ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಗೂಂಡಾಗಿರಿ ಮೂಲಕ ಮೇಯರ್ ಸ್ಥಾನ ಹಿಡಿದಿದೆ: ಆರ್.ಅಶೋಕ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28: ಕಾಂಗ್ರೆಸ್ ಪಕ್ಷವು ಗೂಂಡಾಗಿರಿ ಮಾಡುವ ಮೂಲಕ ಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದರು.

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಭಾಗವಹಿಸಿದ್ದ ಅವರು, ಮೇಯರ್ ಆಯ್ಕೆಗೆ ತನ್ನ ಬಲ ಕಡಿಮೆಯಾದ ಕಾರಣ ಸಭಾತ್ಯಾಗ ಮಾಡಿ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ

ಹಾಜರಾತಿಯಲ್ಲಿ ನಮ್ಮ ಬಲ ಅವರಿಗಿಂತ ಕೇವಲ ಒಂದು ಮತ ಕಡಿಮೆ ಇದೆ ಎಂದು ಪ್ರತಿಪಾಧಿಸಿದ ಆರ್.ಅಶೋಕ್ ಅವರು, ಹಾಜರಾತಿಯಲ್ಲೂ ಸಹ ಕಾಂಗ್ರೆಸ್ ಗೋಲ್‌-ಮಾಲ್ ಮಾಡಿದೆ ಎಂದು ಆರೋಪಿಸಿದರು.

Congress won mayor seat by help of goons: R Ashok

ಮೇಯರ್‌ ಚುನಾವಣೆ ಮತದಾನ ಪ್ರಕ್ರಿಯೆಗೂ ಮುನ್ನಾ ಬಿಬಿಎಂಪಿ ಯಲ್ಲಿ ಎರಡೂ ಪಕ್ಷಗಳ ಸದಸ್ಯರ ನಡುವೆ ಭಾರಿ ಜಟಾಪಟಿ ನಡೆಯಿತು. ಎರಡೂ ಪಕ್ಷದ ಸದಸ್ಯರು ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದರು.

ಸಂಪನ್ಮೂಲ ಸಂಗ್ರಹ, ಸೋರಿಕೆ ತಡೆ, ಕಸದ ಸಮಸ್ಯೆಗೆ ಕೊನೆ:ಮೇಯರ್ ಪಣಸಂಪನ್ಮೂಲ ಸಂಗ್ರಹ, ಸೋರಿಕೆ ತಡೆ, ಕಸದ ಸಮಸ್ಯೆಗೆ ಕೊನೆ:ಮೇಯರ್ ಪಣ

ತಮ್ಮ ಪರವಾಗಿ ಬೆಂಬಲ ಎಂದು ಗೊತ್ತಾದ ನಂತರ ಬಿಜೆಪಿಯು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಸಭಾತ್ಯಾಗ ಮಾಡಿತು. ಬಿಜೆಪಿಯ ಮೇಯರ್‌ ಅಭ್ಯರ್ಥಿಯಾಗಿ ಶೋಭಾ ಆಂಜಿನಪ್ಪ ಅವರನ್ನು ಆಯ್ಕೆ ಮಾಡಲಾಗಿತ್ತು.

ಬಿಜೆಪಿಗೆ ಬೆಂಬಲ ಘೋಷಿಸಿದ ಜೆಡಿಎಸ್ ಕಾರ್ಪೊರೇಟರ್!ಬಿಜೆಪಿಗೆ ಬೆಂಬಲ ಘೋಷಿಸಿದ ಜೆಡಿಎಸ್ ಕಾರ್ಪೊರೇಟರ್!

ಕಾಂಗ್ರೆಸ್‌ನ ಮೇಯರ್ ಅಭ್ಯರ್ಥಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿ ಆಯ್ಕೆಯಾದರೆ ಜೆಡಿಎಸ್‌ನ ಆರ್.ರಮೀಳಾ ಅವರು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.

English summary
BJP leader R Ashok said that Congress won mayor seat by the help of goons. The make hooliganism in the BBMP and won the mayor seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X