ಕೊಯಮತ್ತೂರು-ಬೆಂಗಳೂರು ನಡುವೆ ಜೂ.10 ರಿಂದ ನೇರ ರೈಲು
ಬೆಂಗಳೂರು, ಮೇ 29 : ಬೆಂಗಳೂರು-ಕೊಯಮತ್ತೂರು ನಡುವೆ ನೇರ ರೈಲು ಸೇವೆ ಜೂನ್ 10 ರಿಂದ ಆರಂಭವಾಗಲಿದೆ. ವೈ-ಫೈ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಈ ರೈಲು ಹೊಂದಿರುತ್ತದೆ.
ನೈಋತ್ಯ ರೈಲ್ವೆ ಬೆಂಗಳೂರು-ಕೊಯಮತ್ತೂರು ನಡುವಿನ ರೈಲು ಸೇವೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದೆ. ಈ ಮಾರ್ಗದಲ್ಲಿ ನೇರ ರೈಲು ಆರಂಭಿಸಬೇಕು ಎಂಬುದು ಬಹುದಿನದ ಬೇಡಿಕೆಯಾಗಿತ್ತು.
ಪದವೀಧರರು ಆರ್ಪಿಎಫ್ನಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿ
'ಉದಯ್ ಎಕ್ಸ್ಪ್ರೆಸ್' ಹೆಸರಿನ ಡಬಲ್ ಡೆಕ್ಕರ್ ಹಮಾನಿಯಂತ್ರಿತ ರೈಲು ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ. 2016ರಲ್ಲಿ ಈ ಮಾರ್ಗದಲ್ಲಿ ನೇರ ರೈಲು ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು.
ಪೆರೆಂಬೂರಿನ ರೈಲ್ವೆ ಕಾರ್ಖನೆಯಲ್ಲಿ ಈ ರೈಲಿನ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ. ಕೊಯಮತ್ತೂರು ರೈಲ್ವೆ ನಿಲ್ದಾಣಕ್ಕೆ ಈಗಾಗಲೇ ಬೋಗಿಗಳನ್ನು ತರಲಾಗಿದೆ.
ರೈಲು ರದ್ದಾದರೆ ನಿಮ್ಮ ಖಾತೆಗೆ ಆಟೋಮ್ಯಾಟಿಕ್ ರೀಫಂಡ್
ವೈ-ಫೈ ಸೌಲಭ್ಯ, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ಹಂಚಿಕೆ, ವಿಮಾನದ ತರಹದ ಎಲ್ಐಡಿ ಪರದೆ, ನಾಲ್ಕು ಕೋಚ್ಗಳ ಪ್ಯಾಂಟ್ರಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ರೈಲು ಒಳಗೊಂಡಿದೆ.
ವೇಳಾಪಟ್ಟಿ : ರೈಲು ನಂ 22666 ಕೊಯಮತ್ತೂರಿನಿಂದ 5.45ಕ್ಕೆ ಹೊರಡಲಿದ್ದು ಬೆಂಗಳೂರಿಗೆ 12.40ಕ್ಕೆ ತಲುಪಲಿದೆ. ರೈಲು ನಂಬರ್ 22777 ಬೆಂಗಳೂರಿನಿಂದ 2.15ಕ್ಕೆ ಹೊರಡಲಿದ್ದು, ರಾತ್ರಿ 9ಕ್ಕೆ ಕೊಯಮತ್ತೂರಿಗೆ ತಲುಪಲಿದೆ.