ಕೇರಳದ ದುರಂತ : ಬೆಂಗಳೂರು ಕರಗದಲ್ಲಿ ಪಟಾಕಿ ನಿಷೇಧ
ಬೆಂಗಳೂರು, ಏಪ್ರಿಲ್ 12 : ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತದ ಹಿನ್ನಲೆಯಲ್ಲಿ ಬೆಂಗಳೂರಿನ ಕರಗದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. ಏ.12ರಿಂದ 24ರ ವರೆಗೆ ಕರಗ ಮಹೋತ್ಸವ ನಡೆಯಲಿದೆ.
ಧರ್ಮರಾಯಸ್ವಾಮಿ
ದೇವಾಲಯ
ಕರಗ
ಮಹೋತ್ಸವ
ಸಮಿತಿಯ
ಗೌರವ
ಅಧ್ಯಕ್ಷ
ಪಿ.ಆರ್.ರಮೇಶ್
ಅವರು
ಈ
ಕುರಿತು
ಮಾಹಿತಿ
ನೀಡಿದ್ದಾರೆ.
'ಏ.22ರಂದು
ನಡೆಯುವ
ಕರಗದಂದು
ಪಟಾಕಿ
ಹೊಡೆಯುವ
ಬದಲು
ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು
ಆಯೋಜಿಸಲಾಗುತ್ತದೆ'
ಎಂದು
ಹೇಳಿದ್ದಾರೆ.
[ಪಟಾಕಿ
ಹೊಡೆಯಬೇಡಿ
ಎಂಬ
ಅಜ್ಜಿ
ಮಾತು
ಕೇಳಲಿಲ್ಲ]
'ಹಿಂದಿನಿಂದಲೂ ಬೆಂಗಳೂರು ಕರಗದಲ್ಲಿ ಪಟಾಕಿಗಳನ್ನು ಹೊಡೆಯಲಾಗುತ್ತಿದೆ. ಕೇರಳದ ದುರ್ಘಟನೆ ಮತ್ತು ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಬಾರಿ ಪಟಾಕಿ ಹೊಡೆಯುವುದಿಲ್ಲ. ಭಕ್ತರು ಮತ್ತು ಸಂಘಟನೆಗಳು ಪಟಾಕಿ ಹೊಡೆಯದಂತೆ ನೋಡಿಕೊಳ್ಳಲಾಗುತ್ತದೆ' ಎಂದು ರಮೇಶ್ ತಿಳಿಸಿದ್ದಾರೆ. [ಕೇರಳ ಪಟಾಕಿ ದುರಂತ, 5 ಜನರ ಬಂಧನ]
ಭಾನುವಾರ ಮುಂಜಾನೆ ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ನ ಮೂಕಾಂಬಿಕ ದೇವಸ್ಥಾನದ ಜಾತ್ರೆಯಲ್ಲಿ ಪಟಾಕಿ ಸಿಡಿದು ನಡೆದ ಅಗ್ನಿ ದುರಂತದಲ್ಲಿ 106 ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದರು. ಆದ್ದರಿಂದ, ಕರಗದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. [ಸುದ್ದಿ ದನಿ : ಪಟಾಕಿ ಹೊಡೆಯಬೇಡಿ ಎಂದ ಅಜ್ಜಿ]
ಕರಗಕ್ಕೆ ಸಕಲ ಸಿದ್ಧತೆ : ಬೆಂಗಳೂರು ನಗರದ ಪಾರಂಪರಿಕ ಆಚರಣೆಯಾದ ಕರಗಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಏ.14ರಿಂದ 24ರ ತನಕ ಹನ್ನೊಂದು ದಿನಗಳ ಕಾಲ ಕರಗ ಮಹೋತ್ಸವ ನಡೆಯಲಿದೆ. ಈ ಬಾರಿ ಅರ್ಚಕ ಲಕ್ಷ್ಮೀಶ ಕರಗ ಹೊರಲಿದ್ದಾರೆ.
ಚೈತ್ರ ಶುಕ್ರ ಸಪ್ತಮಿಯಿಂದ ಬಹುಳ ಬಿದಿಗೆಯವರೆಗೆ ಕರಗ ಮಹೋತ್ಸವ ನಡೆಯಲಿದೆ. ಕರಗ ಉತ್ಸವದ ಕೇಂದ್ರಬಿಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ ಏ.22ರಂದು ನಡೆಯಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿಯ ಕರಗ ಮಹೋತ್ಸವಕ್ಕಾಗಿ ಒಂದು ಕೋಟಿ ರೂ.ಅನುದಾನ ಮೀಸಲಾಗಿಟ್ಟಿದೆ.