ಕೊರೋನಾ ರೂಲ್ಸ್ ಬ್ರೇಕ್: ರಾಜಕಾರಣಿಗಳು ಮತ್ತು ಸಿನಿಮಾ ನಟರಿಗೆ ಹೈಕೋರ್ಟ್ ವಾರ್ನಿಂಗ್ !
ಬೆಂಗಳೂರು, ಏಪ್ರಿಲ್ 15: ರಾಜ್ಯದಲ್ಲಿ ಕೊರೋನಾ ಎರಡಲೇ ಅಲೆ ಭೀತಿ ಆರಂಭವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಜನ ಸಾಮಾನ್ಯರಿಗೆ ಮಾರ್ಷೆಲ್ ಗಳು, ಪೊಲೀಸರು ದಂಡ ವಿಧಿಸುತ್ತಿದ್ದಾರೆ. ರಾಜಕಾರಣಿಗಳೂ, ಸಿನಿಮಾ ನಟರು ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಜನ ಸಾಮಾನ್ಯರಿಗೆ ಒಂದು ನ್ಯಾಯ. ರಾಜಕಾರಣಿಗಳು, ಸಿನಿಮಾ ನಟರಿಗೊಂದು ನ್ಯಾಯಾನಾ ? ನ್ಯಾಯಾಲಯ ಎಲ್ಲವನ್ನೂ ಗಮನಿಸುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್ ನಿಯಮ ಉಲ್ಲಂಘನೆ ಮಾಡುವ ರಾಜಕಾರಣಿಗಳು ಮತ್ತು ಸಿನಿಮಾ ನಟರ ವಿರುದ್ಧ ಎಫ್ಐಆರ್ ದಾಖಲಿಸಿ ದಂಡ ವಿಧಿಸಿ..!
ಕೊರೋನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ರಾಜಕಾರಣಿಗಳು ಮತ್ತು ಸಿನಿ ನಟರಿಗೆ ಹೈಕೋರ್ಟ್ ಚಾಟಿ ಬೀಸಿದೆ. ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಮಾಸ್ಕ್ ಹಾಕದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಉಲ್ಲಂಘನೆ ಮಾಡಿದ್ರೆ ಪೊಲೀಸರಿಂದಲೋ ಇಲ್ಲವೇ ಮಾರ್ಷೆಲ್ ಗಳಿಂದಲೋ ದಂಡ ವಸೂಲಿ ಮಾಡಿಸುತ್ತದೆ. ಉಪ ಚುನಾವಣೆ ಕಣಗಳಲ್ಲಿ ಬ್ಯುಸಿಯಾಗಿರುವ ರಾಜಕಾರಣಿಗಳು ಪಾಲನೆ ಮಾಡುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ, ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ.
ಈ ಕುರಿತು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದೆ. ಎಫ್ಐಆರ್ ದಾಖಲಿಸಿದ ನಂತರವೂ ದಂಡ ವಿಧಿಸಲು ಅವಕಾಶವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ವಕೀಲೆ ಗೀತಾ ಮಿಶ್ರಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಇಂತಹ ಮಹತ್ವದ ಆದೇಶ ನೀಡಿದೆ.
ಕರ್ನಾಟಕದ ಮಸ್ಕಿ , ಬಸವ ಕಲ್ಯಾಣ, ಬೆಳಗಾವಿಯಲ್ಲಿ ಉಪಚುನಾವಣೆ ಪಕ್ಷಾತೀತವಾಗಿ ಜನರನ್ನು ಒಂದೆಡೆ ಸೇರಿಸಿ ಚುನಾವಣೆಯ ಪ್ರಚಾರ ಮಾಡುತ್ತಿರೋದನ್ನು ಹೈಕೋರ್ಟ್ ಸೂಕ್ಷ್ಮವಾಗಿ ಗಮನಿಸಿದೆ. ಕೆಲ ಧಾರ್ಮಿಕ ಮುಖಂಡರು ಜನರನ್ನು ಒಂದೆಡೆ ಸೇರಿಸಿ ಸಾಮಾಜಿಕ ಅಂತರವಿಲ್ಲದೇ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇನ್ನು ಇತ್ತೀಚೆಗೆ ತೆರೆಕಂಡ ಸಿನಿಮಾ ಸ್ಟಾರ್ಗಳ ಸಿನಿಮಾ ಪ್ರೀ ರಿಲೀಸ್ , ರಿಲೀಸ್, ಮತ್ತು ಯಶಸ್ಸಿನ ವೇಳೆಯೂ ಸಾವಿರಾರು ಜನ ಸಾಮಾಜಿಕ ಅಂತರವಿಲ್ಲದೇ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇದೆಲ್ಲಾವನ್ನು ಗಮನಿಸಿರೋ ಹೈಕೋರ್ಟ್ ತೀವ್ರ ಅಸಮಾಧಾನವನ್ನು ಹೊರಹಾಕಿದೆ.
Recommended Video
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಮಾಸ್ಕ್ ಕಡ್ಡಾಯವಾಗಿ ಧರಿಸಿಬೇಕು. ಆರೋಗ್ಯಕರವಾದ ಜೀವನ ನಡೆಸುವುದು ಸಂವಿಧಾನ ನೀಡಿದ ಹಕ್ಕು. ಜನರ ಹಕ್ಕನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ನಿಯಮ ಉಲ್ಲಂಘಿಸಿದ್ರೆ ಎಫ್ ಐಆರ್ ದಾಖಲಿಸುವಂತೆ ಸಿಜೆ ಎಎಸ್ ಓಕಾ , ನ್ಯಾ.ಸೂರಜ್ ಗೋವಿಂದ ರಾಜ್ ರವರಿದ್ದ ಪೀಠ ಆದೇಶ ಮಾಡಿದೆ.