ರಾಮಸ್ವಾಮಿ ಪಾಳ್ಯ ವಾರ್ಡ್ನಲ್ಲಿ 'ಕೈ'ಗೆ ಬಂಡಾಯದ ಬಿಸಿ
ಬೆಂಗಳೂರು, ಆಗಸ್ಟ್ 10 : ಬಿಬಿಎಂಪಿ ಚುನಾವಣೆಗೆ ರಾಮಸ್ವಾಮಿ ಪಾಳ್ಯ ವಾರ್ಡ್ನಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮೇರಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಅವರು ಮೇರಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಶಿವಾಜಿನಗರ
ವಿಧಾನಸಭಾ
ಕ್ಷೇತ್ರದ
ವ್ಯಾಪ್ತಿಗೆ
ಬರುವ
ರಾಮಸ್ವಾಮಿ
ಪಾಳ್ಯ
ವಾರ್ಡ್
ನಂ
62ರಿಂದ
ಮೇರಿ
ಅವರು
ಟಿಕೆಟ್
ಬಯಸಿದ್ದರು.
ಎಚ್.ಟಿ.ಸಾಂಗ್ಲಿಯಾನ
ಅವರು
ಸಹ
ಮೇರಿ
ಅವರಿಗೆ
ಟಿಕೆಟ್
ನೀಡುವಂತೆ
ಪಕ್ಷದ
ನಾಯಕರಲ್ಲಿ
ಮನವಿ
ಮಾಡಿದ್ದರು.
[ಬಿಬಿಎಂಪಿ
ಚುನಾವಣೆಗೆ
BJP
ವೆಬ್
ಸೈಟ್]
ಆದರೆ, ಕಾಂಗ್ರೆಸ್ ನೇತ್ರಾವತಿ ಕೃಷ್ಣೇಗೌಡರಿಗೆ ಟಿಕೆಟ್ ನೀಡಿದೆ. ಇದರಿಂದ ಅಸಮಾಧಾನಗೊಂಡಿರುವ ಮೇರಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ವಾರ್ಡ್ನಲ್ಲಿ ಸುಮಾರು 14 ಸಾವಿರ ಕ್ರೈಸ್ತರ ಮತಗಳಿವೆ. [ಬಿಬಿಎಂಪಿ ಚುನಾವಣೆ ವೇಳಾಪಟ್ಟಿ]
ಪ್ರಚಾರಕ್ಕೆ ಬರುವ ಭರವಸೆ : ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಅವರು ಮೇರಿ ಅವರ ಪರವಾಗಿ ಪ್ರಚಾರಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇರಿ ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಜೆಡಿಎಸ್ ಸೇರ್ಪಡೆ : ಸುಭಾಷ್ ನಗರ ವಾರ್ಡ್ (ನಂ 95) ಮಾಜಿ ಬಿಬಿಎಂಪಿ ಸದಸ್ಯ ಟಿ.ಮಲ್ಲೇಶ್ ಅವರು ಟಿಕೆಟ್ ಸಿಗದ ಹಿನ್ನಲೆಯಲ್ಲಿ ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ. ಮಲ್ಲೇಶ್ ಕಾಂಗ್ರೆಸ್ ಟಿಕೆಟ್ ಆಂಕಾಕ್ಷಿಗಳಾಗಿದ್ದರು. ಆದರೆ, ಟಿಕೆಟ್ ಸಿಗದ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.