ಅಭಿಮಾನಿಗಳು ಹೊತ್ತ ಹರಕೆಯನ್ನು ತೀರಿಸಿದ ಡಿಕೆ ಶಿವಕುಮಾರ್
ಬೆಂಗಳೂರು, ಜನವರಿ 21: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿದ್ದಾಗ ಅವರ ಅಭಿಮಾನಿಗಳು ಹೊತ್ತ ಹರಕೆಯನ್ನು ಈಗ ಅವರು ತೀರಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ಶೀಘ್ರ ಜೈಲಿನಿಂದ ಬಿಡುಗಡೆಯಾದರೆ ನಗರ ಸರ್ಕಲ್ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ ಎಂದು ಹರಕೆ ಕಟ್ಟಿಕೊಂಡಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆಗೂ ಮುನ್ನ ಕಬ್ಬಾಳಮ್ಮಗೆ ಪೂಜೆ ಸಲ್ಲಿಸಿದ ಡಿಕೆಶಿ ತಾಯಿ
ಅಭಿಮಾನಿಗಳು ಡಿಕೆಶಿ ಕೈಯಿಂದ ಮುಷ್ಟಿ ಕಾಣಿಕೆ ಹಾಕಿಸುವ ಹರಿಕೆ ಹೊತ್ತಿದ್ದರು. ಆದ್ದರಿಂದ ಬೊಗಸೆ ತುಂಬ ನಾಣ್ಯಗಳನ್ನು ಇಟ್ಟುಕೊಂಡು ಹರಕೆ ಕಾಣಿಕೆಯನ್ನು ಹುಂಡಿಗೆ ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳ ಹರಕೆಯನ್ನು ನೆರವೇರಿಸಿದ್ದಾರೆ.
ಡಿ.ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯ(ಇಡಿ) ಬಂಧನದಿಂದ ಶೀಘ್ರವಾಗಿ ಬಿಡುಗಡೆಯಾದರೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ ಎಂದು ಡಿಕೆಶಿ ಅಭಿಮಾನಿಗಳು ಹರಕೆ ಹೊತ್ತಿದ್ದರು.
Comments
English summary
DK Shivakumar Perform Pooja At The Circle Maramma Temple in Malleshwaram.