ಚುನಾವಣಾ ಸಮಿತಿ ಸಭೆ: ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ಸಿಗರ ಆಕ್ರೋಶ
ಬೆಂಗಳೂರು, ಸೆಪ್ಟೆಂಬರ್ 26: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕೆಸಿ ವೇಣಿಗೋಪಾಲ್ ಎದುರೇ ಕೆಎಚ್ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿ, ಯಾವ ಸಭೆಗೂ ಆಹ್ವಾನಿಸದೆ ಸವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದ್ದಾರೆ.
ಕೆಸಿ ವೇಣುಗೋಪಾಲ್ ನೇತೃತ್ವದ ಸಭೆ ಅಂತ್ಯಗೊಂಡಿದೆ. ತಮ್ಮ ವಿರುದ್ದ ಸಭೆಯಲ್ಲಿ ಅಸಮಾಧಾನ ಸ್ಫೊಟಗೊಂಡ ಹಿನ್ನೆಲೆ... ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸಿದ್ದರಾಮಯ್ಯ ತೆರಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದ ರಮೇಶ್ ಕುಮಾರ್ ವಿರುದ್ಧ ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಮತ್ತೊಬ್ಬ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆಯ ಒಳಗೆ ಬಹುತೇಕ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ. ಚುನಾವಣಾ ಸಮಿತಿ ಸಭೆಯಲ್ಲಿ ಕೈ ನಾಯಕರ ಗದ್ದಲ ವಿಚಾರದ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದೆ.
ವಾಗ್ದಾಳಿ ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ಆದರೆ ಸಭೆಗಳಲ್ಲಿ ನಾಯಕರು ಅಭಿಪ್ರಾಯಗಳನ್ನು ಹಂಚಿಕೊಳ್ಳೋದು ಬೇಡ್ವಾ ತಂತಮ್ಮ ಅಭಿಪ್ರಾಯಗಳನ್ನ ನಾಯಕರು ಹಂಚಿಕೊಂಡಿದ್ದಾರೆ ಎಂದರು.
ಅನರ್ಹರ
ಬಗೆಗಿನ
ತೀರ್ಪು
ಏನು
ಬರುತ್ತೆ
ಎನ್ನುವುದನ್ನು
ಕಾದು
ನೋಡಿ
ನಾಳೆ
ಅಥವಾ
ನಾಡಿದ್ದು
ಅಭ್ಯರ್ಥಿ
ಪಟ್ಟಿ
ರಿಲೀಸ್
ಮಾಡ್ತೇವೆ
ಎಂದು
ಹೇಳಿದರು.
ಪರಮೇಶ್ವರ್
ಕಾರಣಾಂತರದಿಂದ
ಸಭೆಗೆ
ಬಂದಿಲ್ಲ
ಉಸ್ತುವಾರಿಗೂ
ಪರಮೇಶ್ವರ್
ಮಾಹಿತಿ
ನೀಡಿದ್ದಾರೆ.
ಬಿಕೆ ಹರಿಪ್ರಸಾದ್, ಕೆ ಎಚ್ ಮುನಿಯಪ್ಪ ಸೇರಿ ಉಳಿದ ನಾಯಕರು ಸಭೆಯಿಂದ ಹೊರಗುಳಿದಿದ್ದರು.