ಬಿಬಿಎಂಪಿ ಕೋರ್ಟ್ನಿಂದ ಹೇಳಿಸಿಕೊಳ್ಳಬಾರದು: ಸಿಎಂ ವಾರ್ನಿಂಗ್
Recommended Video
ಬೆಂಗಳೂರು, ಸೆ.26: ಬಿಬಿಎಂಪಿಯು ಹೈಕೋರ್ಟ್ನಿಂದ ಹೇಳಿಸಿಕೊಂಡು ಕೆಲಸ ಮಾಡಬಾರದು ತನ್ನ ಕರ್ತವ್ಯವನ್ನು ತಾನೇ ಅರಿತು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಸ್ವಚ್ಛತೆಯನ್ನು ಕಾಪಾಡಲು ಫ್ಲೆಕ್ಸ್, ಬ್ಯಾನರ್ ತೆರವು , ಜನರ ಪ್ರಾಣವನ್ನು ಉಳಿಸಲು ರಸ್ತೆಗುಂಡಿ ಭರ್ತಿ ಕಾರ್ಯವೇ ಆಗಿರಲಿ ಇದು ಬಿಬಿಎಂಪಿಯ ಕೆಲಸ ಅದನ್ನು ಕೋರ್ಟ್ ನಿಂದ ಹೇಳಿಕೊಂಡು ಮಾಡಬಾರದಿತ್ತು ತಾವಾಗಿಯೇ ಮಾಡಿದ್ದರೆ ಜನರ ಪ್ರಶಂಸೆಗೆ ಪಾತ್ರವಾಗುತ್ತಿತ್ತು ಎಂದು ಅಭಿಪ್ರಾಯ ಪಟ್ಟರು.
ಸೆ.24ರೊಳಗೆ ಗುಂಡಿ ಮುಕ್ತ ಬೆಂಗಳೂರು: ಹೈಕೋರ್ಟ್ ಡೆಡ್ ಲೈನ್
ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು, ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡು ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿದರು.
ಬಿಬಿಎಂಪಿ ಶಾಲೆಯ ಗುಣಮಟ್ಟದ ವಿಚಾರ ಕುರಿತು ಮಾತನಾಡಿದ ಅವರು, ಬಿಬಿಎಂಪಿ ಶಾಲೆಗಳಿಗೆ ಸಧ್ಯದಲ್ಲೇ ಬೇಟಿ ನೀಡುತ್ತೇವೆ, ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುತ್ತೇವೆ, ಈ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಕೊಡಲು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ 500 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಇನ್ನೆರಡು ದಿನ ಮುಂದುವರಿಯುವ ಸೂಚನೆ
ಬಸ್ ಪ್ರಯಾಣ ದರ ಏರಿಕೆ ವಿಚಾರದ ಕರಿತು ಮಾತನಾಡಿದ ಅವರು, ದರ ಏರಿಕೆ ಪ್ರಸ್ತಾವನೆಗೆ ನಾನೇ ತಡೆ ನೀಡಿದ್ದೇನೆ, ಜನ ಸಾಮಾನ್ಯರಿಗೆ ಹೊರೆ ಆಗದಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.