ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲ್ಲಿಕಟ್ಟುಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರಿಕೆ

ತಮಿಳನಾಡಿನ ಹಲವೆಡೆ ಭಾನುವಾರಂಡು ಜಲ್ಲಿಕಟ್ಟು ಆಯೋಜನೆಗೊಂಡಿದೆ. ಜಲ್ಲಿಕಟ್ಟು ಆಚರಣೆಗೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕಿದೆ. ಆದರೆ, ಬೆಂಗಳೂರಿನಲ್ಲಿ ತಮಿಳರು ಪ್ರತಿಭಟನೆ ಮುಂದುವರೆಸಿದ್ದಾರೆ.

By ಅನುಶಾ ರವಿ
|
Google Oneindia Kannada News

ಬೆಂಗಳೂರು, ಜನವರಿ 22: ತಮಿಳನಾಡಿನ ಹಲವೆಡೆ ಭಾನುವಾರಂಡು ಜಲ್ಲಿಕಟ್ಟು ಆಯೋಜನೆಗೊಂಡಿದೆ. ಜಲ್ಲಿಕಟ್ಟು ಆಚರಣೆಗೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕಿದ್ದರೂ, ಪೂರ್ಣ ಪ್ರಮಾಣದ ಕಾನೂನು ಜಾರಿಗೊಳ್ಳುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಬೆಂಗಳೂರಿನಲ್ಲಿರುವ ತಮಿಳರು ಪ್ರತಿಭಟನೆ ಮುಂದುವರೆಸಿದ್ದಾರೆ.

ಬೆಂಗಳೂರಿನ ಹಲಸೂರಿನಲ್ಲಿರುವ ತಮಿಳು ಸಂಘದ ಪ್ರಧಾನ ಕಚೇರಿ ಮುಂಭಾಗದಲ್ಲಿ ನೂರರು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ಮಕ್ಕಳು ಸೇರಿದ್ದಾರೆ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಬೆಂಗಳೂರು ಪೊಲೀಸರ ಅನುಮತಿ ಸಿಕ್ಕಿಲ್ಲದಿದ್ದರೂ ಪ್ರತಿಭಟನೆ ಜಾರಿಯಲ್ಲಿದೆ.

Despite Jallikattu ordinance, protests continue in Bengaluru too

ಪೆಟಾ ವಿರುದ್ಧದ ಹೇಳಿಕೆಯುಳ್ಳ ಪ್ಲೇಕಾರ್ಡ್ ಗಳು, ಜಲ್ಲಿಕಟ್ಟು ಪರ ಘೋಷಣೆಯುಳ್ಳ ಫಲಕಗಳನ್ನು ಹಿಡಿದು ಫುಟ್ ಪಾತ್ ನಲ್ಲಿ ಅನೇಕ ಮಂದಿ ನಿಂತಿದ್ದಾರೆ.

ಜಲ್ಲಿಕಟ್ಟು ಆಚರಣೆಗೆ ಕೇಂದ್ರದಿಂದ ಸುಗ್ರೀವಾಜ್ಞೆ ಸಿಕ್ಕಿರುವುದು ತಾತ್ಕಾಲಿಕ ಪರಿಹಾರವಾಗಿದೆ. ಈ ಬಗ್ಗೆ ಶಾಶ್ವತವಾದ ಕಾನೂನೂ ರೂಪಿಸುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಪ್ರತಿಭಟನಾಕಾರರು ನಮ್ಮ ಪ್ರತಿನಿಧಿಯ ಜತೆ ಹೇಳಿದರು.

English summary
Despite the Tamil Nadu government promulgating an ordinance allowing Jallikattu across the state, protests are continuing across the country. Dozens of youngsters in Bengaluru protested in support of Jallikattu outside the Tamil Sangam in Ulsoor locality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X