ಮತ್ತೆ ಕುಮಾರಸ್ವಾಮಿಯನ್ನು ಮಾತಿನಲ್ಲೇ 'ತಿವಿದ' ಚೆಲುವರಾಯಸ್ವಾಮಿ
ಬೆಂಗಳೂರು, ಸೆ 15: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಟೀಕಿಸುವ ಪರಿಪಾಠವನ್ನು, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚೆಲುವರಾಯಸ್ವಾಮಿ ಮುಂದುವರಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ, ಒಕ್ಕಲಿಗರ ಸಂಘ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಿತ್ತು. " ನನಗೆ ಆಮಂತ್ರಣವಿರಲಿಲ್ಲ" ಎಂದು ಕುಮಾರಸ್ವಾಮಿ ಇದರಲ್ಲಿ ಭಾಗವಹಿಸಿರಲಿಲ್ಲ.
ಮಂಡ್ಯದಲ್ಲಿ ಗೌಡ್ರ ಗದ್ದಲ ಜೋರು: ಅವನೊಬ್ಬ ರಾಜಕೀಯ ವ್ಯಭಿಚಾರಿ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೆಲುವರಾಯಸ್ವಾಮಿ, " ಆಮಂತ್ರಣ ನೀಡಿ ಕರೆಯಲು ಅದೇನು ಬೀಗರ ಊಟವೇ" ಎಂದು ಲೇವಡಿ ಮಾಡಿದ್ದಾರೆ.
" ಸಮುದಾಯದ ಹೋರಾಟಕ್ಕೆ ನೈತಿಕ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ" ಎಂದು ಚೆಲುವರಾಯಸ್ವಾಮಿ, ಕುಮಾರಸ್ವಾಮಿಯವರ ಕಾಲೆಳೆದಿದ್ದಾರೆ.
" ಪ್ರತಿಭಟನೆಯಲ್ಲಿ ಭಾಗವಹಿಸಲು ನಮಗೂ ಆಹ್ವಾನವಿರಲಿಲ್ಲ. ಆದರೆ, ಒಗ್ಗಟ್ಟು ಎದುರಿಸಬೇಕಾಗಿರುವ ಈ ಸಮಯದಲ್ಲಿ ಪ್ರತಿಷ್ಠೆ ಒಳ್ಲೆಯದಲ್ಲ" ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ನಲ್ಲೂ "ಸಮಾನ ಮನಸ್ಕ ಅತೃಪ್ತ ಶಾಸಕರು": 2ನೇ ವಿಕೆಟ್ ಡೌನ್?
" ಕುಮಾರಸ್ವಾಮಿಯವರ ಸರಕಾರವನ್ನು ಉಳಿಸಲು, ಡಿಕೆಶಿ ಎಷ್ಟೆಲ್ಲಾ ಪ್ರಯತ್ನ ಪಟ್ಟಿದ್ದರು ಎನ್ನುವುದನ್ನು ನಾವು ಮರೆಯಬಾರದು" ಎಂದು ಚೆಲುವರಾಯಸ್ವಾಮಿ, ಕುಮಾರಸ್ವಾಮಿಯವರ ವಿರುದ್ದ ಕಿಡಿಕಾರಿದ್ದಾರೆ.