ಪೊಲೀಸ್ ಆಯುಕ್ತ ರೆಡ್ಡಿ ವಿರುದ್ಧ ಲೋಕಾಯುಕ್ತಕ್ಕೆ ದೂರು
ಬೆಂಗಳೂರು, ಜು. 14: ಬೆಂಗಳೂರು ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ರೆಡ್ಡಿ ವಿರುದ್ಧ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ಸಿಎಂಡಿ ಸುಶಾಂತ್ ಮಾಹಾಪಾತ್ರ ಭ್ರಷ್ಟಾಚಾರದ ದೂರು ದಾಖಲು ಮಾಡಿದ್ದಾರೆ.
ಉಪಲೋಕಾಯುಕ್ತ ಸುಭಾಷ್ ಬಿ ಅಡಿ ಅವರಿಗೆ ದೂರು ಸಲ್ಲಿಕೆ ಮಾಡಲಾಗಿದೆ. ಹೌಸಿಂಗ್ ಬೋರ್ಡ್ ಕಾರ್ಪೋರೇಶನ್ ನಲ್ಲಿ ಅಧಿಕಾರದಲ್ಲಿದ್ದಾಗ ರೆಡ್ಡಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಕೆ ಮಾಡಲಾಗಿದೆ.[ಲೋಕಾ ಭ್ರಷ್ಟಾಚಾರ ಎಲ್ಲಿಗೆ ಬಂತು]
ರೆಡ್ಡಿ ಹಿಂದೆ ಹೌಸಿಂಗ್ ಬೋರ್ಡ್ ಕಾರ್ಪೋರೇಶನ್ ನಲ್ಲಿ ಉನ್ನತ ಸ್ಥಾನದಲ್ಲಿದ್ದರು. ಈ ವೇಳೆ ಮಂಡಳಿಯಿಂದ ಪೊಲೀಸ್ ಸ್ಟೇಶನ್ ಮತ್ತು ಮನೆಗಳ ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ರೆಡ್ಡಿ ಅವ್ಯವಹಾರ ಮಾಡಿದ್ದಾರೆ ಎಂದು ಮಹಾಪಾತ್ರ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.[ಲೋಕಾಯುಕ್ತರ ಪದಚ್ಯುತಿ, ಕಾನೂನು ಇಲಾಖೆ ಹೇಳುವುದೇನು?]
ಮಹಾಪಾತ್ರ ರೆಡ್ಡಿ ವಿರುದ್ಧ ಹಣಕಾಸು ಇಲಾಖೆಗೂ ಹಿಂದೆ ದೂರು ದಾಖಲಿಸಿದ್ದರು. ರೆಡ್ಡಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ.
ಸುಶಾಂತ್ ಮಹಾಪಾತ್ರ ಅವರು ಸೋಮವಾರ ಸಂಜೆ ಉಪಲೋಕಾಯುಕ್ತ ಸುಭಾಷ್ ಅಡಿ ಅವರಿಗೆ ದೂರು ನೀಡಿದ್ದಾರೆ. ಎಂಎನ್ ರೆಡ್ಡಿ ಹೌಸಿಂಗ್ ಕಾರ್ಪೋರೇಷನ್ನಲ್ಲಿ ಮ್ಯಾನೆಜಿಂಗ್ ಡೈರೆಕ್ಟರ್ ಆಗಿದ್ದ ಸಮಯದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಭ್ರಷ್ಟಾಚಾರ
ಆರೋಪ
ಸುಳ್ಳು
ತನ್ನ
ವಿರುದ್ಧ
ಬಂದಿರುವ
ಆರೋಪಕ್ಕೆ
ಪ್ರತಿಕ್ರಿಯಿಸಿದ
ಎಂಎನ್
ರೆಡ್ಡಿ,"ನನ್ನ
ಅವಧಿಯಲ್ಲಿ
ಯಾವುದೇ
ಭ್ರಷ್ಟಾಚಾರ
ನಡೆದಿಲ್ಲ.
ಯಾವ
ಆಧಾರ
ಮೇಲೆ
ನನ್ನ
ವಿರುದ್ಧ
ದೂರು
ಕೊಟ್ಟಿದ್ದಾರೆ
ಎನ್ನುವುದು
ಗೊತ್ತಿಲ್ಲ.
ದೂರಿನ
ಪ್ರತಿ
ನನಗೆ
ಇನ್ನು
ಸಿಕ್ಕಿಲ್ಲ"
ಸಂಪೂರ್ಣ
ಮಾಹಿತಿ
ಪಡೆದುಕೊಳ್ಳುತ್ತೇನೆ
ಎಂದು
ರೆಡ್ಡಿ
ತಿಳಿಸಿದ್ದಾರೆ.