಆಲೋಚನೆ ಬೇಕಿಲ್ಲ. ನನಗೆ ದುಡ್ಡು ಬೇಕಿದ್ದರೆ ನೇರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದೆ. ನಿಮ್ಮ ಬಳಿ ಹಣ ಕೀಳುವ ಉದ್ದೇಶವಿಲ್ಲ. ಈ ವಿಚಾರ ಅತಿಯಾಗುತ್ತಿರುವ ಕಾರಣದಿಂದ ನಾನೇ ಪೋನ್ ಮಾಡಿದ್ದಾನೆ. ನಿಮ್ಮದು ಏನೋ ಸಮಸ್ಯೆ ಆಗಿದ್ದಾಗ ನನ್ನ ಬಳಿ ಅನೇಕರು ಬಂದಿದ್ದರು.
ನನಗೆ ಬೇಡವೇ ಬೇಡ, ಸಂಬಂಧವೇ ಇಲ್ಲ. ಪಾಪ, ನಿಮ್ಮ ಮನೆಯವರು ಸಂಸಾರ ಮಾಡಿದ್ದೀರಾ. ನಾನು ನಿಮ್ಮ ಪೇರೆಂಟ್ಗೆ ಸಾರಿ ಕೇಳ್ತೀನಿ.. ನಿಮ್ಮ ವಿಚಾರ ನನಗೆ ಬೇಡದಿರುವ ವಿಚಾರ ಉಮಾಪತಿಯವರೇ.. ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗುವುದು ಬೇಡ. ನನ್ನ ಫೋಕಸ್ ಬೇರೆ ಇದೆ. ಸುಮ್ಮನೆ ನನ್ನ ಹೆಸರಿನಲ್ಲಿ ಏನೇನೋ ಅಗುತ್ತಿದೆ ಅನ್ನೋ ಕಾರಣಕ್ಕೆ ಪೋನ್ ಮಾಡಿದೆ. ನೀವು ಮನೆಗೆ ಹೋದ ಮೇಲೆ ಪೋನ್ ಮಾಡಿ. ನಾನು ನಿಮ್ಮ ಪೋಷಕರ ಮುಂದೆ ಸಾರಿ ಕೇಳ್ತೀನಿ. ನನ್ನ ಕಡೆಯಿಂದ ತಪ್ಪಾಗಿದ್ರೆ ಸಾರಿ ಕೇಳಿ ಬಿಡ್ತೀನಿ ಉಮಾಪತಿಯವರೇ ಎಂದು ಬಾಂಬೆ ರವಿ ಕರೆಯಲ್ಲಿ ಮಾತನಾಡಿದ್ದಾನೆ.
ರಾಬರ್ಟ್ ನಿರ್ಮಾಪಕ ಉಮಾಪತಿ ಹಾಗೂ ಅತನ ಸಹೋದರ ದೀಪಕ್ ಹತ್ಯೆಗೆ ಸುಪಾರಿ ನೀಡಿರುವ ಹಿಂದೆ ಒಬ್ಬ ಮಾಸ್ಟರ್ ಮೈಂಡ್ ಇದ್ದಾನೆ. ಆತನ ಮಾತು ಕೇಳಿ ಇದೆಲ್ಲ ಆಗಿದೆ. ಇನ್ನು ಮುಂದೆ ನಿಮ್ಮ ವಿಚಾರಕ್ಕೆ ನಾನು ಬರುವುದಿಲ್ಲ ಎಂದು ಬಾಂಬೆ ರವಿ ಸ್ಪಷ್ಟವಾಗಿ ತಿಳಿಸಿದ್ದಾನೆ. ಆದರೆ ಬಾಂಬೆ ರವಿ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಬೆನ್ನಲ್ಲೇ ಇದೀಗ ಅಡಿಯೋ ವೈರಲ್ ಆಗಿದೆ.
Recommended Video