Breaking News: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಮೂವರು ಸಾವು
ಬೆಂಗಳೂರು, ಸೆಪ್ಟೆಂಬರ್ 21: ಸಿಲಿಕಾನ್ ಸಿಟಿಯ ಇತ್ತೀಚಿಗೆ ಅಪಘಾತ ಮತ್ತು ಅಗ್ನಿ ಅವಘಡಗಳ ಸಂಖ್ಯೆ ಹೆಚ್ಚುತ್ತಿದೆ. ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ಮಧ್ಯಾಹ್ನ 3.30ರ ವೇಳೆಗೆ ಸಿಲಿಂಡರ್ ಸೋರಿಕೆಯಾಗಿದೆ. ನೋಡನೋಡುತ್ತಿದ್ದಂತೆ ಬೆಂಕಿ ಹೊತ್ತುಕೊಂಡಿದ್ದು, ಮೂವರು ಸಜೀವದಹನವಾಗಿದ್ದಾರೆ.
Recommended Video
ಬೆಂಗಳೂರಿನ ದೇವರಚಿಕ್ಕನಹಳ್ಳಿಯಲ್ಲಿ ಇರುವ ಆಶ್ರಿತ್ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಒಂದು ಫ್ಲೋರ್ ನಿಂದ ಮೂರು ಫ್ಲೋರ್ ಗೆ ಬೆಂಕಿ ವ್ಯಾಪಿಸಿದೆ. ಫ್ಲ್ಯಾಟ್ ನಲ್ಲಿದ್ದ ಮೂವರು ಮೃತಪಟ್ಟಿದ್ದು, ತಮ್ಮ ಪ್ರಾಣ ಉಳಿಸುವಂತೆ ಮಹಿಳೆ ಅಂಗಲಾಚುತ್ತಿದ್ದರು. ಆದರೆ ಕೆಲಕ್ಷಣದಲ್ಲೇ ಬೆಂಕಿಯ ಕೆನ್ನಾಲಿಗೆಗೆ ಮಹಿಳೆಯು ಸಜೀವ ದಹನವಾಗಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆಶ್ರಿತ್
ಅಪಾರ್ಟ್ಮೆಂಟ್ನ
ಫ್ಲ್ಯಾಟ್
ನಲ್ಲಿದ್ದ
ಐವರ
ಪೈಕಿ
ಮೂವರು
ಹೊರಗೆ
ಓಡಿ
ಬಂದು
ಪ್ರಾಣ
ಉಳಿಸಿಕೊಂಡಿದ್ದಾರೆ.
ಅವರು
ಕುಟುಂಬದ
ಮಗ
ಹಾಗೂ
ಮಗಳು
ಬೆಂಕಿಯಿಂದ
ಬಚಾವ್
ಆಗಿ
ತಪ್ಪಿಸಿಕೊಂಡು
ಬಂದಿದ್ದಾರೆ
ಎಂದು
ಸ್ಥಳೀಯರು
ತಿಳಿಸಿದ್ದಾರೆ.
ಬೆಂದಿ
ನಂದಿಸುವ
ಕಾರ್ಯ:
ದೇವರಚಿಕ್ಕನಹಳ್ಳಿಯಲ್ಲಿ
ಇರುವ
ಆಶ್ರಿತ್
ಅಪಾರ್ಟ್ಮೆಂಟ್ನ
ಬೇರೆ
ಭಾಗಗಳಿಗೆ
ಬೆಂಕಿ
ವ್ಯಾಪಿಸುತ್ತಿದೆ.
ಸ್ಥಳಕ್ಕೆ
ಬೇಗೂರು
ಠಾಣೆ
ಪೊಲೀಸರು
ಭೇಟಿ
ನೀಡಿ
ಪರಿಶೀಲನೆ
ನಡೆಸುತ್ತಿದ್ದಾರೆ.
ಅಗ್ನಿಶಾಮಕ
ದಳ
ಸಿಬ್ಬಂದಿ
ಸ್ಥಳಕ್ಕೆ
ದೌಡಾಯಿಸಿದ್ದು,
ಬೆಂಕಿ
ನಂದಿಸುವುದಕ್ಕೆ
ಹರಸಾಹಸ
ಪಡುತ್ತಿದ್ದಾರೆ.
ಸದ್ಯ
ಮೊದಲಿಗೆ
ಬೆಂಕಿ
ಕಾಣಿಸಿಕೊಂಡ
ಮೂರನೇ
ಮಹಡಿಯಲ್ಲಿ
ಬೆಂಕಿ
ನಿಯಂತ್ರಣಕ್ಕೆ
ಬಂದಿದೆ.
ಆದರೆ
ಮೇಲಿನ
ಎರಡು
ಮಹಡಿಗಳಿಗೆ
ಬೆಂಕಿ
ವ್ಯಾಪಿಸಿದೆ.
ಮಧ್ಯಾಹ್ನದ
ವೇಳೆ
ಆಗಿದ್ದರಿಂದ
ತಪ್ಪಿದ
ಅನಾಹುತ:
ಬೆಂಗಳೂರಿನ
ಆಶ್ರಿತ್
ಅಪಾರ್ಟ್ಮೆಂಟ್ನಲ್ಲಿ
ಮಧ್ಯಾಹ್ನ
3.30ರ
ವೇಳೆಗೆ
ಬೆಂಕಿ
ಕಾಣಿಸಿಕೊಳ್ಳುತ್ತಿದ್ದಂತೆ
ಎಚ್ಚೆತ್ತುಕೊಂಡ
ಅಕ್ಕಪಕ್ಕದ
ಫ್ಲ್ಯಾಟ್
ಮಂದಿಗೆ
ಹೊರಗಡೆ
ಓಡಿ
ಬಂದು
ತಮ್ಮ
ಪ್ರಾಣ
ರಕ್ಷಿಸಿಕೊಂಡಿದ್ದಾರೆ.
ಒಂದು
ಫ್ಲ್ಯಾಟಿನ
ಬಾಗಿಲು
ಹಾಕಿಕೊಂಡಿತ್ತು
ಎಂದು
ತಿಳಿದು
ಬಂದಿದೆ.
ಅಲ್ಲದೇ
ಮಧ್ಯಾಹ್ನದ
ವೇಳೆ
ಆಗಿದ್ದ
ಹಿನ್ನೆಲೆ
ಬಹುತೇಕ
ಜನರು
ಕಚೇರಿಗೆ
ತೆರಳಿದ್ದರಿಂದ
ದೊಡ್ಡ
ದುರಂತವೊಂದು
ತಪ್ಪಿದಂತೆ
ಆಗಿದೆ.
ಇಲ್ಲದೇ
ಸಂಜೆ
ವೇಳೆ
ಘಟನೆ
ನಡೆದಿದ್ದರೆ
ಅಕ್ಕಪಕ್ಕದವರು
ಮನೆಗೆ
ವಾಪಸ್ಸಾಗುತ್ತಿದ್ದರು.
ಆಗ
ದೊಡ್ಡ
ದುರಂತವೇ
ನಡೆದು
ಹೋಗುತ್ತಿತ್ತು
ಎನ್ನುವುದು
ಸ್ಥಳೀಯರ
ಆತಂಕದ
ನುಡಿ.