ತುಮಕೂರಿನಲ್ಲಿ ದೇವೇಗೌಡರ ಸೋಲು, ಮೊದಲ ಪ್ರತಿಕ್ರಿಯೆ
ಬೆಂಗಳೂರು, ಮೇ 23: ಸಮಾಜದ ಅಭಿವೃದ್ಧಿಗಾಗಿ ಎಂದಿಗೂ ಶ್ರಮಿಸಲು ನಾವು ಸಿದ್ಧ ಅದಕ್ಕೆ ಅಧಿಕಾರದ ಅವಶ್ಯಕತೆ ಇಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.
ಸೋಲಿನ ಬಳಿಕ ಟ್ವೀಟ್ ಮಾಡಿರುವ ಅವರು, ನನಗೆ ಬೆಂಬಲ ನೀಡಿದ ಮತದಾರರು, ಜನತಾದಳ, ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಕೆಲಸ ಸಮಾಜವನ್ನು ಅಭಿವೃದ್ಧಯತ್ತ ಕೊಂಡೊಯ್ಯುವುದು ಅದಕ್ಕೆ ಅಧಿಕಾರ ಬೇಕಿಲ್ಲ ಎಂದರು.
ಮಾಜಿ ಪ್ರಧಾನಿ ದೇವೇಗೌಡರಿಗೆ ಭಾರಿ ಮುಖಭಂಗ: ತುಮಕೂರಿನಲ್ಲಿ ಹೀನಾಯ ಸೋಲು
ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಸಂಸದರಿಗೂ ಧನ್ಯವಾದಗಳು, ನರೇಂದ್ರ ಮೋದಿಯ ದೊಡ್ಡ ಗೆಲುವಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
I thank the voters, leaders, party workers of both @JanataDal_S & @INCIndia and everyone who supported me.
— H D Devegowda (@H_D_Devegowda) May 23, 2019
Our work towards betterment of the society will never stop.
Congratulations to all the elected MPs.
Congratulations to @narendramodi on the big victory.
ಎಚ್ಡಿ ದೇವೇಗೌಡ ಅವರು ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಿಎಸ್ ಬಸವರಾಜು ವಿರುದ್ಧ ಸೋಲು ಅನುಭವಿಸಿದ್ದಾರೆ. ಅವರು ತಮ್ಮ ತವರು ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟಿದ್ದು, ಅವರು ಗೆಲುವು ಸಾಧಿಸಿದ್ದಾರೆ.