ಮೇ 18ರಂದು ಪದ್ಮಶ್ರೀ ದೊಡ್ಡರಂಗೇಗೌಡರ ಕೃತಿ ಲೋಕಾರ್ಪಣೆ
ಬೆಂಗಳೂರು, ಮೇ 16 : ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರ ಮತ್ತೊಂದು ಅದ್ಬುತ ಕೃತಿ "ಮಣ್ಣಿನ ಮಾತುಗಳು" ಮೇ 18, ಶನಿವಾರದಂದು ಲೋಕಾರ್ಪಣೆಯಾಗಲಿದೆ. ಅಂತರಾಳ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಈ ಕೃತಿ ದೊ.ರಂ.ಗೌಡರ ಹಿಂದಿನ ಎಲ್ಲಾ ಕೃತಿಗಳಿಗಿಂತ ಭಿನ್ನವಾಗಿದ್ದು, ಈ ತತ್ವದ ಸಾಲುಗಳು ಮಣ್ಣಿನ ಮೂಸೆಯಿಂದ ಹೊರಹೊಮ್ಮಿರುವುದು. ಸಾಮಾನ್ಯ ಮನುಷ್ಯನ ಬೆವರ ಹನಿಯ ಅನುಭವದ ಸಾರ. ಮಣ್ಣಿನ ಮಕ್ಕಳ ಸ್ವಗತದಂತೆ ನೈಜವಾಗಿದೆ.
ಅಲ್ಲದೇ ಅವತ್ತು "ಮಣ್ಣಿನ ಮಾತುಗಳು" ಕೃತಿಯಲ್ಲಿನ ಆಯ್ದ ಮುತ್ತಿನ ಸಾಲುಗಳು ಧ್ವನಿ ಸಾಂದ್ರಿಕೆಯ ರೂಪದಲ್ಲಿಯೂ ಕೂಡ ಲೋಕಾರ್ಪಣೆಯಾಗಲಿದೆ. ಈ ಧ್ವನಿ ಸಾಂದ್ರಿಕೆಯ ಸಂಗೀತ ರೂವಾರಿ ಮ್ಯಾಂಡಲಿನ್ ಪ್ರಸಾದ ಅವರು. ಸನ್ನಿಧಿ ಸಂಸ್ಥೆ ನಿರ್ಮಿಸಿರುವ ಈ ಸಂಗೀತ ಸಂಪುಟಕ್ಕೆ ಡಾ. ಮುದ್ದು ಮೋಹನ್, ಗಣೇಶ್ ದೇಸಾಯಿ, ಮಹೇಶ್ ಪ್ರಿಯದರ್ಶನ್ ಹಾಗೂ ಶ್ರೀಮತಿ ಶ್ರುತಿ ಅವರು ಧ್ವನಿಯಾಗಿದ್ದಾರೆ.
ಕಾರ್ಯಕ್ರಮ
ವಿವರ;
ಡಾ.
ಮನು
ಬಳಿಗಾರ್
ಅಧ್ಯಕ್ಷತೆ
ಪ್ರೊ.
ಎಂ.ಎಚ್
ಕೃಷ್ಣಯ್ಯ
ಅವರಿಂದ
ಪುಸ್ತಕ
ಲೋಕಾರ್ಪಣೆ
ಮುದ್ದುಮೋಹನ್
ರಿಂದ
ಸೀಡಿ
ಲೋಕಾರ್ಪಣೆ
ಉಪಸ್ಥಿತಿ
:
ಪದ್ಮಶ್ರೀ
ಡಾ.
ದೊಡ್ಡರಂಗೇಗೌಡ,
ಮ್ಯಾಂಡೋಲಿನ್
ಶ್ರೀನಿವಾಸ್
ನಿರೂಪಣೆ:
ರಾಜ
ಶಶಿಧರ್.
ದಿನಾಂಕ,
ಸಮಯ:
ಮೇ
18,
ಶನಿವಾರ,
ಬೆಳಗ್ಗೆ
11
ಗಂಟೆಗೆ
ಸ್ಥಳ:
ಶ್ರೀಕೃಷ್ಣರಾಜ
ಪರಿಷನ್ಮಂದಿರ,
ಕನ್ನಡ
ಸಾಹಿತ್ಯ
ಪರಿಷತ್ತು,
ಬೆಂಗಳೂರು