ಜಾರಕಿಹೊಳಿ ಮನೆಗೆ ಅತೃಪ್ತ ಶಾಸಕರ ದೌಡು, ರಾಜೀನಾಮೆ ಮುನ್ಸೂಚನೆಯೇ?
Recommended Video
ಬೆಂಗಳೂರು, ಮಾರ್ಚ್ 5: ಕಾಂಗ್ರೆಸ್ನ ಅತೃಪ್ತ ಶಾಸಕರು ಎನ್ನಲಾದ ಬಳ್ಳಾರಿ ಶಾಸಕ ನಾಗೇಂದ್ರ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಇದೀಗ ರಮೇಶ್ ಜಾರಕಿಹೊಳಿ ಮನೆಗೆ ತೆರಳಿದ್ದು ಕಾಂಗ್ರೆಸ್ಗೆ ತಲೆ ನೋವು ಆರಂಭವಾಗಿದೆ.
ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜೀನಾಮೆ, ಮಾ.6 ರಂದು ಬಿಜೆಪಿಗೆ
ಕಳೆದ ಒಂದೆರೆಡು ತಿಂಗಳಿನಿಂದ ಕಾಂಗ್ರೆಸ್ನ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಇದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿದೆ ಇನ್ನೊಂದೆಡೆ ಜೆಡಿಎಸ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿಶ್ಚಿಂತೆಯಿಂದಿದೆ.
ಅತೃಪ್ತ ಶಾಸಕರ ರಾಜೀನಾಮೆ ತಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್
ಇದೀಗ ಕಾಂಗ್ರೆಸ್ನ ಅತೃಪ್ತ ಶಾಸಕರುಗಳ ಪೈಕಿ ಒಬ್ಬರಾದ ಡಾ. ಉಮೇಶ್ ಜಾಧವ್ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮಾರ್ಚ್ 6ರಂದು ಬಿಜೆಪಿ ಸೇರಲಿದ್ದಾರೆ ಎನ್ನುವ ವಿಷಯ ಉನ್ನತ ಮೂಲಗಳಿಂದ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲೇ ಕಾಂಗ್ರೆಸ್ನ ಉಳಿದ ಶಾಸಕರೂ ಕೂಡ ಕಾಂಗ್ರೆಸ್ ತೊರೆಯಲು ಚಿಂತನೆ ನಡೆಸಿದಂತಿದೆ. ಹೀಗಾಗಿ ಮೂರು ಶಾಸಕರು ಸಭೆ ನಡೆಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಬ್ಬರು ಅತೃಪ್ತ ಶಾಸಕರು ಕಾಂಗ್ರೆಸ್ನಿಂದ ಅಮಾನತು?
ಕಾಂಗ್ರೆಸ್ ತನ್ನ 5-6 ಶಾಸಕರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಕಾಂಗ್ರೆಸ್ ತಲೆ ಕೆಡಿಸಿಕೊಂಡು ಕುಳಿತಿದ್ದರೆ ಜೆಡಿಎಸ್ ತನಗೇನು ಸಂಬಂಧವೇ ಇಲ್ಲ ಎನ್ನುವ ಹಾಗೆ ನಿಮ್ಮ ಶಾಸಕರನ್ನು ನೀವೇ ನೋಡಿಕೊಳ್ಳಿ ಎನ್ನುವಂತೆ ಸುಮ್ಮನಿದೆ.