ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 18ರಂದು ಪದ್ಮಶ್ರೀ ದೊಡ್ಡರಂಗೇಗೌಡರ ಕೃತಿ ಲೋಕಾರ್ಪಣೆ

|
Google Oneindia Kannada News

ಬೆಂಗಳೂರು, ಮೇ 16 : ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರ ಮತ್ತೊಂದು ಅದ್ಬುತ ಕೃತಿ "ಮಣ್ಣಿನ ಮಾತುಗಳು" ಮೇ 18, ಶನಿವಾರದಂದು ಲೋಕಾರ್ಪಣೆಯಾಗಲಿದೆ. ಅಂತರಾಳ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಕೃತಿ ದೊ.ರಂ.ಗೌಡರ ಹಿಂದಿನ ಎಲ್ಲಾ ಕೃತಿಗಳಿಗಿಂತ ಭಿನ್ನವಾಗಿದ್ದು, ಈ ತತ್ವದ ಸಾಲುಗಳು ಮಣ್ಣಿನ ಮೂಸೆಯಿಂದ ಹೊರಹೊಮ್ಮಿರುವುದು. ಸಾಮಾನ್ಯ ಮನುಷ್ಯನ ಬೆವರ ಹನಿಯ ಅನುಭವದ ಸಾರ. ಮಣ್ಣಿನ ಮಕ್ಕಳ ಸ್ವಗತದಂತೆ ನೈಜವಾಗಿದೆ.

ಅಲ್ಲದೇ ಅವತ್ತು "ಮಣ್ಣಿನ ಮಾತುಗಳು" ಕೃತಿಯಲ್ಲಿನ ಆಯ್ದ ಮುತ್ತಿನ ಸಾಲುಗಳು ಧ್ವನಿ ಸಾಂದ್ರಿಕೆಯ ರೂಪದಲ್ಲಿಯೂ ಕೂಡ ಲೋಕಾರ್ಪಣೆಯಾಗಲಿದೆ. ಈ ಧ್ವನಿ ಸಾಂದ್ರಿಕೆಯ ಸಂಗೀತ ರೂವಾರಿ ಮ್ಯಾಂಡಲಿನ್ ಪ್ರಸಾದ ಅವರು. ಸನ್ನಿಧಿ ಸಂಸ್ಥೆ ನಿರ್ಮಿಸಿರುವ ಈ ಸಂಗೀತ ಸಂಪುಟಕ್ಕೆ ಡಾ. ಮುದ್ದು ಮೋಹನ್, ಗಣೇಶ್ ದೇಸಾಯಿ, ಮಹೇಶ್ ಪ್ರಿಯದರ್ಶನ್ ಹಾಗೂ ಶ್ರೀಮತಿ ಶ್ರುತಿ ಅವರು ಧ್ವನಿಯಾಗಿದ್ದಾರೆ.

Doddarange Gowdas Mannina Maatugalu book release Sahithya Parishat

ಕಾರ್ಯಕ್ರಮ ವಿವರ;
ಡಾ. ಮನು ಬಳಿಗಾರ್ ಅಧ್ಯಕ್ಷತೆ
ಪ್ರೊ. ಎಂ.ಎಚ್ ಕೃಷ್ಣಯ್ಯ ಅವರಿಂದ ಪುಸ್ತಕ ಲೋಕಾರ್ಪಣೆ
ಮುದ್ದುಮೋಹನ್ ರಿಂದ ಸೀಡಿ ಲೋಕಾರ್ಪಣೆ
ಉಪಸ್ಥಿತಿ : ಪದ್ಮಶ್ರೀ ಡಾ. ದೊಡ್ಡರಂಗೇಗೌಡ, ಮ್ಯಾಂಡೋಲಿನ್ ಶ್ರೀನಿವಾಸ್
ನಿರೂಪಣೆ: ರಾಜ ಶಶಿಧರ್.
ದಿನಾಂಕ, ಸಮಯ: ಮೇ 18, ಶನಿವಾರ, ಬೆಳಗ್ಗೆ 11 ಗಂಟೆಗೆ
ಸ್ಥಳ: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

English summary
Padmashri Dr. Doddarangegowda's latest book ' Mannina Matugalu will be released on May 18, 2019. The event is oragnised by Antarala Trust and will be held at Kannada Sahithya Parishat, Chamarajapete, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X