ಸಿದ್ದರಾಮಯ್ಯರಿಂದ ಪತ್ರಕರ್ತರಿಗೆ ವ್ಯಾಕರಣ ಪಾಠ
ಬೆಂಗಳೂರು, ನವೆಂಬರ್ 18: ಸಿಎಂ ಗೃಹಕಚೇರಿಯಲ್ಲಿ ಪಕ್ಷದ ಸದಸ್ಯರೊಂದಿಗೆ ಚರ್ಚೆ ನಡೆಯಬೇಕಾದರೆ ಸಿಎಂ ಕನ್ನಡದ ಪಾಠ ಮಾಡಿದ್ದಾರೆ.
ಹಿಂದಿನ ಸರ್ಕಾರದವರಿಗೆ ಜ್ಞಾನ ಇರಲಿಲ್ಲ ಹಾಗಾಗಿ ಯಾವುದೇ ತೀರ್ಮಾನವನ್ನು ಸರಿಯಾಗಿ ತಗೆದುಕೊಳ್ಳುತ್ತಿರಲಿಲ್ಲ ಎಂದು ಪಕ್ಷದ ಸದಸ್ಯರು ಮಾತನಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.[ಆ ಮಸೀದಿ ಮುಂದೆ ಸಿಎಂ ಸಿದ್ದು ಹೋಗಿದ್ದೇಕೆ?]
ಎಲ್ಲರಿಗೂ ಸಾಮಾನ್ಯವಾಗಿ ಜ್ಞಾನ ಇದ್ದೇ ಇರುತ್ತದೆ ಜ್ಞಾನ ಉದಯವಾಗ ಬೇಕು ಅಷ್ಟೇ ಅದು ಉದಯವಾದಾಗ ಒಳ್ಳೆ ಕೆಲಸಗಳಾಗುತ್ತವೆ ಎಂದಿದ್ದಾರೆ.[ನೋಟು ಸಮಸ್ಯೆ: ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ]
ಜ್ಞಾನ+ ಉದಯ= ಜ್ಞಾನೋದಯ ಎಂದು ಸಿಎಂ ಹೇಳುತ್ತಿದ್ದಂತೆ ಪಕ್ಷದ ಸದಸ್ಯರೆಲ್ಲರು ನಗೆಗಡಲಲ್ಲಿ ಮಿಂದರು.
ಇದರ ಮಧ್ಯೆ ಪತ್ರಕರ್ತರೊಬ್ಬರು ಸವರ್ಣ ದೀರ್ಘ ಸಂಧಿ ಎಂದು ಹೇಳಿದಾಗ, ನ ಕಾರಕ್ಕೆ ಉಕಾರ ಆದೇಶವಾಗಿ ಬಂದಾಗ ಗುಣ ಸಂಧಿಯಾಗುತ್ತದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಪಕ್ಕದಲ್ಲಿಯೆ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಎಲ್ಲ ಸದಸ್ಯರು ಕಿರುನಗೆ ಬೀರಿದರು.