ರಂಗಶಂಕರದಲ್ಲಿ ನಿತ್ಯ ನಾಟಕೋತ್ಸವ ಮತ್ತೆ ಶುರು
ಬೆಂಗಳೂರು, ಅಕ್ಟೋಬರ್ 04: ರಂಗಶಂಕರದಲ್ಲಿ ನಿತ್ಯ ನಾಟಕೋತ್ಸವ ಆರಂಭಗೊಂಡಿದೆ.
ರಾಜ್ಯ ಸರ್ಕಾರದ ಕೋವಿಡ್ ನಿಯಮಾವಳಿಯಂತೆ ಅಕ್ಟೋಬರ್ 1 ರಿಂದ ಚಿತ್ರಮಂದಿರ ಮತ್ತು ರಂಗ ಮಂದಿರಗಳಿಗೆ (100%) ಪೂರ್ಣ ಪ್ರಮಾಣದ ಸಾಮಥ್ರ್ಯದೊಂದಿಗೆ ಅನುಮತಿ ನೀಡಿದೆ.
ರಾತ್ರಿ 10 ರಿಂದ ಕರ್ಫ್ಯೂ ಇರುವ ಕಾರಣ ರಂಗ ಶಂಕರದಲ್ಲಿ ಪ್ರತಿ ದಿನ ಸಂಜೆ 7.30 ರ ಬದಲಾಗಿ ಸಂಜೆ 7 ಗಂಟೆಗೆ ಪ್ರದರ್ಶಗಳು ಪ್ರಾರಂಭಗೊಂಡಿವೆ. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಮಧ್ಯಾಹ್ನ 3.30 ಮತ್ತು ಸಂಜೆ 7 ಕ್ಕೆ ಪ್ರದರ್ಶನಗಳು ನಡೆಯುತ್ತವೆ.
ನಾವು ನಮ್ಮ ಪ್ರೇಕ್ಷಕ ಸಮುದಾಯವನ್ನು ವಿನಂತಿಸಿ ಕೊಳ್ಳುವುದೇನಂದರೆ ರಂಗ ಶಂಕರಕ್ಕೆ ಪ್ರವೇಶಿಸುವಾಗ ಕೋವಿಡ್-19 ಲಸಿಕೆಯ ಒಂದು ಡೋಸ್ ಪಡೆದಿದ್ದೇವೆ ಎಂದು (ಡಿಜಿಟಲ್ ಅಥವಾ ಕಾಗದ) ಪುರಾವೆಗಳನ್ನು ತಪ್ಪದೆ ಜೊತೆಗೆ ತರಲು ವಿನಂತಿಸುತ್ತೇವೆ. ಲಸಿಕೆ ಪ್ರಮಾಣ ಪತ್ರವನ್ನು ಒದಗಿಸದಿದ್ದರೆ,
ನಾವು ನೀಡುವ ಪೇಪರ್ನಲ್ಲಿ ಕನಿಷ್ಠ ಒಂದು ಲಸಿಕೆಯನ್ನು ಪಡೆದಿದ್ದೇವೆ ಎಂದು ಘೋಷಣೆಯೊಂದಿಗೆ ಸಹಿ ಹಾಕಬೇಕಾಗುತ್ತದೆ. ಲಸಿಕೆ ಹಾಕಿಸಿಕೊಳ್ಳದ ಪ್ರೇಕ್ಷಕರಿಗೆ ರಂಗ ಮಂದಿರದೊಳಗೆ ಪ್ರವೇಶವಿಲ್ಲ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅವರ ಆರೋಗ್ಯದ ಸುರಕ್ಷತೆಯಿಂದ ಕೋವಿಡ್ - 19 ಲಸಿಕೆ ಲಭ್ಯವಾಗುವವರೆಗೆ ರಂಗ ಶಂಕರದಲ್ಲಿ ಪ್ರವೇಶವನ್ನು ನೀಡಲಾಗುವುದಿಲ್ಲ.
ಕಾರ್ಯಕ್ರಮಗಳ
ವೇಳಾಪಟ್ಟಿಗಾಗಿ
www.rangashankara.org
ನಲ್ಲಿ,
ರಂಗ
ಶಂಕರದ
ಡಿಜಿಟಲ್
ಮಾಧ್ಯಮದಲ್ಲಿ
ಮತ್ತು
ರಂಗ
ಶಂಕರದಲ್ಲಿ
ಲಭ್ಯವಿರುತ್ತದೆ.
ರಂಗ
ಶಂಕರದಲ್ಲಿ
ನಡೆಯುವ
ಎಲ್ಲಾ
ಪ್ರದರ್ಶನಗಳಿಗೆ
ಟಿಕೆಟ್ಗಳುbookmyshow.com
ಮತ್ತು
ಬಾಕ್ಸ್
ಆಫೀಸ್ನಲ್ಲಿ
ಲಭ್ಯವಿರುತ್ತವೆ.
ಎಲ್ಲಾ
ಕೋವಿಡ್-19
ರ
ನಿಯಮಗಳು
ಮತ್ತು
ಪ್ರೋಟೋಕಾಲ್ಗಳೊಂದಿಗೆ
ನಿಮ್ಮನ್ನು
ಸ್ವಾಗತಿಸುತ್ತೇವೆ.
