ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರಿಗೆ 'ಈಡಿಯಟ್‌' ಎಂದ ಕಾಂಗ್ರೆಸ್‌ ಮುಖಂಡ

By Nayana
|
Google Oneindia Kannada News

ಬೆಂಗಳೂರು, ಜು.5: ಬೆಂಗಳೂರು ಸಂಚಾರ ಪೊಲೀಸರಿಗೆ ಕಾಂಗ್ರೆಸ್‌ ಮುಖಂಡರೊಬ್ಬರು ಈಡಿಯೆಟ್‌ ಎಂದು ಕರೆದು೮ ಮನಬಂದಂತೆ ನಿಂದಿಸಿರುವ ಘಟನೆ ಗುರುವಾರ ಬೆಂಗಳೂರಿನಲ್ಲಿ ನಡೆದಿದೆ.

ಕಾಂಗ್ರೆಸ್‌ ಮುಖಂಡ ಪಿ.ಎನ್‌ ಕೃಷ್ಣಮೂರ್ತಿ ಹಾಗೂ ಟ್ರಾಫಿಕ್‌ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ. ಕಾರು ನಿಲ್ಲಿಸಿರುವ ವಿಚಾರವಾಗಿ ವಾಗ್ವಾದ ನಡೆದಿದ್ದು, ಗಲಾಟೆ ಮಾಡಿದ್ದಲ್ಲದೆ ಮನಬಂದಂತೆ ನಿಂದಿಸಿದ್ದಾರೆ. ಟ್ರಾಫಿಕ್‌ ಪೊಲೀಸರು ಬೇರೊಂದು ವಾಹನಕ್ಕೆ ಫೈನ್‌ ಹಾಕುತ್ತೇನೆ ನಿಮಗಲ್ಲ ಸಾರ್‌ ಹೊರಡಿ ಎಂದು ಹೇಳಿದರೂ ಕೂಡ ನಾನು ಯಾರೆಂದು ನಿನಗೆ ಗೊತ್ತಿಲ್ಲ ಈಡಿಯಟ್‌ ಎಂದು ಹೇಳಿದ್ದಾರೆ.

ವೈರಲ್ ವೀಡಿಯೋ: ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದ ಟ್ರಾಫಿಕ್ ಪೊಲೀಸರುವೈರಲ್ ವೀಡಿಯೋ: ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದ ಟ್ರಾಫಿಕ್ ಪೊಲೀಸರು

ವಾಹನ ನಿಲ್ಲಿಸಿರುವುದರಿಂದ ಟ್ರಾಫಿಕ್‌ ಜಾಮ್ ಆಗುತ್ತದೆ ಎಂದು ಮನವಿ ಮಾಡಿಕೊಂಡರೂ ಕೂಡ ಕಾರನ್ನು ಅಲ್ಲಿಯೇ ನಿಲ್ಲಿಸಿ ಮನಬಂದಂತೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಯಾವುದೋ ಪಕ್ಷದ ಮುಖಂಡ ಎಂದ ಮಾತ್ರಕ್ಕೆ ಯಾರ ಮೇಲಾದರೂ ಅಧಿಕಾರ ಚಲಾಯಿಸಬಹುದು ಎನ್ನುವ ಅಹಂಕಾರವನ್ನು ಹೊಂದಿದ್ದಾರೆ.

Congress leader calls policeman an idiot

ಎಲ್ಲರಿಗೂ ಅವರವರ ಕರ್ತವ್ಯ ಮುಖ್ಯವಾಗಿರುತ್ತದೆ ಒಬ್ಬರ ಕರ್ತವ್ಯವನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ, ಪೊಲೀಸರು ಅವರ ಕರ್ತವ್ಯವನ್ನು ನಿಭಾಯಿಸಿದ್ದಾರೆ, ಕಾಂಗ್ರೆಸ್‌ ಮುಖಂಡನ ಮಾತುಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

English summary
Congress leader PN Krishnamurthy argues with a traffic policeman in Bengaluru, calls the policeman an 'idiot' and says 'You don't know who you are speaking to.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X