ಮುಂದೊಂದು ದಿನ ಹಿಂದೂಸ್ಥಾನ ಪಾಕಿಸ್ತಾನವಾದೀತು!
ಈಗಿನ ಹಿಂದೂಸ್ಥಾನದಲ್ಲಿ ಪರಿಸ್ಥಿತಿ ದಿನೇ ದಿನೆ ಬದಲಾಗುತ್ತಿದೆ. ಹಿಂದುಗಳನ್ನು ಮುಸಲ್ಮಾನ ಧರ್ಮಕ್ಕೆ ಮತಾಂತರ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದರು. ಆದರೆ, ಇದರತ್ತ ಯಾರೂ ಕಿವಿಗೊಡುತ್ತಿಲ್ಲ. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಂತಹ ಕೆಲವು ವ್ಯಕ್ತಿಗಳು ಮಾತ್ರ ಈ ಮತಾಂತರದ ವಿರುದ್ಧ ಹೋರಾಡುತ್ತಾರೆ.
ವಿಪರ್ಯಾಸವೆಂದರೆ ಇಂತಹ ಮತಾಂತರದ ವಿರುದ್ಧ ಹೋರಾಡುವವರನ್ನು ಕೋಮುವಾದಿ ಎಂಬ ಪಟ್ಟ ಕಟ್ಟಿ ಲೇವಡಿ ಮಾಡುತ್ತಾರೆ. ಹಾಗಾಗಿ ಹಿಂದುಗಳು ಇನ್ನಾದರೂ ಎಚ್ಚೆತ್ತುಕೊಂಡು ಧ್ವನಿ ಎತ್ತದಿದ್ದಲ್ಲಿ ಹಿಂದುಸ್ತಾನ ಬದಲಾಗುವುದರಲ್ಲಿ ಎರಡು ಮಾತಿಲ್ಲ ಎಂದರು.
ಹಿಂದುಗಳು ಎಲ್ಲಾ ಧರ್ಮವನ್ನು ಪ್ರೀತಿಸುವವರು. ಯಾವ ಧರ್ಮದ ವಿರೋಧಿಗಳಲ್ಲ. ಸಹನೆ ಮತ್ತು ಸೃಜನಶೀಲರು. ಅಂತಹ ಧರ್ಮದ ಜನರನ್ನು ಇಂದು ದುರುಪಯೋಗಪಡಿಸಿಕೊಳ್ಳುವವರು ಹೆಚ್ಚುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದಲ್ಲಿ ದೇಶಕ್ಕೆ ಕಂಟಕ ಕಟ್ಟಿಟ್ಟಬುತ್ತಿ. ಹಾಗಾಗಿ ಹಿಂದುಗಳೇ ಇನ್ನಾದರೂ ಎದ್ದೇಳಿ. ಸ್ವಾಭಿಮಾನಿಗಳಾಗಿ ಭಾರತವನ್ನು ಉಳಿಸಿ ಎಂದು ಅವರು ಕರೆ ನೀಡಿದರು.