ನಾವೆಲ್ಲಾ ಮಾಡಿದ್ದನ್ನೇ ಈಗ ಬಿಎಸ್ವೈ ಮಾಡ್ತಿದ್ದಾರೆ ಎಂದ ಡಿಕೆಶಿ ಏನದು?
Recommended Video
ಬೆಂಗಳೂರು, ಆಗಸ್ಟ್ 7: ನಾವೆಲ್ಲಾ ದೆಹಲಿ, ಹೈಕಮಾಂಡ್ ಅಂತ ಇದ್ದೆವು ಈಗ ಯಡಿಯೂರಪ್ಪ ಕೂಡ ಅದನ್ನೇ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ಅಸ್ತವ್ಯಸ್ಥವಾಗಿದ್ದರೆ ಸಿಎಂ ಮಾತ್ರ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಡಿಕೆಶಿ ನುಡಿದಿದ್ದಾರೆ.
ಯಡಿಯೂರಪ್ಪನವರಿಗೆ ಏನು ಕಷ್ಟ ಇದೆಯೋ,ಅವರು ಬಹಳ ಆತುರದಲ್ಲಿದ್ದಾರೆ ಅವರು ಬಹಳ ಆತುರದಲ್ಲಿದ್ದಾರೆ, ಅವರ ಆತುರವನ್ನ ಜನ ಗಮನಿಸುತ್ತಿದ್ದಾರೆ.
10 ದಿನ ಕಳೆದರೂ ಒನ್ ಮ್ಯಾನ್ ಶೋ ಆಗಿದೆ ಸರ್ಕಾರ,ಪಾಪ ಅವರಂತೆ ಆತುರದಲ್ಲಿ ನಾನು ಏನನ್ನೂ ಹೇಳಲ್ಲ ಎಲ್ಲವನ್ನೂ ರಾಜ್ಯದ ಜನರೇ ಗಮನಿಸುತ್ತಾರೆ ಎಂದು ಸಿಎಂ ದೆಹಲಿ ಠಿಕಾಣಿ ವಿರುದ್ಧ ಕಿಡಿ ಕಾರಿದ್ದಾರೆ.
ಇದೇ ವೇಳೆ ಕೇಂದ್ರ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರೊಬ್ಬ ಸಂಸದೀಯ ಪಟು, ಒಬ್ಬ ಹೆಣ್ಣುಮಗಳಾಗಿ ಸವಾಲನ್ನ ಮೆಟ್ಟಿನಿಂತವರು.
ಪಂಜಾಬ್,ಹರ್ಯಾಣದಲ್ಲಿ ಉತ್ತಮ ಸಂಘಟಕಿಯಾಗಿದ್ದರು, ಅವರಲ್ಲಿ ನಾನು ವಿಶೇಷ ಗುಣವನ್ನ ಕಂಡಿದ್ದೆ, ಅವರ ಆದರ್ಶ ಜೀವನ ಮುಂದಿನವರಿಗೆ ದಾರಿದೀಪ,ಅವರಿಗೆ ಸಾಯುವಂತ ವಯಸ್ಸಾಗಿರಲಿಲ್ಲ ಎಂದು ಹೇಳಿದರು.