ಹೆಗಲ ಮೇಲೆ ಕೈ ಹಾಕಿದ ಸಿದ್ದುಗೆ ಕಮಲ್ ಕೊಟ್ಟ ಉತ್ತರವೇನು?
Recommended Video
ಬೆಂಗಳೂರು, ಮೇ 24: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟ ರಚಿಸಿಕೊಂಡು ಅಧಿಕಾರ ಸ್ಥಾಪಿಸಿದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಯೂನಿವರ್ಸಲ್ ಸ್ಟಾರ್,ಮಕ್ಕಲ್ ನೀದಿ ಮೈಯಂನ ಅಧಿನಾಯಕ ಕಮಲ್ ಹಾಸನ್ ಅವರು ಕೂಡಾ ಬಂದಿದ್ದರು.
ಎಚ್ ಡಿ ಕುಮಾರಸ್ವಾಮಿ ಅವರು 25ನೇ ಮುಖ್ಯಮಂತ್ರಿಯಾಗಿ, ಜಿ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಬುಧವಾರದಂದು ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಚಿತ್ರಗಳು : ಶಕ್ತಿಸೌಧದ ಮುಂದೆ ಕುಮಾರಣ್ಣ ಪದಗ್ರಹಣ
ಈ ಸಮಾರಂಭಕ್ಕೆ ದೇಶದ ವಿವಿಧೆಡೆಯಿಂದ ಗಣ್ಯಾತಿಗಣ್ಯರು ಆಗಮಿಸಿದ್ದರು. ಕಮಲ್ ಹಾಸನ್ ಅವರು ಕೂಡಾ ಆಗಮಿಸಿ, ರಾಜ್ಯದ ಕಾಂಗ್ರೆಸ್ ನಾಯಕರ ಜತೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಉಭಯ ಕುಶಲೋಪರಿ ನಡೆಸಿದ್ದರ ಬಗ್ಗೆ ಹಾಸ್ಯದ ಧಾಟಿಯಲ್ಲಿ ಒಂದು ಟ್ವೀಟ್ ಗಮನಸೆಳೆಯುತ್ತದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸ್ನೇಹ ಕಾಪಾಡಿಕೊಳ್ಳಬೇಕು ಎನ್ನುವ ಕಮಲ್ ಹಾಸನ್ ಅವರು ಇತ್ತೀಚಿಗೆ ಸುಪ್ರೀಂಕೋರ್ಟ್ ನಿಂದ ತೀರ್ಪನ್ನು ಒಪ್ಪದೆ, ನೈಸರ್ಗಿಕ ಸಂಪತ್ತು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕು, ಈ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಟ್ರಾಲ್ಸ್ : ಕನ್ನಡಿಗರ ಸರ್ಕಾರ, ಕುಮಾರಣ್ಣ ಸಿಎಂ
ಏನ್ಲಾ ಬಡ್ಡೈದ್ನೇ ಪಂಚೆ ಗಿಂಚೆ ಉಟ್ಗ ಬಂದ್ಬುಟ್ಟಿದಯೀ? ಪ್ಯಾಂಟೇನಾದೋ?
— ಖಡಕ್ ಕಮಲಜ್ಜಿ (@KamalammaKhadak) May 24, 2018
ತಿರು ಚಿತ್ತರಾಮಯ್ಯ ಅವರ್ಹಳೆ, ಎನ್ನುಡೈಯ ವೀಟ್ಟಿಲ್ ತುಣಿಹಳೈ ಕಳುವುದರ್ಕು ನೀರಿಲ್ಲಾಮ ಪೋಹಿರದು. ಅಪ್ಪೇರ್ಪಟ್ಟ ನಿಲೈಮೈ ಉಂಡಾಹಿಯದು. ಅದನಾಲ್ ನೀಂಗ ತಿರುಕುಮರನ್ ಅವರ್ಹಳುಕ್ಕು ಶೊಲ್ಲಿ ಕಾವಿರಿಯೈ ನಮಕ್ಕು ಸೊಂದಮಾಕ್ಕಿ ವಿಡವೇಂಡುಮೆನ್ರು ಕೇಟ್ಟುಕ್ಕೊಳ್ಹಿರೇನ್. pic.twitter.com/Rp5FBtIHyr
ಸದ್ಯ ಈ ಟ್ವೀಟ್ ನಲ್ಲಿ ಸಿದ್ದರಾಮಯ್ಯ ಅವರು ಕಮಲ್ ಹೆಗಲಮೇಲೆ ಕೈಹಾಕಿ ಮಾತನಾಡಿಸುತ್ತಿರುವ ಚಿತ್ರವಿದೆ. ಪಂಚೆ ಉಟ್ಟುಕೊಂಡು ಬಂದಿದ್ದೇಕೆ? ಎಂದು ತಮ್ಮ ಶೈಲಿಯಲ್ಲಿ ಕಮಲ್ ರನ್ನು ಪ್ರಶ್ನಿಸುತ್ತಾರೆ.
ಮನಸೂರೆಗೊಂಡ ಸೋನಿಯಾ-ಮಾಯಾವತಿ ಫೋಟೋ
ಇದಕ್ಕೆ ಅಚ್ಚತಮಿಳಿನಲ್ಲಿ ಉತ್ತರಿಸುವ ಕಮಲ್, ಶ್ರೀಸಿದ್ದರಾಮಯ್ಯ ಅವರೇ, ನಮ್ಮ ಮನೆಯಲ್ಲಿ ಬಟ್ಟೆ ತೊಳೆಯುವುದಕ್ಕೆ ನೀರಿಲ್ಲದ್ದಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ.ಹಾಗಾಗಿ, ನೀವು ಶ್ರೀಕುಮಾರ್ (ಕುಮಾರಸ್ವಾಮಿ) ಅವರಿಗೆ ಹೇಳಿ, ಕಾವೇರಿಯನ್ನು ನಮಗೆ ಸ್ವಂತವಾಗಿ ಬಿಡಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಎಂದು ಕಾಲ್ಪನಿಕವಾಗಿ ಟ್ವೀಟ್ ಮಾಡಲಾಗಿದೆ. ಓದಿ ಆನಂದಿಸಿ