ರಂಗ ಶಂಕರ ಬೆಂಗಳೂರಿನ ಹೆಸರಾಂತ ರಂಗಭೂಮಿ ವೇದಿಕೆಗಳಲ್ಲಿ ಒಂದು. ಬೆಂಗಳೂರಿನ ಜೆ.ಪಿ.ನಗರ ದಲ್ಲಿರುವ ಇದು 2004ರಂದು ಪ್ರಾರಂಭವಾಗಿದೆ. ಸಂಕೇತ ಟ್ರಸ್ಟ್ ರವರು ಇದನ್ನು ನಿರ್ವಹಿಸುತ್ತಿದ್ದಾರೆ. 2004ರಲ್ಲಿ ತೆರೆಯಲ್ಪಟ್ಟ ಸಭಾಂಗಣವು ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟರಾಗಿದ್ದ ಅವರ ದಿವಂಗತ ಪತಿ ಶಂಕರ್ ನಾಗ್ ನೆನಪಿನಲ್ಲಿ ಅರುಂಧತಿ ನಾಗ್ ಅವರಿಂದ ಕಲ್ಪಿತವಾಗಿದೆ.
ಎಲ್ಲಾ ಭಾಷೆಗಳಲ್ಲೂ ರಂಗಮಂದಿರವನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಜಾಗವನ್ನು ಕಡಿಮೆ ದರದಲ್ಲಿ ಬಾಡಿಗೆ ನೀಡುವಲ್ಲಿ ಸ್ವತಃ ಪ್ರಚೋದಿಸುತ್ತದೆ. ಇದು ಕನಿಷ್ಟ "ಒಂದು ದಿನ ಒಂದು ದಿನ" ನೀತಿಯನ್ನು ಅನುಸರಿಸುತ್ತದೆ, ವಾರದಲ್ಲಿ ಆರು ದಿನಗಳು (ಸೋಮವಾರ ಹೊರತುಪಡಿಸಿ).
ಪ್ರಾರಂಭದಿಂದಲೂ 2,700 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವು ಕನ್ನಡದಲ್ಲಿವೆ, ಆದರೂ ಇನ್ನೂ 20 ಇತರ ಭಾಷೆಗಳಲ್ಲಿ ನಾಟಕಗಳು ನಡೆದಿವೆ.
2001 ರಲ್ಲಿ ನಿರ್ಮಾಣವು ಪ್ರಾರಂಭವಾಯಿತು.ಸುಮಾರು ₹ 3 ಕೋಟಿ ಯೋಜನೆಯ ಸಂಪೂರ್ಣ ವೆಚ್ಚ. ಸಾಮಾನ್ಯ ಥಿಯೇಟರ್ ಪ್ರೇಮಿಗಳಿಂದ ₹ 5 ರಿಂದ ಕೈಗಾರಿಕೋದ್ಯಮಿಗಳಿಂದ ದೊಡ್ಡ ಪ್ರಮಾಣದವರೆಗೆ ದೆಣಿಗೆ ಮೂಲಕ ಸಂಗ್ರಹಿಸಲಾಯಿತು.
ರಂಗ
ಶಂಕರ
ಸಂಕೀರ್ಣ
ವಾಸ್ತುಶಿಲ್ಪಿ
ಶರುಖ್
ಮಿಸ್ತ್ರಿ
ವಿನ್ಯಾಸಗೊಳಿಸಿದರು
ಮತ್ತು
ಇದನ್ನು
ಸಾರ್ವಜನಿಕರಿಗೆ
ಅಕ್ಟೋಬರ್
28,
2004
ರಂದು
ತೆರೆಯಲಾಯಿತು.
ರಾಜ್ಯದಲ್ಲಿ
ಕೊರೊನಾ
ಪ್ರಕರಣಗಳ
ಸಂಖ್ಯೆಯಲ್ಲಿ
ಇಂದು
ಇಳಿಕೆಯಾಗಿದ್ದು
ಕಳೆದ
24
ಗಂಟೆಯಲ್ಲಿ
397
ಕೊರೊನಾ
ಪ್ರಕರಣಗಳು
ವರದಿಯಾಗಿದೆ.
ಇದರೊಂದಿಗೆ
ಸೋಂಕಿತರ
ಸಂಖ್ಯೆ
2,978,286ಕ್ಕೆ
ಏರಿಕೆಯಾಗಿದೆ.
ಮಹಾಮಾರಿಗೆ
ಇಂದು
13
ಮಂದಿ
ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು 166 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,47,258ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಇಂದು 693 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,28,433ಕ್ಕೆ ಏರಿಕೆಯಾಗಿದೆ. ಇನ್ನು11,992 ಸಕ್ರೀಯ ಪ್ರಕರಣಗಳಿವೆ.
ರಾಜ್ಯಾದ್ಯಂತ ಇಂದು 78,958 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 397 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.50ಕ್ಕೆ ಇಳಿದಿದೆ.