ಮೆಹದಿ ಪ್ರಕರಣ: ಟ್ವಿಟ್ಟರ್ ಇಂಡಿಯಾಗೆ ನೋಟಿಸ್
ಬೆಂಗಳೂರು, ಡಿ. 15: ಶಂಕಿತ ಟ್ವಿಟ್ಟರ್ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ನ @ShamiWitness ಖಾತೆಯ ಟ್ವೀಟ್ಗಳಿಗೆ ಸಂಬಂಧಿಸಿದ ವಿವರಗಳೊಂದಿಗೆ ಖುದ್ದು ಹಾಜರಾಗಬೇಕೆಂದು ಟ್ವಿಟ್ಟರ್ ಭಾರತ ಮುಖ್ಯಸ್ಥರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಟ್ವಿಟ್ಟರ್ ಕಂಪನಿ ಭಾರತ ಮುಖ್ಯಸ್ಥರಿಗೆ Criminal Procedure Code ನ 91ನೇ ಪರಿಚ್ಛೇದದಡಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಉಪ ಆಯುಕ್ತ ಅಭಿಷೇಕ ಗೋಯಲ್ ನೋಟಿಸ್ ಜಾರಿ ಮಾಡಿದ್ದಾರೆ. [ಮೆಹದಿ ಬಂಧನ : ಟಾಪ್ ಟೆನ್ ಬೆಳವಣಿಗೆ]
"ಪ್ರಕರಣ ಕುರಿತು ವಿವರ ನೀಡುವಂತೆ ಟ್ವಿಟ್ಟರ್ ಇಂಡಿಯಾಕ್ಕೆ ಐದು ದಿನಗಳ ಹಿಂದೆಯೇ ಸೂಚಿಸಲಾಗಿತ್ತು. ಆದರೆ, ಅವರು ಸೂಕ್ತವಾಗಿ ಸ್ಪಂದಿಸಿಲ್ಲ. ಆದ್ದರಿಂದ ನೋಟಿಸ್ ನೀಡುವುದು ಅನಿವಾರ್ಯವಾಯಿತು" ಎಂದು ಅಭಿಷೇಕ ಗೋಯಲ್ ತಿಳಿಸಿದ್ದಾರೆ. [ಮೆಹದಿ ಸಿಕ್ಕಿಬಿದ್ದಿದ್ದು ಹೇಗೆ?]
ಆದರೆ, ಟ್ವಿಟ್ಟರ್ ಇಂಡಿಯಾದಿಂದ ಎಂತಹ ಮಾಹಿತಿಗಳನ್ನು ಪಡೆಯಲಾಗುತ್ತದೆ ಎಂಬುದರ ಕುರಿತು ವಿವರ ನೀಡಲು ಅವರು ನಿರಾಕರಿಸಿದ್ದಾರೆ. [ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ?]