ಬಿಜೆಪಿ ಜಾಹೀರಾತಿನ ವಿರುದ್ಧ ಕಾಂಗ್ರೆಸ್ ಕಿಡಿ, ಆಯೋಗಕ್ಕೆ ದೂರು
ಬಿಜೆಪಿಯು ಸುದ್ದಿ ಮಾಧ್ಯಮಗಳಿಗೆ ನೀಡಿರುವವ ಜಾಹೀರಾತೊಂದರ ಬಗ್ಗೆ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬಿಜೆಪಿಯು ನೀಡಿರುವ ಜಾಹೀರಾತು ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಜೊತೆಗೆ ವೈಯಕ್ತಿಕ ತೇಜೋವಧೆ ಮಾಡುವ ಅಂಶಗಳನ್ನು ಅದು ಒಳಗೊಂಡಿದೆ ಎಂದು ಕಾಂಗ್ರೆಸ್ ದೂರು ದಾಖಲಿಸಿದೆ.
Complaint filed to the Election Commission against PM Narendra Modi and BJP State Unit regarding malicious and misleading information shown by them in various Newspapers and TV channels. pic.twitter.com/mvj6zjKZMP
— Karnataka Congress (@INCKarnataka) April 26, 2018
ಬಿಜೆಪಿ ನೀಡಿರುವ ಜಾಹೀರಾತಿನಲ್ಲಿ ಮುಖ್ಯಮಂತ್ರಿಗಳನ್ನು ಹೋಲುವ ವ್ಯಕ್ತಿಯೊಬ್ಬರು ಕೆಲವರಿಗೆ ಉಡುಗೊರೆಗಳನ್ನು ನೀಡುತ್ತಿರುವಂತೆ ಚಿತ್ರಿಸಲಾಗಿದೆ. ಇದು ಕಾಂಗ್ರೆಸ್ ಅನ್ನು ಕೆರಳಿಸಿದೆ. ಆ ಜಾಹೀರಾತಿನಲ್ಲಿ ಹ್ಯಾಬ್ಲೋಟ್ ವಾಚಿನ ಉಲ್ಲೇಖವೂ ಇದೆ.
ಕಾಂಗ್ರೆಸ್ ಪರ ಪ್ರಚಾರ: ಅರವಿಂದ ಮಾಲಗತ್ತಿ, ಮಹೇಶಚಂದ್ರ ಗುರು ಅಮಾನತು
ವಿ.ಎಸ್.ಉಗ್ರಪ್ಪ ಮತ್ತು ತಂಡ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆಯೋಗದ ಪೂರ್ಣ ಪೀಠವು ಇಂದು ವಿಚಾರಣೆ ನಡೆಸಲಿದೆ. ದೂರಿನ ಪ್ರತಿಯನ್ನು ಕಾಂಗ್ರೆಸ್ ಪಕ್ಷವು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.