ಕೊರೊನಾ ಸಂಬಂಧ ಸಿಎಂ ಮುಂದೆ 15 ಬೇಡಿಕೆಯಿಟ್ಟ ಕಾಂಗ್ರೆಸ್ ನಿಯೋಗ
ಬೆಂಗಳೂರು, ಏಪ್ರಿಲ್ 19: ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆ, ಕರ್ನಾಟಕ ಕಾಂಗ್ರೆಸ್ ನಾಯಕರ ನಿಯೋಗ ಇಂದು ಬೆಳಿಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ 15 ಬೇಡಿಕೆಗಳ ಮನವಿ ಸಲ್ಲಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಆರ್ ವಿ ದೇಶಪಾಂಡೆ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿಎಂ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಒತ್ತಾಯಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಟ: ಕಾಂಗ್ರೆಸ್ ತನ್ನ ಪಾತ್ರ ನಿರ್ವಹಿಸಲು ಸಿದ್ಧ: ಸೋನಿಯಾ ಗಾಂಧಿ
ಐದು ಪುಟಗಳ ಮನವಿ ಸಲ್ಲಿಸಿದ್ದು, ಅದರಲ್ಲಿ ಪ್ರಮುಖವಾಗಿ ಸರ್ಕಾರಕ್ಕೆ 15 ಬೇಡಿಕೆಗಳನ್ನು ನಿಯೋಗ ಸಲ್ಲಿಸಿದೆ. ಕೊರೊನಾ ಸೃಷ್ಟಿಯಾದಾಗನಿಂದ ರಾಜ್ಯದಲ್ಲಿ ಯಾವ ರೀತಿ ಸಂಕಷ್ಟಗಳು ಎದುರಾಗಿದೆ, ಅದನ್ನು ನಿಬಾಯಿಸುವಲ್ಲಿ ಸರ್ಕಾರ ಎಲ್ಲಿ ವಿಫಲವಾಗಿದೆ ಎನ್ನುವುದರ ಜೊತೆ ಮುಂದೆ ಏನು ಮಾಡಬೇಕು ಎಂಬುದನ್ನು ಸಿಎಂ ಮುಂದಿಟ್ಟಿದೆ. ಮುಂದೆ ಓದಿ...
ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿ
ಮನುಕುಲಕ್ಕೆ ಹೆಮ್ಮಾರಿಯಾಗಿರುವ ಕೊರೊನಾ ವೈರಸ್ ಜಗತ್ತಿನಾದ್ಯಂತ ಹರಡಿರುವ ಹಿನ್ನೆಲೆ, ಇದನ್ನು 'ರಾಷ್ಟ್ರೀಯ ವಿಪತ್ತು' ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡುವಂತೆ ಮತ್ತು ಲಾಕ್ಡೌನ್ನಿಂದ ಜನರು ಸಂಕಷ್ಟದಲ್ಲಿ ಆರ್ಥಿಕವಾಗಿ ಹಾಗೂ ಇನ್ನಿತರ ಸಹಾಯ ನೀಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.
ಕೇಂದ್ರಕ್ಕೆ ಸರ್ವಪಕ್ಷ ನಿಯೋಗ
ಲಾಕ್ಡೌನ್ನಿಂದ ರಾಜ್ಯದಲ್ಲಿ ಎಲ್ಲ ವಲಯದಲ್ಲೂ ನಷ್ಟ ಆಗಿದೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ರಾಜ್ಯದಿಂದ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಉತ್ತಮ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿ, ಹೆಚ್ಚು ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಒತ್ತಡ ಹಾಕಿದೆ.
ಡಿ.ಕೆ.ಶಿವಕುಮಾರ್ ಮಾಡಿದ್ದ ಆ ಒಂದು ಮನವಿಯನ್ನು ಯಡಿಯೂರಪ್ಪ ಈಡೇರಿಸಿದ್ದರೆ?
ಕೊರೊನಾ ವಾರಿಯರ್ಸ್ಗ ರಕ್ಷಣೆ
* ವೃತ್ತಿನಿರತ ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂ ಸಹಾಯ ಧನಕ್ಕೆ ಒತ್ತಾಯ
*
ನರೇಗಾ
ಯೋಜನೆಯಲ್ಲಿ
ನೋಂದಾಯಿತ
ಕಾರ್ಮಿಕರ
ಬ್ಯಾಂಕ್ಗಳಿಗೆ
ಹಣ
ಜಮಾಯಿಸಬೇಕು
*
ಪ್ರತೀ
10
ಲಕ್ಷ
ಜನರ
ಪೈಕಿ
ಕನಿಷ್ಟ
10
ಸಾವಿರ
ಜನರಿಗೆ
ಕೊರೊನಾ
ಪರೀಕ್ಷೆ
ಮಾಡಿಸಬೇಕು
*
ಆರೋಗ್ಯ
ಸೈನಿಕರಿಗೆ
ತಕ್ಷಣ
ಬಾಕಿ
ವೇತನ
ಬಿಡುಗಡೆ
ಮಾಡಬೇಕು
ಮತ್ತು
ಕನಿಷ್ಠ
1
ತಿಂಗಳ
ವಿಶೇಷ
ಭತ್ಯೆ
ಕೊಡಬೇಕು
ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ
*
ಖಾಸಗಿ
ಆಸ್ಪತ್ರೆಗಳಲ್ಲೂ
ಕೊರೋನಾ
ಚಿಕಿತ್ಸೆಗೆ
ವ್ಯವಸ್ಥೆ
*
ಸಾಮಾಜಿಕ
ಜಾಲತಾಣಗಳಲ್ಲಿ
ಕೊರೋನಾ
ಬಗ್ಗೆ
ಭೀತಿ,
ಪ್ರಚೋದನಾತ್ಮಕ
ವದಂತಿ
ಹಬ್ಬಿಸೋರ
ವಿರುದ್ಧ
ಕ್ರಮಕ್ಕೆ
ಆಗ್ರಹ
* ಸರ್ಕಾರದ ವತಿಯಿಂದ ನೀಡುತ್ತಿರುವ ಆಹಾರ ಕಿಟ್ಗಳ ಮೇಲೆ ಶಾಸಕರು, ನಾಯಕರು ತಮ್ಮ ಭಾವಚಿತ್ರ ಮತ್ತು ಪಕ್ಷದ ಗುರುತು ಹಾಕಿ ನೀಡುತ್ತಿರುವುದು ಖಂಡನೀಯ. ಇದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.