ಶನಿವಾರ ದೇವಿ ಶೆಟ್ಟಿ ಜೊತೆ ಜಗ್ಗಿ ವಾಸುದೇವ್ ಸಂವಾದ
ಬೆಂಗಳೂರು, ಜೂ.28:ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ಅವರು ಈಶ ಪ್ರತಿಷ್ಠಾನದ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರ ಜೊತೆ ಜ್ಞಾನಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸೇಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ಜೂ.28 ಶನಿವಾರ ಸಂಜೆ ಏಳು ಗಂಟೆಗೆ ಈ ಸಂವಾದ ಕಾರ್ಯಕ್ರಮ ನಡೆಯಲಿದೆ. ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಡಾ.ದೇವಿ ಶೆಟ್ಟಿ 'ಅವರ ಜೊತೆ 'ಮೆಕಾನಿಕ್ಸ್ ಆಫ್ ಹೆಲ್ತ್' ಎಂಬ ವಿಷಯದ ಬಗ್ಗೆ ಸಂವಾದ ನಡೆಯಲಿದೆ.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ಜಗ್ಗಿ ವಾಸುದೇವ್ ಅವರ 'ತ್ರೀ ಟ್ರೂಥ್ಸ್ ಆಫ್ ವೆಲ್ಬಿಯಿಂಗ್' ಇಂಗ್ಲಿಷ್ ಪುಸ್ತಕ ಬಿಡುಗಡೆಯಾಗಲಿದೆ.
ಕಾರ್ಯಕ್ರಮ ವೆಬ್ಸೈಟ್ನಲ್ಲಿ ನೇರಪ್ರಸಾರವಾಗಲಿದ್ದು ಆಸಕ್ತರು ವೀಕ್ಷಿಸಬಹುದಾಗಿದೆ. ವೆಬ್ಸೈಟ್ ಲಿಂಕ್ ಇಲ್ಲಿದೆ: www.inconversations.com
Comments
English summary
“In Conversation with the Mystic” will see Sadhguru discuss the “Mechanics of Health” with Dr. Devi Shetty, Chairman, Narayana Hrudayalaya, and a pioneer in the field of cardiac surgery. Date: 28/06/2014 Venue: St.Joseph's P.U.College Bangalore, Time : 7 pm
Story first published: Saturday, June 28, 2014, 9:49 [IST]