ಕೊರೊನಾ ವೈರಸ್ ವೇಷಧಾರಿಯಾದ ಬೆಂಗಳೂರು ಟ್ರಾಫಿಕ್ ಪೊಲೀಸ್
ಬೆಂಗಳೂರು, ಮಾರ್ಚ್ 31: ಜನರನ್ನು ಹೊರಬರದಂತೇ ತಡೆಯಲು ಹರಸಾಹಸ ಪಡುತ್ತಿರುವ ಬೆಂಗಳೂರು ಪೊಲೀಸರು, ವಿನೂತನ ಪ್ರಯತ್ನದ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.
ನಗರದ ಎಂ.ಜಿ.ರಸ್ತೆ ವೃತ್ತದಲ್ಲಿ ಸಂಚಾರೀ ಪೊಲೀಸರು ಕೊರೊನಾ ವೈರಸ್ ವೇಷಧರಿಸಿ, ಜನರಿಗೆ ಮನೆಯಲ್ಲೆ ಉಳಿದುಕೊಳ್ಳುವಂತೆ ವಿಶಿಷ್ಟ ರೀತಿಯಲ್ಲಿ ಮನವೊಲಿಕೆಗೆ ಮುಂದಾದರು.
Live Updates: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆ
"ಜನರಿಗೆ ಎಷ್ಟು ಹೇಳಿದರೂ ಅರ್ಥವಾಗುತ್ತಿಲ್ಲ, ಬೈಕ್ , ಕಾರ್ ನಲ್ಲಿ ರಸ್ತೆಗಿಳಿಯುತ್ತಾರೆ. ಕೊರೊನಾ ವೈರಸ್ ಎಲ್ಲಿ ಇರುತ್ತದೆ ಎನ್ನುವುದು ಗೊತ್ತಾಗುವುದಿಲ್ಲ" ಎಂದು ಪೊಲೀಸ್ ಅಧಿಕಾರಿ ಅನೌನ್ಸ್ ಮಾಡುತ್ತಿದ್ದಾಗ ಒಬ್ಬ ಯುವಕ ಹೆಲ್ಮೆಟ್ ಹಾಕಿಕೊಳ್ಳದೇ ಬರುತ್ತಾನೆ.
ಆಗ, ಬೈಕ್ ನಿಲ್ಲಿಸಿ, ಕೊರೊನಾ ಹೋಲುವ ಹೆಲ್ಮೆಟ್ ಹಾಕಿದ ಪೊಲೀಸರು ಆತನಿಗೆ ಆ ಹೆಲ್ಮೆಟ್ ಹಾಕಿ, ಇನ್ನೊಬ್ಬ ಪೊಲೀಸ್, ಯುವಕನ ಬೈಕ್ ಹಿಂದೆ ಕೂರುತ್ತಾನೆ. ಆಗ, ಪೊಲೀಸರು ಗಂಟೆ, ಶಂಖ ಊದುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.
ಕೊರೊನಾದಿಂದ ತಂದೆ ಸಾವು: ಮೃತ್ಯು ದವಡೆಯಿಂದ ಪಾರಾದ ಮಗಳು
ಈ ರೀತಿಯ ಪ್ರಯತ್ನವನ್ನು ಚೆನ್ನೈ ಪೊಲೀಸರೂ ಮಾಡಿದ್ದರು. ಆದರೆ, ಅವರ ಕೈಯಲ್ಲಿ ಶಂಖ, ಗಂಟೆ ಇರಲಿಲ್ಲ. ಬೆಂಗಳೂರು ಪೊಲೀಸರ ಈ ಪ್ರಯತ್ನದ ಬಗ್ಗೆ ಉತ್ತಮ ಮಾತು ಕೇಳಿಬರುತ್ತಿದೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ಇಬ್ಬರಿಗೆ ಮತ್ತು ಗೌರಿಬಿದನೂರಿನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗಲಿದೆ.