ಸಮ್ಮಿಶ್ರ ಸರ್ಕಾರದ ಕನಿಷ್ಠ ಕಾರ್ಯಕ್ರಮ ಜೂನ್ 29ರಂದು ಪ್ರಕಟ
ಬೆಂಗಳೂರು, ಜೂನ್ 25: ರಾಜ್ಯ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜೂನ್ 29ರಂದು ಅಂತಿಮಗೊಳ್ಳಲಿದ್ದು ಅದೇ ದಿನ ಪ್ರಕಟಿಸುವುದಾಗಿ ಕನಿಷ್ಠ ಸಾಮಾನ್ಯ ಕಾರ್ಯಕ್ರಮ ಕರಡು ಸಮಿತಿ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ತಿಳಿಸಿದ್ದಾರೆ.
ಜಟಾಪಟಿಗೆ ಸಾಕ್ಷಿಯಾದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಮೊದಲ ಸಭೆ!
ಸೋಮವಾರ ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ನಡೆದ ಕನಿಷ್ಠ ಸಾಮಾನ್ಯ ಕಾರ್ಯಕ್ರಮ ಕರಡು ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಿತಿ ಎರಡು ಬಾರಿ ಚರ್ಚಿಸಿದೆ ಮೂರನೇ ಸಭೆ ಜೂನ್ 29ರಂದು ನಡೆಯಲಿದೆ. ಅದೇ ದಿನ ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ಪ್ರಕಟಿಸಲಾಗುವುದು ಎಂದರು.
ಸಾಲಮನ್ನಾ ಸೇರಿ ಜೆಡಿಎಸ್ಮ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳ ಬಗ್ಗೆ ಚರ್ಚೆ ನಡೆಸಿದ್ದೇವೆ, ಎರಡನೇ ಕರಡು ಬಗ್ಗೆ ಇಂದು ಚರ್ಚೆಯಾಗಿದೆ. ಎರಡು ಪಕ್ಷಗಳ ಪ್ರಣಾಳಿಕೆಗಳ ಸಾಮಾನ್ಯವಾದ ಕಾರ್ಯಕ್ರಮಗಳ ಚರ್ಚೆಯಾಗಿದೆ. ಸಭೆ ನಡೆಸಿ ಸಮನ್ವಯ ಸಮಿತಿಗೆ ವರದಿ ನೀಡುತ್ತೇವೆ ರೈತರ ಸಾಲಮನ್ನಾಕ್ಕೆ ನಮ್ಮ ಮೊದಲ ಆದ್ಯತೆ ಇರುತ್ತದೆ ಎಂದರು.