ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರೇಕಿಂಗ್ ನ್ಯೂಸ್; ಬೆಂಗಳೂರಲ್ಲಿ ಮೇ 23ರ ಸಂಜೆಯಿಂದ ಕರ್ಫ್ಯೂ ಜಾರಿ

|
Google Oneindia Kannada News

ಬೆಂಗಳೂರು, ಮೇ 22 : ಕರ್ನಾಟಕ ಸರ್ಕಾರ ಲಾಕ್ ಡೌನ್‌ ನಿಯಮ ಸಡಿಲಿಸಿದೆ. ಆದರೆ, ಭಾನುವಾರ ಯಾವುದೇ ವಿನಾಯಿತಿ ಇರುವುದಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅಂದು ಅವಕಾಶ ನೀಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ.

Recommended Video

KSRTC ಬಸ್ ಹತ್ತಿ ಸಂಪೂರ್ಣ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ | Siddaramaiah | Oneindia Kannada

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಈ ಕುರಿತು ಮಾಹಿತಿ ನೀಡಿದರು. "ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆ ತನಕ ಬೆಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ" ಎಂದರು.

ಭಾನುವಾರ ಸಂಪೂರ್ಣ ಲಾಕ್ ಡೌನ್; ಮದುವೆ ಮಾಡಬಹುದೇ? ಭಾನುವಾರ ಸಂಪೂರ್ಣ ಲಾಕ್ ಡೌನ್; ಮದುವೆ ಮಾಡಬಹುದೇ?

"ಬೆಂಗಳೂರಿನ ಜನರು ಇದುವರೆಗೂ ಲಾಕ್‌ ಡೌನ್‌ಗೆ ಸಹಕಾರ ನೀಡಿದ್ದಾರೆ. ಇದೇ ಮಾದರಿಯಲ್ಲಿ ಕರ್ಫ್ಯೂಗೂ ಸಹಕಾರ ನೀಡಬೇಕು. ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸರ್ಕಾರ ಸೂಚಿಸಿದೆ" ಎಂದು ಆಯುಕ್ತರು ಹೇಳಿದರು.

ಮೇ 25ರಿಂದ ಹೊಸ ಮಾರ್ಗಸೂಚಿ: ಬೆಂಗಳೂರು ಟು ದೆಹಲಿ ವಿಮಾನದ ಟಿಕೆಟ್ ಬೆಲೆ ಎಷ್ಟು?ಮೇ 25ರಿಂದ ಹೊಸ ಮಾರ್ಗಸೂಚಿ: ಬೆಂಗಳೂರು ಟು ದೆಹಲಿ ವಿಮಾನದ ಟಿಕೆಟ್ ಬೆಲೆ ಎಷ್ಟು?

ಶನಿವಾರ ಸಂಜೆ 7 ಗಂಟೆ ಬಳಿಕ ಸರ್ಕಾರಿ ಬಸ್, ರೈಲು ಸೇರಿದಂತೆ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಭಾನುವಾರ ಅಗತ್ಯ ವಸ್ತಗಳ ಖರೀದಿಗೆ ಮಾತ್ರ ಅವಕಾಶವಿದ್ದು, ಉಳಿದಂತೆ ಯಾವುದೇ ಸೇವೆ ಲಭ್ಯ ಇರುವುದಿಲ್ಲ. ಕರ್ನಾಟಕ ಸರ್ಕಾರ 4ನೇ ಹಂತದ ಲಾಕ್ ಡೌನ್‌ ಮಾರ್ಗಸೂಚಿಯಲ್ಲಿಯೂ ಇದನ್ನು ಸ್ಪಷ್ಟಪಡಿಸಿದೆ.

ಮೊದಲ ದಿನ ಬೆಂ-ಬೆಳಗಾವಿ, ಬೆಂ-ಮೈಸೂರು ರೈಲಿಗೆ ಪ್ರಯಾಣಿಕರ ಕೊರತೆ ಮೊದಲ ದಿನ ಬೆಂ-ಬೆಳಗಾವಿ, ಬೆಂ-ಮೈಸೂರು ರೈಲಿಗೆ ಪ್ರಯಾಣಿಕರ ಕೊರತೆ

ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

"ಬೆಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ. ವೈದ್ಯಕೀಯ, ದಿನಸಿ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅನಗತ್ಯವಾಗಿ ಓಡಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಭಾಸ್ಕರ್‌ ರಾವ್ ಎಚ್ಚರಿಕೆ ನೀಡಿದರು.

ಸರ್ಕಾರದ ಆದೇಶವನ್ನು ಪಾಲಿಸಿ

ಸರ್ಕಾರದ ಆದೇಶವನ್ನು ಪಾಲಿಸಿ

ಕರ್ನಾಟಕ ಸರ್ಕಾರ ಲಾಕ್ ಡೌನ್ 4ರ ಮಾರ್ಗಸೂಚಿ ಬಿಡುಗಡೆ ಮಾಡುವಾಗ ನೀಡಿದ ಆದೇಶವನ್ನು ಜನರು ಪಾಲನೆ ಮಾಡಬೇಕು. ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಲು ಪೊಲೀಸರ ಜೊತೆ ಜನರು ಸಹಕಾರ ನೀಡಬೇಕು ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

ಬಿಗಿ ಭದ್ರತೆ ಇರಲಿದೆ

ಬಿಗಿ ಭದ್ರತೆ ಇರಲಿದೆ

ಬೆಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿ ಇರುವಾಗ ಬಿಗಿ ಭದ್ರತೆ ಇರಲಿದೆ. ರೈಲು, ವಿಮಾನ, ಸರ್ಕಾರಿ ಬಸ್‌ಗಳ ಸಂಚಾರ ಇರುವುದಿಲ್ಲ. ಜನರು ಅನಗತ್ಯವಾಗಿ ಸಂಚಾರ ನಡೆಸಬಾರದು. ಲಾಕ್ ಡೌನ್ ವೇಳೆಯಲ್ಲಿ ಸಹಕಾರ ನೀಡಿದಂತೆ ಕರ್ಫ್ಯೂ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಪಾಲನೆ

ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಪಾಲನೆ

ಕೇಂದ್ರಾಡಳಿತ ಮತ್ತು ರಾಜ್ಯಗಳು ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ಆರೋಪಗಳು ಇವೆ. ಗೃಹ ಇಲಾಖೆ ಕಾರ್ಯದರ್ಶಿ ಈಗಾಗಲೇ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

English summary
Bengaluru city commissioner of police Bhaskar Rao said that curfew will imposed in city from May 23 7 pm to May 25 7 am. No relaxation in lockdown rules on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X