ಡಿಸಿಎಂಗೋವಿಂದ ಕಾರಜೋಳ ಪುತ್ರ ಡಾ.ಗೋಪಾಲ ಸ್ಥಿತಿ ಗಂಭೀರ
ಬೆಂಗಳೂರು, ಅ. 18: ಮುಧೋಳ ಶಾಸಕ, ಕರ್ನಾಟಕ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೊರೊನಾ ಸೋಂಕಿನಿಂದ ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಆದರೆ ಅವರ ಪುತ್ರ ಡಾ.ಗೋಪಾಲ ಕಾರಜೋಳ ಅವರಿಗೆ ಕೊರೊನಾ ಸೋಂಕು ಇನ್ನೂ ಬಾಧಿಸುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಡಿಸಿಎಂ ಕಾರಜೋಳ ಅವರ ಇಡೀ ಕುಟುಂಬ ಕೊವಿಡ್ 19 ಬಾಧಿತವಾಗಿತ್ತು. ಇತ್ತೀಚೆಗಷ್ಟೇ ಕಾರಜೋಳ ಅವರು ಗುಣಮುಖರಾಗಿದ್ದರು. ಇತ್ತೀಚೆಗೆ ಶಿರಾ ಉಪ ಚುನಾವಣೆ ಕ್ಷೇತ್ರದ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಗೋವಿಂದ ಕಾರಜೋಳ ಪಾಲ್ಗೊಂಡಿದ್ದರು.
ಇದೀಗ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಗಳಿಂದ ವೆಂಟಿಲೇಟರ್ ಸಹಾಯದಿಂದ ಉಸಿರಾಟ ನಡೆಸುತ್ತಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಆರೋಗ್ಯದಲ್ಲಿ ಸುಧಾರಣೆ ಕಂಡು ಬಾರದ ಹಿನ್ನಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚೆನ್ನೈ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.
ಸಿಎಂ
ಯಡಿಯೂರಪ್ಪ
ಪ್ರತಿಕ್ರಿಯೆ:
ಬೆಂಗಳೂರಿನಲ್ಲಿ
ಮುಖ್ಯಮಂತ್ರಿ
ಬಿಎಸ್
ಯಡಿಯೂರಪ್ಪ
ಈ
ಬಗ್ಗೆ
ಪ್ರತಿಕ್ರಿಯಿಸಿ,
ಗೋವಿಂದ
ಕಾರಜೋಳ
ಅವರ
ಮಗ
ಸಿರಿಯಸ್
ಇದ್ದಾರೆ.
ಸ್ಪೆಷಲ್
ಫ್ಲೈಟ್
ನಲ್ಲಿ
ಅವರ
ಮಗನನ್ನು
ಚೆನ್ನೈಗೆ
ಕರೆದುಕೊಂಡು
ಹೋಗುತ್ತಿದ್ದಾರೆ.
ನೆರೆ
ಪ್ರದೇಶಗಳಿಗೆ
ಜಿಲ್ಲಾ
ಉಸ್ತುವಾರಿ
ಸಚಿವರು
ತೆರಳಲು
ಸಾಧ್ಯವಾಗುತ್ತಿಲ್ಲ.
ಕೆಲವು
ಸಚಿವರು
ನೆರೆ
ಪೀಡಿತ
ಜಿಲ್ಲೆಗಳಿಗೆ
ಭೇಟಿ
ಕೊಟ್ಟಿದ್ದಾರೆ.
ಸಮಸ್ಯೆಗಳಿವೆ,
ಉಳಿದವರು
ಅವರ
ಶಕ್ತಿ
ಮೀರಿ
ಕೆಲಸ
ಮಾಡ್ತಿದ್ದಾರೆ
ಎಂದಿದ್ದಾರೆ.
ಕಾರಜೋಳ
ಪ್ರತಿಕ್ರಿಯೆ:
ಶಿರಾದಲ್ಲಿ
ಕಾಣಿಸಿಕೊಂಡಿದ್ದ
ಕಾರಜೋಳ
ಅವರು
ಪ್ರವಾಹ
ಪೀಡಿತ
ಕಲಬುರಗಿಗೆ
ಏಕೆ
ಹೋಗಿಲ್ಲ
ಎಂದು
ವಿಪಕ್ಷ,
ಸಾರ್ವಜನಿಕರು
ಪ್ರಶ್ನಿಸಿದ್ದರು.
ಇದಕ್ಕೆ
ಪ್ರತಿಕ್ರಿಯಿಸಿದ್ದ
ಕಾರಜೋಳ
''ನನಗೆ
70
ವರ್ಷ
ವಯಸ್ಸು,
ನನ್ನ
ಇಡೀ
ಜೀವಮಾನ
ನಾನು
ಹೇಗೆ
ಕೆಲಸ
ಮಾಡಿದ್ದೇನೆ
ಎಂಬುದನ್ನು
ಜನರು
ಗಮನಿಸಿದ್ದಾರೆ.
ನಾನು
ಈ
ಸಂದರ್ಭದಲ್ಲಿ
ಆರನೂರು
ಏಳನೂರು
ಕಿ.ಮೀ.
ದೂರದ
ಕಲಬುರಗಿಗೆ
ಪ್ರಯಾಣಿಸಲು
ಆಗುತ್ತಿಲ್ಲ.
ಕಾರಣ
ನನ್ನ
ಕುಟುಂಬ
ಪೂರ್ತಿ
ಕೊರೊನಾ
ಸಂಕಷ್ಟಕ್ಕೆ
ಸಿಲುಕಿದೆ''
ಎಂದು
ಸ್ಪಷ್ಟನೆ
ನೀಡಿದ್ದರು.
ನಾನು ಹೋಗದಿದ್ದರೇ ಏನಾಯ್ತು? ನನಗಿಂತ ಪವರ್ಫುಲ್ ಮಿನಿಸ್ಟರ್, ಕಂದಾಯ ಸಚಿವ ಆರ್. ಅಶೋಕ್ ಅವರು ಅಲ್ಲಿಗೆ ಭೇಟಿ ಕೊಟ್ಟು, ಪ್ರವಾಹ ಪೀಡಿತರನ್ನು ಭೇಟಿ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಕಲಬುರಗಿ ಜಿಲ್ಲೆಯ ಜನರಿಗೆ ಸಮಜಾಯಿಷಿ ಕೊಟ್ಟಿದ್ದರು.
Recommended Video
ಪ್ರವಾಹಕ್ಕೆ ಸಿಲುಕಿ ನಲಗುತ್ತಿರುವ ಜನರನ್ನು ಕಡೆಗಣಿಸಿ ಚುನಾವಣಾ ಪ್ರಚಾರಕ್ಕೆ ತೆರಳಿರುವುದು ಸರಿಯಲ್ಲ. ನಮ್ಮ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಕಾರಜೋಳ ಅವರು ರಾಜೀನಾಮೆ ಕೊಡಲಿ ಎಂದು ಅಲ್ಲಿನ ಜನರು ಒತ್ತಾಯಿಸಿದ್ದನ್ನು ಇಲ್ಲಿಸ್ಮರಿಸಬಹುದು.