ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಬಜೆಟ್‌ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?

|
Google Oneindia Kannada News

ಬೆಂಗಳೂರು,ಫೆಬ್ರವರಿ27: ಈ ಸಾಲಿನ ರಾಜ್ಯ ಬಜೆಟ್‌ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತಾಡಿದ್ದಾರೆ.

Recommended Video

ಕುಟಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ CM | Yediyurappa | Oneindia Kannada

ರಾಜ್ಯದ ಜನತೆ ಸಂಕಷ್ಟಗಳಿಂದ ದೂರವಾಗಿ ಉತ್ತಮವಾದ ಬದುಕು ನಡೆಸಬೇಕೆಂಬುದೇ ನನ್ನ ಬಯಕೆಯಾಗಿದೆ, ಈ ನಿಟ್ಟಿನಲ್ಲಿ ಉತ್ತಮ ಬಜೆಟ್ ಕೊಡುವುದು ನನ್ನ ಕರ್ತವ್ಯ ಎಂದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ 79ನೇ ಜನ್ಮದಿನ, ಅಭಿಮಾನಿಗಳಿಂದ ಅಭಿನಂದನೆಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ 79ನೇ ಜನ್ಮದಿನ, ಅಭಿಮಾನಿಗಳಿಂದ ಅಭಿನಂದನೆ

ಈ ಬಾರಿ ರಾಜ್ಯದ ಜನತೆಗೆ ಉತ್ತಮ ಬಜೆಟ್ ಕೊಡುತ್ತೇನೆ, ಬೇಕಾದ ಸೌಲಭ್ಯ ಒದಗಿಸುವುದೇ ನನ್ನ ಗುರಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.ಅವರು ಇಂದು ತಮ್ಮ 79ನೇ ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಹೆಸರಿನಲ್ಲಿ ಪೂಜೆ ಮಾಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

CM BS Yediyurappa Promises To Give Good Budget To The State

ಇನ್ನು ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಸಹ ತಮ್ಮ ಮನೆಯ ಯಜಮಾನನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಅವರ ಕುಟುಂಬಸ್ಥರು ಚಾಮುಂಡೇಶ್ವರಿ ಪ್ರಸಾದವನ್ನು ತಂದು ಆರತಿ ಬೆಳಗಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿ ಬಿ ಎಸ್ ಯಡಿಯೂರಪ್ಪನವರಿಗೆ ಶುಭ ಕೋರಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಬಿಜೆಪಿಯಲ್ಲಿರುವ ಅನುಭವಿ ನಾಯಕರುಗಳಲ್ಲಿ ಯಡಿಯೂರಪ್ಪನವರು ಪ್ರಮುಖರು. ಅವರು ತಮ್ಮ ಜೀವನವನ್ನು ರೈತರು ಮತ್ತು ಬಡವರ ಏಳಿಗೆಗೆ ಮುಡುಪಾಗಿಟ್ಟವರು. ಅವರಿಗೆ ದೇವರು ದೀರ್ಘ ಆಯುರಾರೋಗ್ಯ ನೀಡಲಿ ಎಂದು ಆಶಿಸಿದ್ದಾರೆ.

English summary
Chief Minister BS Yediyurappa Promises To People Of Karnataka To Give Good Budget .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X