ಡಾ. ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕಾಲ ಕೂಡಿ ಬಂತು
ಬೆಂಗಳೂರು, ಡಿ. 24: ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಿಸುವುದು ಯಾವಾಗ...? ಇದು ವಿಷ್ಣು ಅಭಿಮಾನಿಗಳು ಬಹುದಿನಗಳಿಂದ ಕೇಳುತ್ತಿದ್ದ ಪ್ರಶ್ನೆ.
ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಿ. 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಂಗಳವಾರ ಭಾರತೀ ವಿಷ್ಣುವರ್ಧನ್ ಸುದ್ದಿಗೋಷ್ಠಿ ಕರೆದು ಈ ಕುರಿತು ತಿಳಿಸಿದ್ದಾರೆ. ವಿಷ್ಣುವರ್ಧನ್ ಪುಣ್ಯ ಸ್ಮರಣೆ ಅಂಗವಾಗಿ ಅಂದು ಅಭಿಮಾನ್ ಸ್ಟುಡಿಯೋದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರೋಗ್ಯ ತಪಾಸಣೆ ಶಿಬಿರವನ್ನೂ ನಡೆಸಲಾಗುವುದು ಎಂದು ತಿಳಿಸಿದರು. [ವಿಷ್ಮು ಪ್ರೀತಿ, ಸ್ನೇಹ ನನ್ನ ಜೀವಮಾನದ ಸಾಧನೆ]
ಸಾಹಸಸಿಂಹ ಕಾಮಿಕ್ ಪುಸ್ತಕ : ನಟ ಅನಿರುದ್ಧ ಮಾತನಾಡಿ, ಈ ವರ್ಷ 2ನೇ ಸಾಹಸಸಿಂಹ ಕಾಮಿಕ್ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಮನೋರಂಜನೆಯ ಜೊತೆ ನೈತಿಕ ಪಾಠವೂ ಸಿಗಲಿದೆ ಎಂದರು. [ಡಾ. ರಾಜ್ ನಂತರ ಯಾರು : ಹೈ ಕೋರ್ಟ್]
ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ಈಗ ಎರಡು ಎಕರೆ ಭೂಮಿ ಸಿಕ್ಕಿದೆ. ಇನ್ನೂ ಮೂರು ಎಕರೆ ಭೂಮಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಅನಿರುದ್ಧ ವಿವರಿಸಿದರು. [ಡಾ. ವಿಷ್ಣು ಸ್ಮಾರಕಕ್ಕೆ ಸರ್ಕಾರದಿಂದ ಭೂಮಿ ಹಸ್ತಾಂತರ]
ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ಒಂದು ಭಾಗವಾಗಿ ಸ್ಮಾರಕದ ಕಾರ್ಯಚಟುವಟಿಕೆಗಳು ನಡೆಯಲಿವೆ ಎಂದು ಅನಿರುದ್ಧ ತಿಳಿಸಿದ್ದಾರೆ.