ನ್ಯಾ. ರಾಮಾ ಜೋಯಿಸ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ!
ಬೆಂಗಳೂರು, ಫೆ. 16: ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಮಾಜಿ ರಾಜ್ಯಪಾಲರಾದ ರಾಮಾಜೋಯಿಸ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
ರಾಮಾಜೋಯಿಸ್ ಅವರ ನಿಧನ ಸುದ್ದಿ ಕೇಳಿ ಬೇಸರವಾಗಿದೆ. ರಾಮಾಜೋಯಿಸ್ ಅವರು ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು. ಕಾನೂನು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ರಾಮಾಜೋಯಿಸರು ಸರ್ವೀಸ್ ಲಾ, ಕಾನ್ಸ್ಟಿಟ್ಯೂಶನಲ್ ಲಾ, ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ.
Recommended Video
103ಕ್ಕೆ
ಏರಿಕೆಯಾದ
ಬಿಳೇಕಹಳ್ಳಿ
ಅಪಾರ್ಟ್ಮೆಂಟ್ನ
ಕೊರೊನಾ
ಸೋಂಕಿತರ
ಸಂಖ್ಯೆ
|
Oneindia
Kannada
ರಾಜ್ಯಸಭೆ ಸದಸ್ಯರಾಗಿದ್ದ ನಂತರ ಜಾರ್ಖಂಡ್, ಬಿಹಾರ ರಾಜ್ಯಗಳ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಆಪ್ತ ಬಳಗದವರಿಗೆ ಭಗವಂತ ಕರುಣಿಸಲಿ ಹಾಗೂ ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
Comments
English summary
KPCC President D.K. Shivakumar has condoled the death of Jusitce M. Rama Jois. Know more.
Story first published: Tuesday, February 16, 2021, 19:42 [IST]