ಆರ್.ಟಿ ನಗರದಲ್ಲಿ ಮೂರು ದಿನಗಳ ‘ಸಂಸ್ಕೃತಿ ಸಿರಿ ದೇಸಿ ಹಬ್ಬ’
ಬೆಂಗಳೂರು ಅಕ್ಟೋಬರ್ 17: ಡೈಮಂಡ್ ಟ್ರೀ ಇವೆಂಟ್ ಮ್ಯಾನೇಜ್ ಮೆಂಟ್ ವತಿಯಿಂದ ಆರ್ ಟಿ ನಗರ ಪೊಲೀಸ್ ಠಾಣೆ ಎದುರಿರುವ ಎಚ್ ಎಂ ಟಿ ಆಟದ ಮೈದಾನದಲ್ಲಿ ಮೂರು ದಿನಗಳ 'ಸಂಸ್ಕೃತಿ ಸಿರಿ ದೇಸಿ ಹಬ್ಬ ಆಯೋಜಿಲಾಗಿದೆ. ಈ 'ಸಂಸ್ಕೃತಿ ಸಿರಿ ದೇಸಿ ಹಬ್ಬ' ಅಕ್ಟೋಬರ್ 17, 18, 19ರಂದು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಂಗೀತದ ರಸದೌತಣದ ಜತೆಗೆ ತಿನಿಸು ಪ್ರಿಯರಿಗಾಗಿ ದೇಸಿ ರುಚಿಯ ವಿವಿಧ ಬಗೆಯ ಖಾದ್ಯಗಳು ಇಲ್ಲಿವೆ ಹಾಗೇ ಶಾಪಿಂಗ್ ಪ್ರಿಯರಿಗಾಗಿ ಶಾಪಿಂಗ್ ಮೇಳ, ಪುಸ್ತಕ ಪ್ರಿಯರಿಗಾಗಿ ಪುಸ್ತಕ ಮೇಳ, ಹೆಣ್ಣುಮಕ್ಕಳಿಗಾಗಿ ಕಸೂತಿ ಸೀರೆಗಳು, ಆಭರಣಗಳ ಪ್ರದರ್ಶನವಿದೆ. ಇನ್ನು ಮಕ್ಕಳ ಮನತಣಿಸಲು ವಿವಿಧ ಬಗೆಯ ಮಕ್ಕಳ ಆಟಿಕೆಗಳು ಹಾಗೂ ಆಟಗಳು ಇಲ್ಲಿವೆ.
ಮೂರು ದಿನವೂ ವಿವಿಧ ಬಗೆಯ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಇದು ಮಕ್ಕಳಿಂದ ಹಿಡಿದು ದೊಡ್ಡವರಿಗೂ ಮುದ ನೀಡಲಿದೆ.
ಅಕ್ಟೋಬರ 17ರಂದು ಕಲರ್ಸ್ ಕನ್ನಡದ ಮಜಾ ಟಾಕೀಸ್ ಖ್ಯಾತಿಯ ರೆಮೊ ಅವರಿಂದ ಸಂಗೀತ ಕಾರ್ಯಕ್ರಮವಿದೆ. ಹಾಗೇ ಗುರುವಾರ ಸಂಜೆ ನಾವೇ ಭಾಗ್ಯವಂತರು ಸಿನಿಮಾ ತಂಡದಿಂದ ಮನೋರಂಜನೆ ಕಾರ್ಯಕ್ರಮವಿದೆ. ಹಾಗೇ ಮ್ಯಾಜಿಕ್ ಶೋ ಕೂಡ ನಡೆಯಲಿದೆ. ಇದರ ಜತೆಗೆ ಉಚಿತ ಆರೋಗ್ಯ ತಪಾಸಣೆ ಕೂಡ ಇದೆ.
ಇನ್ನು ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನಟಿ ಹಾಗೂ ರೂಪದರ್ಶಿ ಚಂದನಾ ದೇವರಾಜ್ ಗೌಡ ದೀಪ ಬೆಳಗಿಸಲಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಕೂಡ ಈ ಮೂರು ದಿನದ ಸಂಸ್ಕೃತಿ ಸಿರಿ ದೇಸಿ ಹಬ್ಬಕ್ಕೆ ತಮ್ಮ ಸಹಕಾರವನ್ನು ನೀಡಿದ್ದಾರೆ.
ಸ್ಥಳ:
ಆರ್ ಟಿ ನಗರ ಎಚ್ ಎಂ ಟಿ ಪಾಳ್ಯ ಮೈದಾನ,
ಸಮಯ ಬೆಳಿಗ್ಗೆ 9.30ರಿಂದ ರಾತ್ರ 9.30ವರೆಗೆ
ಆರ್.ಟಿ ನಗರ ಪೊಲೀಸ್ ಸ್ಟೇಷನ್ ಎದುರು
ಮೂರುದಿನವೂ ನಿಮ್ಮ ಮನೆಮಂದಿಯ ಮನಸ್ಸುಗಳಿಗೆ ಮುದ ನೀಡಲಿರುವ ಈ ಕಾರ್ಯಕ್ರಮದಲ್ಲಿ ಖುಷಿಯಿಂದ ಪಾಲ್ಗೊಳ್ಳಬಹುದಾಗಿದೆ.