ಬೆಂಗಳೂರು ಕರಗಕ್ಕೆ ಕೊರೊನಾ ಭೀತಿ ಇಲ್ಲ: ಮೇಯರ್
ಬೆಂಗಳೂರು, ಮಾರ್ಚ್ 11: ಬೆಂಗಳೂರು ಕರಗೆ ಕೊರೊನಾ ಭೀತಿ ಇಲ್ಲ. ಕರಗ ಪ್ರತಿ ವರ್ಷದಂತೆ ನಡೆಯುತ್ತದೆ ಎಂದು ಬೆಂಗಳೂರು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
Recommended Video
ಕೊರೊನಾ ವೈರಸ್ ಭೀತಿಯಿಂದ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ದೇವಸ್ಥಾನ, ಮಾಲ್, ರಸ್ತೆ, ಮೆಟ್ರೋ ಎಲ್ಲ ಕಡೆಯೂ ಜನರ ಸಂಖ್ಯೆ ಕಡಿಮೆ ಆಗಿರುವುದು ಕಂಡು ಬಂದಿದೆ. ಹೀಗಾಗಿ, ಕೊರೊನಾದಿಂದ ಕರಗ ಉತ್ಸವ ನಡೆಯುವುದಿಲ್ಲವೇ ಎನ್ನುವ ಪ್ರಶ್ನೆ ಇತ್ತು.
ಏಪ್ರಿಲ್ 11ರಿಂದ ಬೆಂಗಳೂರು ಕರಗ ಉತ್ಸವ, ಭರದ ಸಿದ್ಧತೆ
ಕರಗ ಉತ್ಸವ ಬಗ್ಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್ ಮಾತನಾಡಿದ್ದು, ಈ ವರ್ಷವೂ ಕರಗ ನಡೆಯುತ್ತದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಪ್ಲೇಗ್, ಕಾಲರಾದಂತಹ ಮಾರಣಾಂತಿಕ ಕಾಯಿಲೆಗಳು ಬಂದಾಗಲು ಕರಗ ನಡೆದಿತ್ತು. ಈ ಬಾರಿಯೂ ಕರಗ ಉತ್ಸವ ಆಗಲಿದೆ ಎಂದಿದ್ದಾರೆ.
ಆದಿಶಕ್ತಿ ದ್ರಾಪದಮ್ಮ ಎಲ್ಲರನ್ನು ಕಾಪಾಡುತ್ತಾಳೆ ನಂಬಿಕೆ ಇದೆ. ಹೀಗಾಗಿ, ಕರಗ ಉತ್ಸವವನ್ನು ಮಾಡೇ ಮಾಡುತ್ತೇವೆ ಎಂದು ಗೌತಮ್ ಕುಮಾರ್ ತಿಳಿಸಿದ್ದಾರೆ.
ರಾಮನಗರದಲ್ಲಿ ಜುಲೈ 23, 24ಕ್ಕೆ ಚಾಮುಂಡೇಶ್ವರಿ ಕರಗ; ಲಕ್ಷಕ್ಕೂ ಹೆಚ್ಚು ಜನ ಭಾಗಿ ನಿರೀಕ್ಷೆ
ಏಪ್ರಿಲ್ 11ರಿಂದ ಕರಗ ಉತ್ಸವ ನಡೆಯಲಿದೆ. ಈಗಾಗಲೇ ಕರಗ ನಡೆಯುವ ಜಾಗ ಪರೀಶಿಲನೆ ನಡೆದಿದೆ. ಉತ್ಸವ ಮಾಡುವುದರ ಜೊತೆಗೆ ಕೊರೊನಾ ಬಗ್ಗೆ ಸುರಕ್ಷತ ಕ್ರಮಗಳನ್ನು ಸಹ ಕೈಗೊಳ್ಳಲಾಗುವದಂತೆ.