ಮೇ 30 ರ ಬಳಿಕ ಹೋಟೆಲ್ ಡೈನಿಂಗ್ಗೆ ಅವಕಾಶ?
ಬೆಂಗಳೂರು, ಮೇ 26: ''ಹೋಟೆಲ್ ಡೈನಿಂಗ್ ತೆಗೆಯಲು ಅವಕಾಶ ಮಾಡಿಕೊಡುವಂತೆ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಅವರು ಈ ತಿಂಗಳ 30 ರ ಬಳಿಕ ಹೋಟೆಲ್ ಡೈನಿಂಗ್ ತೆರೆಯಲು ಅವಕಾಶ ಕೊಡುವ ಸಾಧ್ಯತೆ ಇದೆ'' ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.
Recommended Video
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೊರೊನಾ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಈ ತಿಂಗಳ 30 ರ ಬಳಿಕ ಸಿಎಂ ಹೋಟೆಲ್ ಡೈನಿಂಗ್ ಗೆ ಅವಕಾಶ ಮಾಡಿಕೊಡ್ತಾರೆ ಎನ್ನುವ ವಿಶ್ವಾಸವಿದೆ'' ಎಂದು ಹೇಳಿದರು.
'ಲಾಕ್ಡೌನ್ ಗುರಿ ಮತ್ತು ಉದ್ದೇಶ ಸಂಪೂರ್ಣ ವಿಫಲ'
''ರಾಜ್ಯದಲ್ಲಿ ಬೇರೆ ರಾಜ್ಯಗಳಿಂದ ಬಂದವರಿಂದಲೇ ಕೊರೊನಾವೈರಸ್ ಜಾಸ್ತಿ ಆಗಿದೆ. ಮಹಾರಾಷ್ಟ್ರದಿಂದ ಬಂದವರಿಂದಲೇ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರ ಸರ್ಕಾರ ಅವರನ್ನ ಚೆಕ್ ಮಾಡಿಸದೇ ಕಳಿಸಿದೆ. ರಾಜ್ಯದ ಗಡಿಗಳಲ್ಲಿ ಅಕ್ರಮವಾಗಿ ಬರುತ್ತಿದ್ದಾರೆ'' ಎಂದು ವಿಶ್ವನಾಥ್ ಆರೋಪಿಸಿದರು.
''ಹೊರ ರಾಜ್ಯದಿಂದ ಬರುವವರು ರಾಜ್ಯಕ್ಕೆ ಬರಲಿ. ಆದರೆ, ಕೊರೊನಾ ತಡೆ ನಿಯಮ ಪಾಲಿಸಲಿ. ಅಕ್ರಮವಾಗಿ ಬಂದವರನ್ನ ಪೊಲೀಸರು ಬಂಧಿಸಬೇಕು'' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ ಹೇಳಿದರು.