ಹಳೆ ನೆನಪು ಮೆಲುಕುಹಾಕುತ್ತಾ ದೋಸೆ ಸವಿದ ದೇವೇಗೌಡರು
ಬೆಂಗಳೂರು, ಆಗಸ್ಟ್ 19: ಮುದ್ದೆ ಪ್ರಿಯ ದೇವೇಗೌಡ ಅವರು ಇಂದು ಬಳೇಪೇಟೆಯಲ್ಲಿರುವ ಉಡುಪಿ ಶ್ರೀ ಕೃಷ್ಣ ಭವನ ಹೊಟೆಲ್ನಲ್ಲಿ ದೋಸೆ ಸವಿಯುತ್ತಾ ಹಳೆಯ ನೆನಪುಗಳಿಗೆ ಜಾರಿದರು.
ಇಂದು ಬೆಳಿಗ್ಗೆ ದೇವೇಗೌಡ ಅವರು ಬೆಂಗಳೂರಿನಲ್ಲಿರುವ ಶೃಂಗೇರಿ ಮಠದ ಚಂದ್ರ ಮೌಳೇಶ್ವರ ದೇವರ ದರ್ಶನ ಪಡೆದು ನಂತರ ಅಲ್ಲಿಂದ ಬಳೇಪೇಟೆಯಲ್ಲಿರುವ ಉಡುಪಿ ಶ್ರೀ ಕೃಷ್ಣ ಭವನ ಹೊಟೆಲ್ ಗೆ ತೆರಳಿದರು. ಅಲ್ಲಿ ತಮ್ಮ ಮೆಚ್ಚಿನ ದೋಸೆ ಸವಿದರು.
ತಿನ್ನುವ ಮೂಲಕವೇ ಕೋಟಿಗಟ್ಟಲೆ ಹಣ ಸಂಪಾದಿಸಿದ ಮಹಿಳೆ
ದೇವೇಗೌಡ ಅವರು 1962ರಲ್ಲಿ ಮೊದಲ ಬಾರಿ ಶಾಸಕರಾಗಿದ್ದಾಗ ಇದೇ ಹೊಟೆಲ್ನಲ್ಲಿ ದೋಸೆ ಸವಿಯುತ್ತಿದ್ದರು. ದೇವೇಗೌಡ ಅವರಿಗೆ ನೆಚ್ಚಿನ ಉಪಹಾರ ತಾಣ ಇದಾಗಿತ್ತು. ಹೊಟೆಲ್ಗೆ ಭೇಟಿ ನೀಡಿದ್ದ ಅವರು ಕೆಲ ಕಾಲ ಸಿಬ್ಬಂದಿಗಳೊಡನೆ ಮಾತನಾಡಿದರು.
ಬಳೆಪೇಟೆಯ ಶ್ರೀ ಕೃಷ್ಣಭವನ್ ಹೊಟೆಲ್ ಪ್ರಾರಂಭವಾಗಿದ್ದು 1926 ನೇ ಇಸವಿಯಲ್ಲಿ. ಇಲ್ಲಿನ ಮಸಾಲೆ ದೋಸೆ, ಇಡ್ಲಿ ಸಾಂಬಾರ್ ಬಹು ಪ್ರಸಿದ್ಧ. ಅದರಲ್ಲಿಯೂ ವಿಶೇಷವಾದ ಸಾಗು ಮಸಾಲೆ ದೋಸೆಗೆ ಇಲ್ಲಿನ ಹಾಟ್ ಸೆಲ್ಲರ್.
Comments
English summary
JDS president Deve Gowda today visited famous Balepete Sri Krishna Bhavan hotel. He had Dosa. He use visit this hotel from 1962.
Story first published: Monday, August 19, 2019, 15:01 [IST]