ಬೆಂಗಳೂರಲ್ಲಿ ರಾತ್ರಿ 10ರ ನಂತರ ಪಟಾಕಿ ಹೊಡೆಯುವಂತಿಲ್ಲ
ಬೆಂಗಳೂರು, ನವೆಂಬರ್ 09 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆ ಬಳಿಕ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ ಎಂದು ಮೇಯರ್ ಮಂಜುನಾಥ ರೆಡ್ಡಿ ಹೇಳಿದ್ದಾರೆ. ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡಲು ಜನರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ
ಕುರಿತು
ಪತ್ರಿಕಾ
ಹೇಳಿಕೆ
ಬಿಡುಗಡೆ
ಮಾಡಿರುವ
ಮೇಯರ್,
'ಬಿಬಿಎಂಪಿ
ವ್ಯಾಪ್ತಿಯಲ್ಲಿ
ರಾತ್ರಿ
10
ಗಂಟೆಯಿಂದ
ಬೆಳಗ್ಗೆ
6
ಗಂಟೆ
ತನಕ
ಪಟಾಕಿ
ಸಿಡಿಸುವಂತಿಲ್ಲ.
ಆಸ್ಪತ್ರೆ
ಸುತ್ತಮುತ್ತಲೂ
ಪಟಾಕಿ
ಸಿಡಿಸುವುದನ್ನು
ನಿಷೇಧಿಸಲಾಗಿದೆ'
ಎಂದು
ಹೇಳಿದ್ದಾರೆ.
[ಬೆಂಗಳೂರು
:
ಸುರಕ್ಷಿತ
ದೀಪಾವಳಿಗೆ
'ಮೇಘ'ರಿಕ್
ಸಂದೇಶ]
'ಪಟಾಕಿ ತ್ಯಾಜ್ಯದಿಂದಾಗಿ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಹಾಳಾಗಲಿದೆ. ಸಾರ್ವಜನಿಕರು ಆದಷ್ಟು ಕಡಿಮೆ ಪಟಾಕಿಗಳನ್ನು ಸಿಡಿಸಬೇಕು. ಈ ಮೂಲಕ ಪರಿಸರ ರಕ್ಷಣೆಗೆ ತಮಗಿರುವ ಜವಾಬ್ದಾರಿ ನಿರ್ವಹಿಸಬೇಕು' ಎಂದು ಮೇಯರ್ ಕರೆ ನೀಡಿದ್ದಾರೆ.
'ಪಟಾಕಿಗಳನ್ನು ಸಿಡಿಸಿದಾಗ ರಾಸಾಯನಿಕಗಳ ಸ್ಫೋಟದಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಹಾನಿ ಉಂಟಾಗಲಿದೆ. ಅಲ್ಲದೇ ಪ್ರಾಣಿ-ಪಕ್ಷಿಗಳಿಗೂ ಹಾನಿ ಉಂಟಾಗುತ್ತದೆ. ಆದ್ದರಿಂದ ಕಡಿಮೆ ಪಟಾಕಿ ಸಿಡಿಸಬೇಕು' ಎಂದು ಮೇಯರ್ ಮನವಿ ಮಾಡಿದ್ದಾರೆ.
ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆ : ಜನರು ಪಟಾಕಿ ಸಿಡಿಸುವಾಗ ಆಕಸ್ಮಿಕ ಅವಘಡ ನಡೆದರೆ ತುರ್ತು ಚಿಕಿತ್ಸೆ ನೀಡಲು ಬಿಬಿಎಂಪಿಯ ಎಲ್ಲಾ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಸಿಬ್ಬಂದಿಗಳನ್ನು ಇದಕ್ಕಾಗಿ ನೇಮಿಸಲಾಗಿದೆ ಎಂದು ಮೇಯರ್ ಹೇಳಿದ್ದಾರೆ.
ಕಸ ವಿಲೇವಾರಿಗೆ ಸಿದ್ಧತೆ : ಪಟಾಕಿ ಸಿಡಿಸುವುದರಿಂದ ನಗರದಲ್ಲಿ ಹೆಚ್ಚುವರಿ ಕಸ ಉತ್ಪಾದನೆಯಾಗುತ್ತದೆ. ಕಸ ವಿಲೇವಾರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಮನೆ ಮುಂದೆ ಮತ್ತು ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಣೆ ಮಾಡಿ ಪಾಲಿಕೆ ಆಟೋ ಹಾಗೂ ಗಾಡಿಗಳಿಗೆ ನೀಡಬೇಕು ಎಂದು ಮೇಯರ್ ಮನವಿ ಮಾಡಿದ್ದಾರೆ.