ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ ಕುಮಾರಸ್ವಾಮಿ

|
Google Oneindia Kannada News

Recommended Video

ಯಡಿಯೂರಪ್ಪ ಮೇಲೆ ಆಡಿಯೋ ಬಾಂಬ್ ಎಸೆದ ಕುಮಾರಣ್ಣ!

ಬೆಂಗಳೂರು, ಫೆಬ್ರವರಿ 8: ಗುರುಮಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರನ್ನು ಬಿಜೆಪಿಗೆ ಸೆಳೆಯಲು ಮುಂದಾಗಿದ್ದ ಬಿಎಸ್‌ಯಡಿಯೂರಪ್ಪ ಅವರ ಸಂಭಾಷಣೆ ಇರುವ ಆಡಿಯೋವನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.

ಅಂದಾಜು 40 ನಿಮಿಷಗಳ ಅವಧಿಯ ಆಡಿಯೋ ಕ್ಲಿಪ್​ ಅನ್ನು ಬಿಡುಗಡೆ ಮಾಡಿದರು. ಗುರುಮಟ್ಕಲ್​ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಕಂದಕೂರು ​ಈ ಆಡಿಯೋ ಕ್ಲಿಪ್​ ಅನ್ನು ರೆಕಾರ್ಡ್​ ಮಾಡಿಕೊಂಡು ತಮಗೆ ಕೊಟ್ಟಿದ್ದಾಗಿ ಕುಮಾರಸ್ವಾಮಿ ಹೇಳಿದರು.

ನೀನು ನನ್ನ ಮಗ ವಿಜಯೇಂದ್ರ ಇದ್ದಂತೆಯೇ ಎಂದು ಹೇಳುತ್ತಾ ಬಿಎಸ್ ಯಡಿಯೂರಪ್ಪ ಹಣದ ಆಮಿಷವನ್ನು ಒಡ್ಡಲು ಪ್ರಯತ್ನ ಮಾಡಿದ್ದಾರೆ, ಆದರೆ ಶರಣಗೌಡ ಅವರು ನನಗೆ ಕಾಲ್ ಮಾಡಿದ್ದರಿಂದ ಎಲ್ಲವನ್ನೂ ನಾನೇ ರೆಕಾರ್ಡ್ ಮಾಡಿದ್ದೇನೆ ಎಂದು ಎಚ್‌ಡಿಕೆ ವಿವರಿಸಿದ್ದಾರೆ.

ಕರ್ನಾಟಕದ ರೈತರ ಸಾಲಮನ್ನಾ ಕುರಿತು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಪ್ಪು ಮಾಹಿತಿ ನೀಡಿದ್ದಾರೆ, ಸಭೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ವಿಧಾನಸಭೆ ಅಧಿವೇಶನ LIVE:ಕೆಲವೇ ಕ್ಷಣಗಳಲ್ಲಿ ಸ್ಫೋಟಕ ಆಡಿಯೋ ರಿಲೀಸ್!ವಿಧಾನಸಭೆ ಅಧಿವೇಶನ LIVE:ಕೆಲವೇ ಕ್ಷಣಗಳಲ್ಲಿ ಸ್ಫೋಟಕ ಆಡಿಯೋ ರಿಲೀಸ್!

ರೈತರ ಸಾಲಮನ್ನಾ ಬಗ್ಗೆ ಪ್ರಧಾನಿ ತಪ್ಪು ಮಾಹಿತಿ ನೀಡಿದ್ದಾರೆ, ರಾಷ್ಟ್ರೀಯ ಪತ್ರಿಕೆಗಳಲ್ಲಿ ಈ ಕುರಿತು ಜಾಹೀರಾತು ಕೂಡ ನೀಡಿದ್ದೇನೆ, ಎಲ್ಲಿಯವರೆಗೆ ಸಾಲ ಮನ್ನಾ ಮಾಡಲಾಗಿದೆ, ಯೋಜನೆ ಯಾವ ಹಂತಕ್ಕೆ ಬಂದು ತಲುಪಿದೆ ಎಲ್ಲದರ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಆದರೂ ತಪ್ಪು ಸಂದೇಶ ರವಾನಿಸಿದ್ದಾರೆ.

CM hdk released BJPs Operation Audio

ಕಳೆದ ಎರಡು ಮೂರು ದಿನಗಳಲ್ಲಿ 2 ಸಾವಿರ ಕೋಟಿರಾಷ್ಟ್ರೀಯ ಬ್ಯಾಂಕ್‌ಗಳ ಸಾಲ ಮನ್ನಾ, 1500 ಕೋಟಿ ಸ್ವಸಹಾಯ ಸಾಲಮನ್ನಾ ಮಾಡಲಾಗಿದೆ ಇದೆಲ್ಲದರ ಬಗ್ಗೆ ಮಾಹಿತಿ ನೀಡಿದ್ದೇವೆ ಆದರೂ ಕೂಡ ಸಾಲಮನ್ನಾ ಮಾಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಪ್ರಜಾಪ್ರಭುತ್ವವನ್ನು ಕಾಪಾಡುವ ಇವರೇ ಪ್ರಜಾಪ್ರಭುತ್ವವನ್ನು ನಾಶಮಾಡುತ್ತಿದ್ದಾರೆ.

English summary
CM HD kumaraswamy alleged that PM Narendra modi is misleading the parliament and nation with wrong information about farmer loan waive off.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X