ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ, ಕಂಟೇನ್ಮೆಂಟ್ ಪದ್ದತಿಗೆ ಇತಿಶ್ರೀ: ಸದ್ಯದಲ್ಲೇ ಹೊಸ ಪದ್ದತಿ

|
Google Oneindia Kannada News

ಬೆಂಗಳೂರು,ಆ 15: ಕೊರೊನಾ ಸೋಂಕಿತರ ಮನೆ, ವಠಾರ, ಲೇನ್ ಅನ್ನು ಕಂಟೇನ್ಮೆಂಟ್ ಮಾಡುವ ಪದ್ದತಿಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಇತಿಶ್ರೀ ಹಾಡಲಿದ್ದು, ಹೊಸ ಪದ್ದತಿ ಸದ್ಯದಲ್ಲೇ ಜಾರಿಯಾಗಲಿದೆ.

Recommended Video

ವಿಭಿನ್ನ ರೀತಿಯಲ್ಲಿ ಸ್ವಾತಂತ್ರೋತ್ಸವ | Oneindia Kannada

"ಹೊಸ ನಿಯಮವನ್ನು ಸರಕಾರದ ಅನುಮೋದನೆಗೆ ಕಳುಹಿಸಲಾಗಿದ್ದು, ಇನ್ನೇನು ಕೆಲವು ದಿನಗಳಲ್ಲಿ ಹೊಸ ಆದೇಶ ಹೊರಡಿಸುವುದಾಗಿ" ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

200 ಕೊರೊನಾ ಸೋಂಕಿತ ತಾಯಂದಿರು: 'ಕರುಳ ಬಳ್ಳಿ' ದಾಟದ ಕೊರೊನಾ200 ಕೊರೊನಾ ಸೋಂಕಿತ ತಾಯಂದಿರು: 'ಕರುಳ ಬಳ್ಳಿ' ದಾಟದ ಕೊರೊನಾ

ಇನ್ನು ಮುಂದೆ ಕೊರೊನಾ ಸೋಂಕಿತರ ಮನೆಗೆ ಕರಪತ್ರವನ್ನು ಮಾತ್ರ ಅಂಟಿಸಲು ನಿರ್ಧರಿಸಲಾಗಿದ್ದು, ಅಕ್ಕಪಕ್ಕದ ಮನೆಯವರಿಗೆ ಜಾಗೃತಿ ಮೂಡಿಸುವ ಹೊಸ ಪದ್ದತಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಹೊಸ ನಿಯಮ, ಲೇನ್ ನಲ್ಲಿ ಒಂದು ಕೇಸ್ ಪತ್ತೆಯಾದರೆ ಮಾತ್ರ ಅನ್ವಯವಾಗಲಿದೆ.

Covid 19 Containment Zone: BBMP To Introduce New System Shortly

ಸದ್ಯ, ಸೋಂಕು ಪೀಡಿತರ ಮನೆ ಮತ್ತು ನೂರು ಮೀಟರ್ ಆಸುಪಾಸಿನಲ್ಲಿ ತಗಡಿನ ಶೀಟ್, ಬ್ಯಾರಿಕೇಡ್ ಹಾಕಿ, ಕಂಟೇನ್ಮೆಂಟ್ ವಲಯ ಎಂದು ಬ್ಯಾನರ್ ಹಾಕಲಾಗುತ್ತಿತ್ತು. ಇದರಿಂದ, ಸೋಂಕು ಪೀಡಿತರು ಮತ್ತು ಅಕ್ಕಪಕ್ಕದವರು ಮುಜುಗರಕ್ಕೀಡಾಗುತ್ತಿದ್ದರು.

ಈಗಿರುವ ಪದ್ದತಿಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವುದರಿಂದ ಬಿಬಿಎಂಪಿ ಈ ಹೊಸ ಪದ್ದತಿ ಜಾರಿಗೆ ತರಲು ಮುಂದಾಗಿದೆ. ಹೊಸ ಪದ್ದತಿ, ಆಗಸ್ಟ್ 20ರೊಳಗೆ ಜಾರಿಯಾಗುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ 2 ಕೊವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಬಿಬಿಎಂಪಿ ನಿರ್ಧಾರಬೆಂಗಳೂರಲ್ಲಿ 2 ಕೊವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಬಿಬಿಎಂಪಿ ನಿರ್ಧಾರ

"ಈ ನಡುವೆ, ವಾರಾಂತ್ಯದಲ್ಲಿ ಹೊಸದಾಗಿ ಎರಡು ಸಾವಿರಕ್ಕೂ ಹೆಚ್ಚು ವೈದ್ಯರು ಹೆಚ್ಚುವರಿಯಾಗಿ ಲಭ್ಯವಾಗಲಿದ್ದು, ಅವರನ್ನು ಸೋಂಕಿತರ ಚಿಕಿತ್ಸೆಗೆ ನಿಯೋಜಿಸಲಾಗುವುದು"ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

English summary
Covid 19 Containment Zone: BBMP To Introduce New System Shortly,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X