ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾವೆಲ್ಲಾ ಮಾಡಿದ್ದನ್ನೇ ಈಗ ಬಿಎಸ್‌ವೈ ಮಾಡ್ತಿದ್ದಾರೆ ಎಂದ ಡಿಕೆಶಿ ಏನದು?

|
Google Oneindia Kannada News

Recommended Video

ಸಂಪುಟ ವಿಸ್ತರಣೆ ಬಗ್ಗೆ ಡಿಕೆ.ಶಿವಕುಮಾರ್ ಹೇಳಿದ್ದೇನು ಗೊತ್ತಾ?

ಬೆಂಗಳೂರು, ಆಗಸ್ಟ್ 7: ನಾವೆಲ್ಲಾ ದೆಹಲಿ, ಹೈಕಮಾಂಡ್ ಅಂತ ಇದ್ದೆವು ಈಗ ಯಡಿಯೂರಪ್ಪ ಕೂಡ ಅದನ್ನೇ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ಅಸ್ತವ್ಯಸ್ಥವಾಗಿದ್ದರೆ ಸಿಎಂ ಮಾತ್ರ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಡಿಕೆಶಿ ನುಡಿದಿದ್ದಾರೆ.

ಯಡಿಯೂರಪ್ಪನವರಿಗೆ ಏನು ಕಷ್ಟ ಇದೆಯೋ,ಅವರು ಬಹಳ ಆತುರದಲ್ಲಿದ್ದಾರೆ ಅವರು ಬಹಳ ಆತುರದಲ್ಲಿದ್ದಾರೆ, ಅವರ ಆತುರವನ್ನ ಜನ ಗಮನಿಸುತ್ತಿದ್ದಾರೆ.

DKS Says What We Have Done Yeddyurappa Now Doing The Same

10 ದಿನ ಕಳೆದರೂ ಒನ್ ಮ್ಯಾನ್ ಶೋ ಆಗಿದೆ ಸರ್ಕಾರ,ಪಾಪ ಅವರಂತೆ ಆತುರದಲ್ಲಿ ನಾನು ಏನನ್ನೂ ಹೇಳಲ್ಲ ಎಲ್ಲವನ್ನೂ ರಾಜ್ಯದ ಜನರೇ ಗಮನಿಸುತ್ತಾರೆ ಎಂದು ಸಿಎಂ ದೆಹಲಿ ಠಿಕಾಣಿ ವಿರುದ್ಧ ಕಿಡಿ ಕಾರಿದ್ದಾರೆ.

ಇದೇ ವೇಳೆ ಕೇಂದ್ರ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರೊಬ್ಬ ಸಂಸದೀಯ ಪಟು, ಒಬ್ಬ ಹೆಣ್ಣುಮಗಳಾಗಿ ಸವಾಲನ್ನ ಮೆಟ್ಟಿನಿಂತವರು.

ಪಂಜಾಬ್,ಹರ್ಯಾಣದಲ್ಲಿ ಉತ್ತಮ ಸಂಘಟಕಿಯಾಗಿದ್ದರು, ಅವರಲ್ಲಿ ನಾನು ವಿಶೇಷ ಗುಣವನ್ನ ಕಂಡಿದ್ದೆ, ಅವರ ಆದರ್ಶ ಜೀವನ ಮುಂದಿನವರಿಗೆ ದಾರಿದೀಪ,ಅವರಿಗೆ ಸಾಯುವಂತ ವಯಸ್ಸಾಗಿರಲಿಲ್ಲ ಎಂದು ಹೇಳಿದರು.

English summary
Former minister DK Shivakumar says that What We Have Done Yeddyurappa Now Doing The Same,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X