ಕೋವಿಡ್ ಭ್ರಷ್ಟಾಚಾರ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು, ಜುಲೈ.23: ಕೊರೊನಾವೈರಸ್ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಲೆಕ್ಕ ಕೊಡಿ ಅಭಿಯಾನವನ್ನು ಆರಂಭಿಸಿದೆ.
Recommended Video
ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸರ್ಕಾರವು ವೆಂಟಿಲೇಟರ್ ಖರೀದಿಯಲ್ಲಿ ನಡೆಸಿರುವ ಅವ್ಯವಹಾರದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಕರ್ನಾಟಕದಲ್ಲಿ "ಸೋರುತಿಹುದು ಸರ್ಕಾರದ ಮಾಳಿಗೆ, ಅಜ್ಞಾನದಿಂದ"?
ಸರ್ಕಾರವು ಕೊರೊನಾವೈರಸ್ ಸೋಂಕು ನಿರ್ವಹಣೆಗೆ ಖರೀದಿಸಿದ ಉಪಕರಣಗಳ ಒಟ್ಟು ಮೊತ್ತ 4167 ಕೋಟಿ ರೂಪಾಯಿ ಆಗಿದ್ದು, ಈ ಪೈಕಿ 2000 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಉಭಯ ನಾಯಕರು ಆರೋಪಿಸಿದ್ದಾರೆ. ಇಂದು ನಡೆದ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.
ಸಿದ್ದರಾಮಯ್ಯ,
ಡಿಕೆಶಿ
ಸುದ್ದಿಗೋಷ್ಠಿಯ
ಪ್ರಮುಖಾಂಶ:
- ಕೊವಿಡ್-19 ಉಪಕರಣ ಖರೀದಿಗೆ ಖರ್ಚು ಮಾಡಿದ್ದು 324 ಕೋಟಿ ಅಲ್ಲ 4167 ಕೋಟಿ ರೂ.
- ಆರೋಗ್ಯ ಇಲಾಖೆಗೆ ಮೀಸಲಿರಿಸಿದ 1527 ಕೋಟಿಗಿಂತ ಎರಡು ಪಟ್ಟು ಹಣ ಖರ್ಚು
- ಕೊವಿಡ್ ಉಪಕರಣ ಖರೀದಿಗಾಗಿ ಈವರೆಗೂ 3322 ಕೋಟಿ ರೂ. ಖರ್ಚು
'330 ರೂಪಾಯಿ ಪಿಪಿಇ ಕಿಟ್ ಖರೀದಿಸಲು 2117 ರೂಪಾಯಿ ಖರ್ಚು'
- ಕರ್ನಾಟಕದಲ್ಲಿ ಮಾರ್ಚ್.22ರಂದು ಒಂದು ವೆಂಟಿಲೇಟರ್ ಗೆ 5.60ಲಕ್ಷ, ಇನ್ನೊಂದು ಬಾರಿ ಒಂದು ವೆಂಟಿಲೇಟರ್ 12.36 ಲಕ್ಷ, ಮೂರನೇ ಬಾರಿ ಒಂದು ವೆಂಟಿಲೇಟರ್ ಖರೀದಿಗೆ 18.23 ಲಕ್ಷ ರೂಪಾಯಿ ನೀಡಿರುವ ಬಗ್ಗೆ ಆರೋಪ
- 331 ರೂಪಾಯಿ ಮೌಲ್ಯದ ಪಿಪಿಇ ಕಿಟ್ ಗಳಿಗೆ 2317 ರೂಪಾಯಿ ನೀಡಿ ಖರೀದಿ
- ಮೇಕ್ ಇನ್ ಇಂಡಿಯಾ ಭಾಷಣ ಮಾಡುವವರೇ ಚೀನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿಸಿದ್ದಾರೆ
- ಚೀನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿಸಲು 94.22 ಕೋಟಿ ರೂಪಾಯಿ ಪಾವತಿ
ಕೊವಿಡ್-19 ನಿರ್ವಹಣೆಗೆ ಯಾವ ಇಲಾಖೆಯಲ್ಲಿ ಎಷ್ಟು ಖರ್ಚು?
- 60 ರೂಪಾಯಿ ಮಾಸ್ಕ್ ಗೆ 150 ರೂಪಾಯಿ ಪಾವತಿಸಿ ಖರೀದಿ
- 1 ರಿಂದ 2 ಸಾವಿರ ರೂಪಾಯಿ ಮೌಲ್ಯದ ಸ್ಕ್ಯಾನರ್ ಗಳ ಖರೀದಿಗೆ 5945 ರೂಪಾಯಿ ಖರ್ಚು
- 80 ರಿಂದ 100 ರೂಪಾಯಿ ಮೌಲ್ಯದ 500 ಎಂಎಲ್ ಸ್ಯಾನಿಟೈಸರ್ ಗೆ 250 ರಿಂದ 600 ರೂಪಾಯಿ ಪಾವತಿ
'4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ'
- ಕೇರಳ ಪಾವತಿಸಿದ ಹಣಕ್ಕಿಂತ 2 ಲಕ್ಷ ರೂಪಾಯಿ ಹೆಚ್ಚಿನ ಹಣಕ್ಕೆ 300 ಆಕ್ಸಿಮೀಟರ್ ಡಿವೈಸ್ ಖರೀದಿ. ಒಂದು ಆಕ್ಸಿಮೀಟರ್ ಗೆ 4.30 ಲಕ್ಷ ರೂಪಾಯಿ ಪಾವತಿ.
- 2000 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ
- ಫುಡ್ ಕಿಟ್ ವಿತರಣೆಯಲ್ಲೂ ಬಿಜೆಪಿ ಸರ್ಕಾರದಿಂದ ಅವ್ಯವಹಾರ
- ಹೆಣದ ಮೇಲೆ ಹಣ ಮಾಡಲು ಹೊರಟಿದ್ದೀರಿ ಎಂದು ಡಿಕೆಶಿ ಕೆಂಡಾಮಂಡಲ.