ಕಾಂಗ್ರೆಸ್ಸಿನ ನಿಲೇಕಣಿಗೆ ಅನಂತಕುಮಾರ್ ತಿರುಗೇಟು
ಬೆಂಗಳೂರು, ಮಾರ್ಚ್ 18- 'ಅನಂತ ಕುಮಾರ್ ವೀಕ್ ಸಿಚುಯೇಶನಿನಲ್ಲಿದ್ದಾರೆ. ಅವರೇಕೆ ಯಾವಾಗಲೂ ನರೇಂದ್ರ ಮೋದಿಯ ಹೆಸರನ್ನೇ ಜಪಿಸುತ್ತಿದ್ದಾರೆ? ಸ್ವಂತವಾಗಿ ತಮ್ಮ ಬಗ್ಗೆ ಮತ್ತು ತಾವು ಕೈಗೊಂಡಿದ್ದಾರೆನ್ನಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಸ್ತಾಪಿಸುವುದೇ ಇಲ್ಲ' ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರು ತಮ್ಮ ಪ್ರತಿಸ್ಪರ್ಧಿ ಅನಂತಕುಮಾರ್ ಬಗ್ಗೆ ನೀಡಿದ್ದ ಹೇಳಿಕೆಗೆ ಅನಂತಕುಮಾರ್ ತಿರುಗೇಟು ನೀಡಿದ್ದಾರೆ.
'ಕಾಂಗ್ರೆಸ್ಸಿನ
high
profile
candidate
ನಂದನ್
ನಿಲೇಕಣಿ
ಅವರು
ಪ್ರಚಾರದ
ವೇಳೆ
ಯಾಕೆ
ಅಪ್ಪಿತಪ್ಪಿಯೂ
ಸೋನಿಯಾ
ಗಾಂಧಿ/
ರಾಹುಲ್
ಗಾಂಧಿ
ಹೆಸರು
ಎತ್ತುವುದಿಲ್ಲ.
ಕೊನೆಗೆ
ಕೈಯೆತ್ತಿ
ಪಕ್ಷದ
ಚಿಹ್ನೆಯನ್ನೂ
ತೋರಿಸಲೂ
ಅವರು
ಹಿಂಜರಿಯುತ್ತಿದ್ದಾರೆ,
ಏಕೆ?'
ಎಂದು
ಬಿಜೆಪಿ
ಪ್ರಧಾನ
ಕಾರ್ಯದರ್ಶಿ
ಅನಂತಕುಮಾರ್
ಅವರು
ಮಾರ್ಮಿಕವಾಗಿ
ನಿಲೇಕಣಿ
ಅವರನ್ನು
ವಿಚಾರಿಸಿಕೊಂಡಿದ್ದಾರೆ.
'ಅದೇ ನಾನು ನನ್ನ ನಾಯಕರಾದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಪಕ್ಷದ ಹೆಸರು- ಕಮಲದ ಚಿಹ್ನೆ ಬಗ್ಗೆ ನಾನು ಹೆಮ್ಮೆಯಿಂದ ಹೇಳುತ್ತೇನೆ. ಪದೇ ಪದೇ ಅವರ ಹೆಸರುಗಳನ್ನು ಜಪಿಸುತ್ತೇನೆ. ಅದು ನನಗೆ ಗೌರವ ಕೊಡುತ್ತದೆ' ಎಂದು ಅನಂತಕುಮಾರ್ ಹೇಳಿದ್ದಾರೆ. (ಅನಂತಕುಮಾರ್ ದುರ್ಬಲ ಪರಿಸ್ಥಿತಿಯಲ್ಲಿದ್ದಾರೆ- ನಿಲೇಕಣಿ)
'ನಂದನ್ ನಿಲೇಕಣಿ ಅವರ 18 ದಿನಗಳ ಕ್ಷೇತ್ರದ ಪ್ರೀತಿ ಮತ್ತು 18 ವರ್ಷಗಳ ಕಾಲ ನನ್ನ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾರರು ಚೆನ್ನಾಗಿ ಬಲ್ಲರು. ಅದನ್ನು ಮತದಾನ ವೇಳೆ ಸಾಬೀತು ಮಾಡಲಿದ್ದಾರೆ' ಎಂದು ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೇಳಿದ್ದಾರೆ.